Category: State Govt Jobs

Karnataka Govt Jobs News in Kannada, Job news in kannada, employment news, kpsc update, karnataka police recruitment, bmtc driver jobs, ksrtc driver conductor jobs, gramapanchayiti jobs, bengaluru jobs, mysuru jobs, mangaluru jobs, hassan jobs, jobs in karnataka, jobs near me, ಕರ್ನಾಟಕ ಉದ್ಯೋಗ ವಾರ್ತೆ, ಕೆಪಿಎಸ್‌ಸಿ, ಸರಕಾರಿ ಉದ್ಯೋಗ, ಕನ್ನಡ ಉದ್ಯೋಗಾವಕಾಶ, ಉದ್ಯೋಗ ಮಾಹಿತಿ, ಜಾಬ್‌ ಸುದ್ದಿಗಳು

  • ಉದ್ಯೋಗಿ ಮೊದಲು ಗ್ರಾಚ್ಯುಟಿ ನಿಯಮಗಳಿಂದ ಅಚಲ ಆರ್ಥಿಕ ಪ್ರಯೋಜನ ಖಾತರಿ

    ಬೆಂಗಳೂರು,  ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು-2024 ಕರ್ನಾಟಕದಲ್ಲಿ ಉದ್ಯೋಗಿಗಳಿಗೆ ವರ್ಧಿತ ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ. ಕಂಪನಿಯು ಹಣಕಾಸಿನ ಸವಾಲುಗಳನ್ನು ಎದುರಿಸಿ, ಉದ್ಯೋಗಿಗಳಿಗೆ ಅವರ ಗ್ರಾಚ್ಯುಟಿ ಬದ್ಧತೆಗಳನ್ನು ಪೂರೈಸಲು ಸಾಧ್ಯವಾಗದ ಸಂದರ್ಭಗಳಲ್ಲಿ, ಗ್ರಾಚ್ಯುಟಿ ವಿಮೆಯು ನಿರ್ಣಾಯಕ ರಕ್ಷಣಾತ್ಮಕ ಹೆಜ್ಜೆ ಎನಿಸುತ್ತದೆ.

    ಸಂಭಾವ್ಯ ಇತಿಮಿತಿಗಳನ್ನು ಒಪ್ಪಿಕೊಂಡು, ಕಂಪನಿಗಳು ಗ್ರಾಚ್ಯುಟಿ ವಿಮೆಯನ್ನು ಹೊಂದಿರುವುದು ಈಗ ಕಡ್ಡಾಯವಾಗಿದೆ, ಕಂಪನಿಯು ನಷ್ಟದಿಂದ ಬಳಲುತ್ತಿದ್ದರೂ ಸಹ, ಉದ್ಯೋಗಿಗಳ ಗ್ರಾಚ್ಯುಟಿ ಸುರಕ್ಷಿತವಾಗಿದೆ ಎನ್ನುವುದನ್ನು ಇದು ಖಚಿತಪಡಿಸುತ್ತದೆ. ಮೂಲಭೂತವಾಗಿ, ಇದು ಉದ್ಯೋಗಿ-ಕೇಂದ್ರಿತ ನೀತಿಗಳಲ್ಲಿ ಪ್ರಮುಖ ಕ್ಷಣವನ್ನು ಗುರುತಿಸುತ್ತದೆ, ಸವಾಲಿನ ಸಮಯದಲ್ಲೂ ಸಹ ಉದ್ಯೋಗಿಗಳ ಸಮರ್ಪಣೆ ಮತ್ತು ನಿಷ್ಠೆಯನ್ನು ಆರ್ಥಿಕ ಭದ್ರತೆಯೊಂದಿಗೆ ಪೂರೈಸಲಾಗುತ್ತದೆ ಎನ್ನುವುದನ್ನು ಖಚಿತಪಡಿಸುತ್ತದೆ.

    ಪಾಲಿಸಿಬಜಾರ್‍ನ ವಹಿವಾಟು ಮುಖ್ಯಸ್ಥರಾದ ಶ್ರೀ ಸಜ್ಜಾ ಪ್ರವೀಣ್ ಚೌಧರಿ ಹೇಳುವಂತೆ, “ನಾವು ಗ್ರಾಚ್ಯುಟಿ ಪಾವತಿಗಳ ವಿಕಾಸಶೀಲ ಪರಿಸರದಲ್ಲಿ ಮುನ್ನಡೆಯುತ್ತಿರುವಾಗ, ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು- 2024, ಉದ್ಯೋಗದಾತ-ಉದ್ಯೋಗಿಗಳ ಸಂಬಂಧಕ್ಕೆ ಹೊಸ ದೃಷ್ಟಿಕೋನವನ್ನು ತರುತ್ತದೆ. ಸಂಸ್ಥೆಗೆ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳನ್ನು ಬದ್ಧರಾಗಿರುವ ಉದ್ಯೋಗಿಗಳ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ, ಈ ನಿಯಮಗಳು ಸಂಭಾವ್ಯ ಅನ್ಯಾಯಗಳ ವಿರುದ್ಧ ಸುರಕ್ಷೆಯಾಗಿ ಕಾರ್ಯನಿರ್ವಹಿಸುತ್ತವೆ. ಉದ್ಯೋಗಿಯ ರಾಜೀನಾಮೆಯ ಸಂದರ್ಭದಲ್ಲಿ, ಗ್ರಾಚ್ಯುಟಿಯ ಅರ್ಹತೆಯು ಅವರ ಆರ್ಥಿಕ ಯೋಗಕ್ಷೇಮದ ನಿರ್ಣಾಯಕ ಅಂಶವಾಗಿದೆ. ಉದ್ಯೋಗದಾತನು ತನ್ನ ಉದ್ಯೋಗಿಗಳಿಗೆ ಅವನ/ಅವಳ ಜೇಬಿನಿಂದ ಗ್ರಾಚ್ಯುಟಿಯನ್ನು ಪಾವತಿಸಬಹುದು ಅಥವಾ ವಿಮಾ ಕಂಪನಿಯಿಂದ ಗುಂಪು ಗ್ರಾಚ್ಯುಟಿ ಯೋಜನೆಯನ್ನು ತೆಗೆದುಕೊಳ್ಳಬಹುದು. ಈ ಶಾಸನವು ನೌಕರರು ಗ್ರಾಚ್ಯುಟಿಯ ಮೂಲಕ ತಮ್ಮ ದೀರ್ಘಾವಧಿಯ ಸೇವೆಗಾಗಿ ಗುರುತಿಸಲ್ಪಡುತ್ತಾರೆ ಎನ್ನುವುದನ್ನು ಖಚಿತಪಡಿಸುವ ಜತೆಗೆ ಅವರ ಕುಟುಂಬಗಳು ತೆರಿಗೆ ಪರಿಣಾಮಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ ಹಣಕಾಸಿನ ಬೆಂಬಲವನ್ನು ಪಡೆಯಲು ಸಹಕಾರಿಯಾಗಿದೆ. ಇದು ಹಣಕಾಸು ಯೋಜನೆ, ತೆರಿಗೆ ಮತ್ತು ಉದ್ಯೋಗಿ ಕಲ್ಯಾಣದ ಗಮನಾರ್ಹ ಅಂಶವಾಗಿದೆ. ಈ ನಿಯಮಗಳು ಉದ್ಯೋಗಿಗಳನ್ನು ಸಬಲೀಕರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ, ಸಂಸ್ಥೆಗೆ ಅವರ ಸಮರ್ಪಣೆ ಮತ್ತು ಸೇವೆಯು ಅವರ ಅರ್ಹ ಆರ್ಥಿಕ ಮನ್ನಣೆಯನ್ನು ಖಾತರಿಪಡಿಸುತ್ತದೆ”
    ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು 2024 ಉದ್ಯೋಗಿಗಳಿಗೆ ಗ್ರಾಚ್ಯುಟಿ ಪಾವತಿಗಳ ಪ್ರಕ್ರಿಯೆಯನ್ನು ಸುಗಮಗೊಳಿಸಲು, ಹೆಚ್ಚಿನ ರಕ್ಷಣೆ ಮತ್ತು ಪ್ರಯೋಜನಗಳನ್ನು ಒದಗಿಸುವ ಸಮಗ್ರ ಚೌಕಟ್ಟನ್ನು ರೂಪಿಸಿದೆ. ನಿಯಮಗಳು ಅಗತ್ಯ ಪದಗಳಿಗೆ ಸ್ಪಷ್ಟವಾದ ವ್ಯಾಖ್ಯಾನಗಳನ್ನು ಒದಗಿಸುತ್ತವೆ, ಅವುಗಳ ವ್ಯಾಖ್ಯಾನದಲ್ಲಿ ಸ್ಪಷ್ಟತೆ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುತ್ತದೆ. 1972 ರ ಗ್ರಾಚ್ಯುಟಿ ಕಾಯ್ದೆ ಮತ್ತು ಇತರ ಸಂಬಂಧಿತ ಕಾಯಿದೆಗಳ ಪಾವತಿಯಂತಹ ಅಸ್ತಿತ್ವದಲ್ಲಿರುವ ಶಾಸನಗಳೊಂದಿಗೆ ವ್ಯಾಖ್ಯಾನಗಳು ಹೊಂದಾಣಿಕೆಯಾಗುತ್ತವೆ.

    ಉದ್ಯೋಗದಾತರು ನಿಗದಿತ ಸಮಯದೊಳಗೆ ಮಾನ್ಯವಾದ ವಿಮಾ ಪಾಲಿಸಿಯನ್ನು ಪಡೆಯಬೇಕು, ಅರ್ಹ ಉದ್ಯೋಗಿಗಳಿಗೆ ಸಕಾಲಿಕ ಮತ್ತು ಸುರಕ್ಷಿತ ಗ್ರಾಚ್ಯುಟಿ ಪಾವತಿಗಳನ್ನು ಖಾತ್ರಿಪಡಿಸಿಕೊಳ್ಳಬೇಕು. ನಿಯಮಗಳು ವಿಮಾ ಪೂರೈಕೆದಾರರನ್ನು ಆಯ್ಕೆಮಾಡುವ ಮಾನದಂಡಗಳನ್ನು ನಿರ್ದಿಷ್ಟಪಡಿಸುತ್ತವೆ ಮತ್ತು ಪ್ರೀಮಿಯಂ ಪಾವತಿಗಳು ಮತ್ತು ಪಾಲಿಸಿ ನವೀಕರಣಗಳಲ್ಲಿ ಶ್ರದ್ಧೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ. ಗ್ರಾಚ್ಯುಟಿ ಪಾವತಿ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ನೇಮಕಗೊಂಡ ನಿಯಂತ್ರಣ ಪ್ರಾಧಿಕಾರವು, ವಿವಾದಗಳ ಸಂದರ್ಭದಲ್ಲಿ ವಿಮಾ ಕಂಪನಿಗಳಿಂದ ಗ್ರಾಚ್ಯುಟಿ ಮೊತ್ತವನ್ನು ಮರುಪಡೆಯಲು ಅಧಿಕಾರವನ್ನು ಹೊಂದಿದೆ, ಕ್ಲೈಮ್‍ಗಳ ಇತ್ಯರ್ಥಕ್ಕೆ ದೃಢವಾದ ಕಾರ್ಯವಿಧಾನವನ್ನು ಖಾತ್ರಿಪಡಿಸುತ್ತದೆ.
    ಕರ್ನಾಟಕದಲ್ಲಿ ಕಡ್ಡಾಯ ಗ್ರಾಚ್ಯುಟಿ ವಿಮಾ ನಿಯಮಗಳು, 2024 ರ ಪರಿಚಯವು ಉದ್ಯೋಗಿಗಳ ಆರ್ಥಿಕ ಯೋಗಕ್ಷೇಮವನ್ನು ಕಾಪಾಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ನಿಯಮಗಳು ರಚನಾತ್ಮಕ ಮತ್ತು ಜವಾಬ್ದಾರಿಯುತ ಚೌಕಟ್ಟನ್ನು ರಚಿಸುತ್ತವೆ, ನ್ಯಾಯೋಚಿತ ಮತ್ತು ಪರಿಣಾಮಕಾರಿ ಗ್ರಾಚ್ಯುಟಿ ವಿತರಣೆಗಳನ್ನು ಉತ್ತೇಜಿಸುತ್ತವೆ.

  • ಹೋಟೆಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಕರಿಯರ್‌: ಏನಿದು ಹೋಟೆಲ್‌ ಮ್ಯಾನೇಜ್‌ಮೆಂಟ್‌, ಈ ಕೋರ್ಸ್‌ ಕಲಿತವರಿಗೆ ಉದ್ಯೋಗಾವಕಾಶ

    ಹೋಟೆಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಕರಿಯರ್‌: ಏನಿದು ಹೋಟೆಲ್‌ ಮ್ಯಾನೇಜ್‌ಮೆಂಟ್‌, ಈ ಕೋರ್ಸ್‌ ಕಲಿತವರಿಗೆ ಉದ್ಯೋಗಾವಕಾಶ

    ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಲೆಲ್ಲ ಇಂದು ಹೋಟೆಲ್‌ ಉದ್ಯಮವು ಅತ್ಯಂತ ಜನಪ್ರಿಯ ಕರಿಯರ್‌ ಕ್ಷೇತ್ರ. ಮೊದಲೆಲ್ಲ ಹೋಟೆಲ್‌ ಉದ್ಯೋಗವೆಂದರೆ ತಾತ್ಸರದಿಂದ ಜನರು ನೋಡುತ್ತಿದ್ದರು. ಆದರೆ, ಈಗ ಹೋಟೆಲ್‌ ಕ್ಷೇತ್ರದ ಅಗಾಧ ಅವಕಾಶ ನೋಡಿ ಅದಕ್ಕೆ ಸಂಬಂಧಪಟ್ಟ ಕೋರ್ಸ್‌ಗಳನ್ನು ಕಲಿಯಲು ಹೆಚ್ಚಿನವರು ಆದ್ಯತೆ ನೀಡುತ್ತಿದ್ದಾರೆ.

    ಏನಿದು ಹೋಟೆಲ್‌ ಮ್ಯಾನೇಜ್‌ಮೆಂಟ್‌?


    ಹೋಟೆಲ್‌ ಮ್ಯಾನೇಜ್‌ಮೆಂಟ್‌ ಎನ್ನುವುದು ಆತಿಥ್ಯ ವಲಯದ ಒಂದು ಭಾಗ. ಅತಿಥಿಗಳಿಗೆ ಬೋರ್ಡಿಂಗ್‌ ಮತ್ತು ಲಾಡ್ಜಿಂಗ್‌ ಸೇವೆ ನೀಡುವ ವಿಭಾಗ ಇದಾಗಿದೆ. ವಿವಿಧ ಹೋಟೆಲ್‌ಗಳು ತಾವು ನೀಡುವ ಸೇವೆಗಳಿಗೆ ಮತ್ತು ಐಷಾರಾಮ್ಯಕ್ಕೆ ತಕ್ಕಂತೆ ಐದು ಸ್ಟಾರ್‌ವರೆಗೆ ವಿವಿಧ ಗ್ರೇಡ್‌ಗಳನ್ನು ಹೊಂದಿವೆ. ಸಾಮಾನ್ಯ ಪಂಚತಾರ ಹೋಟೆಲ್‌ನಲ್ಲಿ ಮುಖ್ಯವಾಗಿ 4 ಪ್ರಮುಖ ವಿಭಾಗಗಳು ಇವೆ. 1. ಫ್ರಂಟ್‌ ಆಫೀಸ್‌ ಅಥವಾ ರಿಸೆಲ್ಷನ್‌. 2. ಹೌಸ್‌ಕೀಪಿಂಗ್‌. 3. ಆಹಾರ ಮತ್ತು ಪಾನೀಯ ಸೇವೆಗಳು. 4. ಕಿಚನ್‌ ಅಥವಾ ಅಡುಗಮನೆ. ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಈ ನಾಲ್ಕು ವಿಭಾಗಗಳ ಕುರಿತು ಪ್ರಮುಖವಾಗಿ ಕಲಿಯುತ್ತಾರೆ. ಈ ನಾಲ್ಕು ವಿಭಾಗಗಳು ಹೇಗೆ ಒಂದಕ್ಕೊಂದು ಸಂಬಂಧ ಹೊಂದಿವೆ ಮತ್ತು ಹೇಗೆ ಜೊತೆಯಾಗಿ ಕೆಲಸ ಮಾಡಬೇಕು ಎನ್ನುವುದನ್ನೂ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮುಗಿಸಿದ ಬಳಿಕ ವಿದ್ಯಾರ್ಥಿಗಳು ಈ ನಾಲ್ಕು ವಿಭಾಗಗಳಲ್ಲಿ ಯಾವ ವಿಭಾಗದಲ್ಲಿ ಕರಿಯರ್‌ ರೂಪಿಸಿಕೊಳ್ಳಬೇಕು ಎಂದು ಯೋಚಿಸಿ ಆ ವಿಭಾಗದ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
    ಹೋಟೆಲಿಗರು ಏನು ಮಾಡುತ್ತಾರೆ?
    ಮೇಲೆ ತಿಳಿಸಿದ ನಾಲ್ಕು ವಿಭಾಗಗಳನ್ನು ನಿರ್ವಹಣೆ ಮಾಡುವುದು ಹೋಟೆಲಿಗರ (ಹೋಟೆಲಿಯರ್‌) ಕೆಲಸ. ಅಂದರೆ, ಹೌಸ್‌ಕೀಪಿಂಗ್‌ನಿಂದ ಕಿಚನ್‌ವರೆಗೆ ಎಲ್ಲವನ್ನೂ ನೋಡಿಕೊಳ್ಳಬೇಕು. ಒಟ್ಟಾರೆ ಹೋಟೆಲ್‌ನ ಕಾರ್ಯನಿರ್ವಹಣೆ ಸರಾಗವಾಗಿ ನಡೆಯುವಂತೆ ಇವರು ನೋಡಿಕೊಳ್ಳಬೇಕು. ಅಂದರೆ, ಅತಿಥಿಯನ್ನು ಸ್ವಾಗತಿಸುವುದರಿಂದ ಹಿಡಿದು, ರೆಸ್ಟೂರೆಂಟ್‌ನಲ್ಲಿ ಆಹಾರ ಮತ್ತು ಪಾನೀಯ ಸರಬರಾಜು ಮಾಡುವುದು, ಅತಿಥಿಯ ಕೊಠಡಿಯನ್ನು ಸ್ವಚ್ಛವಾಗಿ ಮತ್ತು ಆಹ್ಲಾದಕರವಾಗಿ ಇಡುವುದು ಸೇರಿದಂತೆ ಹೋಟೆಲ್‌ನ ಸಮಸ್ತ ವಿಭಾಗದ ಕುರಿತು ಕಾಳಜಿ ವಹಿಸುವುದು ಹೋಟೆಲಿಯರ್‌ ಕೆಲಸವಾಗಿದೆ.

    ಯಾಕೆ ಈ ಕರಿಯರ್‌?
    ಭಾರತದಲ್ಲಿ ಹೋಟೆಲ್‌ ಉದ್ಯಮವು ವೇಗವಾಗಿ ಪ್ರಗತಿ ಕಾಣುತ್ತಿದೆ. ಇದರಿಂದ ಈ ವಿಭಾಗದಲ್ಲಿ ಕೆಲಸ ಮಾಡಲು ಬಯಸುವವರಿಗೆ ಹೆಚ್ಚಿನ ಅವಕಾಶ ಸೃಷ್ಟಿಯಾಗುತ್ತಿದೆ. ಈ ಪ್ರಗತಿಯು ದೇಶದ ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೆ ಹೋಟೆಲ್‌ ಉದ್ಯಮಕ್ಕೂ ಸಾಕಷ್ಟು ಕೊಡುಗೆಯನ್ನು ನೀಡುತ್ತಿದೆ.
    ಹೋಟೆಲ್‌ ಮ್ಯಾನೇಜ್‌ಮೆಂಟ್‌ ವ್ಯಾಪ್ತಿ

    • ಫ್ರಂಟ್‌ ಆಫೀಸ್‌
    • ಹೌಸ್‌ ಕೀಪಿಂಗ್‌
    • ಆಹಾರ ಮತ್ತು ಪಾನೀಯ
    • ಕಿಚನ್‌
    • ಮಾರ್ಕೆಟಿಂಗ್‌
    • ಫೈನಾನ್ಸ್‌
    • ಖರೀದಿ
      ಫ್ರಂಟ್‌ ಆಫೀಸ್‌ ಪ್ರಮುಖವಾಗಿ ಅತಿಥಿಗಳು ಮತ್ತು ಚೆಕ್‌ಇನ್‌ ಪ್ರಕ್ರಿಯೆಯ ಕುರಿತು ಗಮನ ನೀಡುತ್ತದೆ. ಹೋಟೆಲ್‌ ನಿರ್ವಹಣೆ ಮತ್ತು ಸ್ವಚ್ಛತೆಯ ಉಸ್ತುವಾರಿಯನ್ನು ಹೌಸ್‌ ಕೀಪಿಂಗ್‌ ವಿಭಾಗ ನೀಡಿಕೊಳ್ಳುತ್ತದೆ. ಎಫ್‌ಆಂಡ್‌ಬಿ ವಿಭಾಗವು ಆಹಾರ ಮತ್ತು ಪಾನೀಯಗಳ ಸೇವೆಯನ್ನು ನೋಡಿಕೊಳ್ಳುತ್ತದೆ. ಆಹಾರ ಸಿದ್ಧಪಡಿಸುವುದು ಕಿಚನ್‌ ವಿಭಾಗದ ಕೆಲಸ.

    ಹೇಗಿದೆ ಬೇಡಿಕೆ
    ಸ್ಟಾಸಿಸ್ಟ ಅಂಕಿಅಂಶದ ಪ್ರಕಾರ ಭಾರತದ ಹೋಟೆಲ್‌ ಉದ್ಯಮವು 2015ರಲ್ಲಿ 700 ಕೋಟಿ ಡಾಲರ್‌ನಷ್ಟು ಬೆಳೆದಿತ್ತು. 2020ರ ವೇಳೆಗೆ ಇದು 1300 ಕೋಟಿ ಡಾಲರ್‌ಗೆ ತಲುಪುವ ನಿರೀಕ್ಷೆ ಇದೆ ಎಂದು ನೌಕ್ರಿ.ಕಾಂ ಹೇಳಿದೆ. ಇದೇ ಕಾರಣಕ್ಕೆ ಈಗಿನ ಯುವ ಜನತೆ ಹೋಟೆಲ್‌ ಉದ್ಯಮಕ್ಕೆ ಸಂಬಂಧಪಟ್ಟ ಕೋರ್ಸ್‌ಗಳನ್ನು ಕಲಿಯಲು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.

    ಗುಣ ಮತ್ತು ಅವಗುಣ
    ಗುಣಗಳು: ಸ್ಪಷ್ಟ ಕರಿಯರ್‌ ಹಾದಿಯಾಗಿದೆ. ಜಗತ್ತಿನೆಲ್ಲೆಡೆ ಬರುವ ಜನರೊಂದಿಗೆ ಮಾತುಕತೆ ನಡೆಸಬಹುದು. ಬೋರ್‌ ಹೊಡೆಸುವ ಡೆಸ್ಕ್‌ ಉದ್ಯೋಗದಂತೆ ಅಲ್ಲ. ಕಲಿಯುವ ಅವಕಾಶ ಹೆಚ್ಚಿರುತ್ತದೆ.
    ಅವಗುಣಗಳು: ಕೆಲಸದ ಅವಧಿ ಸುದೀರ್ಘವಾದದ್ದು. ಡೆಸ್ಕ್‌ ಜಾಬ್‌ನಂತೆ 8 ಗಂಟೆಯಲ್ಲಿ ಮುಗಿಯದು. ದೈಹಿಕ ಶ್ರಮ ಬೇಡುತ್ತದೆ. ಹಬ್ಬದ ದಿನಗಳಲ್ಲಿ ರಜೆ ಸಿಗದು. ಕೆಲಸವು ಒತ್ತಡದಿಂದ ಕೂಡಿರುತ್ತದೆ.
    ಹೊರಗಿನಿಂದ ನೋಡಲು ಹೋಟೆಲ್‌ಗಳು ಗ್ಲಾಮರ್‌ ಆಗಿ, ಲಗ್ಷುರಿಯಾಗಿ ಕಾಣಿಸಬಹುದು. ಆದರೆ, ಆ ಹೋಟೆಲ್‌ಗಳಲ್ಲಿ ಕೆಲಸ ಮಾಡುವವರ ಬದುಕು ಅಷ್ಟು ಗ್ಲಾಮರಸ್‌ ಆಗಿರುವುದಿಲ್ಲ. ಕೆಲಸದ ಪಾಳಿ ಹೆಚ್ಚಿರುತ್ತದೆ, ಮುಂಜಾನೆ ಶಿಫ್ಟ್‌ ಇರುತ್ತದೆ. ಶ್ರಮ ಬೇಡುವ ಕೆಲಸ ಮಾಡಬೇಕಾಗುತ್ತದೆ. ದೀಪಾವಳಿ, ಕ್ರಿಸ್‌ಮಸ್‌ಗೆ ರಜೆ ಕೇಳುವಂತೆ ಇರುವುದಿಲ್ಲ. ಯಾಕೆಂದರೆ, ಇಂತಹ ಹಬ್ಬ ಹರಿದಿನಗಳ ಸಮಯದಲ್ಲಿಯೇ ಹೋಟೆಲ್‌ಗೆ ಆಗಮಿಸುವ ಗ್ರಾಹಕರ ಸಂಖ್ಯೆ ಹೆಚ್ಚಿರುತ್ತದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿವು ಹೋಟೆಲ್‌ ಉದ್ಯಮವನ್ನು ನಿಮ್ಮ ಕರಿಯರ್‌ ಆಗಿ ಆಯ್ಕೆ ಮಾಡಿಕೊಳ್ಳಬಹುದು.
    ಆದರೆ, ಡೆಸ್ಕ್‌ ಕೆಲಸ ಬಯಸದವರಿಗೆ ಹೋಟೆಲ್‌ ಕೆಲಸ ತುಂಬಾ ಆನಂದದಾಯಕವಾಗಿರುತ್ತದೆ. ಪ್ರತಿದಿನ ಆಗಮಿಸುವ ಅತಿಥಿಗಳೊಂದಿಗೆ ಮಾತನಾಡಬಹುದು (ನೀವು ಸವೀರ್ಸ್‌ ಮಾಡುವ ಉದ್ಯೋಗಿಯಾಗಿದ್ದರೆ ಅಥವಾ ಫ್ರಂಟ್‌ ಡೆಸ್ಕ್‌ನಲ್ಲಿದ್ದರೆ). ಹೊಸ ಹೊಸ ಅತಿಥಿಗಳು ಆಗಮಿಸುವುದರಿಂದ ಪ್ರತಿದಿನವೂ ಕೆಲಸವು ಹೊಸ ಸವಾಲುಗಳನ್ನು ಹೊಂದಿರುತ್ತದೆ. ಹೀಗಾಗಿ, ಪ್ರತಿದಿನ ಕೆಲಸ ಬೋರ್‌ ಹೊಡೆಸದು. ಇಂತಹ ಹಲವು ಸಕಾರಾತ್ಮಕ ಅಂಶಗಳು ಹೋಟೆಲ್‌ ಮ್ಯಾನೇಜ್‌ಮೆಂಟ್‌ ಉದ್ಯೋಗದಲ್ಲಿದೆ.

    ಏನು ಓದಿರಬೇಕು?
    ಏನೂ ಓದದೆಯೂ ಪಂಚತಾರ ಹೋಟೆಲ್‌ಗಳನ್ನು ಕಟ್ಟಿದವರು ಇದ್ದಾರೆ. ನೀವು ಹೋಟೆಲ್‌ ಉದ್ಯಮದಲ್ಲಿ ಉದ್ಯೋಗ ಮಾಡಲು ಹೋಟೆಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಬಿಎ ಅಥವಾ ಬಿಎಸ್ಸಿ ಅಥವಾ ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಬಹುದು. ಕರ್ನಾಟಕ ಸೇರಿದಂತೆ ದೇಶಾದ್ಯಂತ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳನ್ನು ಕಲಿಸುವ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಇವೆ. ಕೆಲವು ಸಂಸ್ಥೆಗಳು ದುಬಾರಿ ಶುಲ್ಕ ಪಡೆಯಬಹುದು. ಯಾವುದೇ ಕಾಲೇಜು ಆಯ್ಕೆ ಮಾಡಿಕೊಳ್ಳುವ ಮೊದಲು ಅಲ್ಲಿ ನೀಡುವ ಕೋರ್ಸ್‌ಗಳ ಕುರಿತು ಮತ್ತು ಶಿಕ್ಷಣದ ಗುಣಮಟ್ಟದ ಕುರಿತು ತಿಳಿದುಕೊಳ್ಳಿ. ಈ ಕೋರ್ಸ್‌ ಕಲಿತರೆ ಹೋಟೆಲ್‌ನಲ್ಲಿ ಫ್ರಂಟ್‌ ಡೆಸ್ಕ್‌, ಕಿಚನ್‌, ಆಹಾರ ಮತ್ತು ಪಾನೀಯ, ಅಡುಗೆಮನೆ ಕೆಲಸ ಮಾತ್ರವಲ್ಲದೆ ವಿಮಾನಯಾನ ಕಂಪನಿಗಳು, ರೈಲ್ವೆ, ಆರೋಗ್ಯ ಸೇವಾ ಸಂಸ್ಥೆಗಳು ಸೇರಿದಂತೆ ಇತರ ಕಡೆಗಳಲ್ಲಿಯೂ ಉದ್ಯೋಗ ಪಡೆಯಬಹುದಾಗಿದೆ.


    ವಿವಿಧ ಪದವಿಗಳು
    ಬಿಎಚ್‌ಎಂ: ಆಹಾರ ತಯಾರಿಕೆ, ಬೇಕರಿ, ಆಹಾರ ಮತ್ತು ಪಾನೀಯ, ಹೌಸ್‌ ಕೀಪಿಂಗ್‌, ಫೆಸಿಲಿಟಿ ಪ್ಲ್ಯಾನಿಂಗ್‌, ಫ್ರಂಟ್‌ ಆಫೀಸ್‌ ಇತ್ಯಾದಿ ವಿಭಾಗಗಳಲ್ಲಿ ಉದ್ಯೋಗ ಪಡೆಯಬಹುದು.
    ಬಿಎಚ್‌ಎಂಸಿಡಿ: ನ್ಯೂಟ್ರಿಷಿಯನ್‌, ಫ್ರಂಟ್‌ ಆಫೀಸ್‌, ಆಹಾರ ಸಿದ್ಧಪಡಿಸುವಿಕೆ, ಹೌಸ್‌ ಕೀಪಿಂಗ್‌, ಕಮ್ಯುನಿಕೇಷನ್‌ ಇತ್ಯಾದಿ ವಿಭಾಗಗಳಲ್ಲಿ ಉದ್ಯೋಗ ಪಡೆಯಬಹುದು.
    ಎಚ್‌ಎಚ್‌ಎಂನಲ್ಲಿ ಬಿಎಸ್ಸಿ: ಫುಡ್‌ ಪ್ರೊಡಕ್ಷನ್‌, ಫ್ರಂಟ್‌ ಆಫೀಸ್‌, ಬೇಕರಿ, ಹೌಸ್‌ ಕೀಪಿಂಗ್‌, ಕಮ್ಯುನಿಕೇಷನ್‌ ವಿಭಾಗಗಳಲ್ಲಿ ಕೆಲಸ ಮಾಡಬಹುದು.


    ವಿವಿಧ ಹುದ್ದೆಗಳು
    ಸ್ಟಿವರ್ಡ್ಸ್: ರೆಸ್ಟೂರೆಂಟ್‌ಗಳಲ್ಲಿ ಮತ್ತು ಕೊಠಡಿಯೊಳಗೆ ಅತಿಥಿಗಳಿಗೆ ಆಹಾರ, ಪಾನೀಯ ಸರ್ವ್‌ ಮಾಡುವುದು ಮತ್ತು ಅಟೆಂಡ್‌ ಮಾಡುವುದು.
    ಫ್ರಂಟ್‌ ಆಫೀಸ್‌ ಅಟೆಂಡೆಂಟ್‌: ರಿಸೆಪ್ಷನ್‌ ವಿಭಾಗದಲ್ಲಿ ಅತಿಥಿಗಳೊಂದಿಗೆ ಸಂವಹನ ನಡೆಸುವುದು. ಚೆಕ್‌ ಇನ್‌ ಪ್ರಕ್ರಿಯೆಯಲ್ಲಿ ಅವರಿಗೆ ಸಹಾಯ ಮಾಡುವುದು.
    ಹೌಸ್‌ಕೀಪಿಂಗ್‌ ಅಟೆಂಡೆಂಟ್‌: ಲಾಬೀಗಳು, ಕಾರಿಡಾರ್‌ಗಳು ಮತ್ತು ಅತಿಥಿಯ ಕೊಠಡಿಗಳನ್ನು ಸ್ವಚ್ಛಗೊಳಿಸುವುದು.
    ಅಡುಗೆ ಸಹಾಯಕ: ಹೋಟೆಲ್‌ ಅಡುಗೆಯವರಿಗೆ (ಶೆಫ್‌) ಆಹಾರ, ಬಫೆಟ್‌ ಇತ್ಯಾದಿಗಳನ್ನು ಸಿದ್ಧಪಡಿಸಲು ಸಹಾಯ ಮಾಡುವುದು.
    ಇವೆಲ್ಲ ಆರಂಭಿಕ ಹುದ್ದೆಗಳು. ಹೆಚ್ಚು ಅನುಭವ, ಶಿಕ್ಷಣ ಪಡೆದಂತೆ ನೀವು ಫ್ರಂಟ್‌ ಆಫೀಸ್‌ ಮ್ಯಾನೇಜರ್‌, ಎಫ್‌ಆ್ಯಂಡ್‌ಬಿ ಮ್ಯಾನೇಜರ್‌, ಹೌಸ್‌ಕೀಪಿಂಗ್‌ ಮ್ಯಾನೇಜರ್‌, ಶೆಫ್‌ ಇತ್ಯಾದಿ ಹುದ್ದೆಗಳನ್ನೂ ಪಡೆಯಬಹುದಾಗಿದೆ.


    ಯಾವೆಲ್ಲ ಕೌಶಲದ ಅಗತ್ಯವಿದೆ?
    ಸಂವಹನ: ಇಂಗ್ಲಿಷ್‌ನಲ್ಲಿ ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ಅತಿಥಿಯೊಂದಿಗೆ ಸಂವಹನ ನಡೆಸಲು ಇಂಗ್ಲಿಷ್‌ ಜ್ಞಾನ ಅವಶ್ಯ.
    ಶಿಷ್ಟ ವರ್ತನೆ: ಆತಿಥ್ಯ ವಲದಯದಲ್ಲಿ ಸೌಮ್ಯವಾದ ನಡವಳಿಕೆ ಅತ್ಯಂತ ಅವಶ್ಯ.
    ದೈಹಿಕ ಸಾಮರ್ಥ್ಯ‌: ದೀರ್ಘಾವಧಿಯ ಕೆಲಸ ಮಾಡಲು ಮತ್ತು ಶ್ರಮದಾಯಕ ಕೆಲಸ ಮಾಡಲು ದೈಹಿಕ ಶಕ್ತಿಯೂ ಉತ್ತಮವಾಗಿರಬೇಕು.
    ಟೀಮ್‌ ಸ್ಪೀರಿಟ್‌: ತಂಡದೊಂದಿಗೆ ಮತ್ತು ಇತರೆ ತಂಡದ ಜೊತೆಗೆ ಕೆಲಸ ಮಾಡುವ ಸಾಮರ್ಥ್ಯ‌ ಇರಬೇಕು.
    ಶಿಸ್ತು: ಆತಿಥ್ಯ ವಲಯದಲ್ಲಿ ಕೆಲಸ ಮಾಡುವಾಗ ನೀಟಾದ ಉಡುಗೆ ತೊಡುಗೆ, ದೈಹಿಕ ಸೌಂದರ್ಯದ ಕುರಿತು ಕಾಳಜಿ ಹೊಂದಿರಬೇಕು.

  • Supreme court jobs: Apply for 90 Law Clerk cum-Research Associates- ಸುಪ್ರೀಂಕೋರ್ಟ್‌ನಲ್ಲಿ ಲಾ ಕ್ಲರ್ಕ್‌ ಕಂ ರಿಸರ್ಚ್‌ ಅಸೋಸಿಯೇಟ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

    Supreme court jobs: Apply for 90 Law Clerk cum-Research Associates- ಸುಪ್ರೀಂಕೋರ್ಟ್‌ನಲ್ಲಿ ಲಾ ಕ್ಲರ್ಕ್‌ ಕಂ ರಿಸರ್ಚ್‌ ಅಸೋಸಿಯೇಟ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

    Online applications are invited in terms of “Scheme of Engaging Law Clerk cum-Research Associates on Short-Term Contractual Assignment in the Supreme Court of India- January 2024” for preparation of a panel of approximately 90 candidates for engagement as Law Clerk-cum-Research Associates in the Supreme Court of India purely on contractual assignment initially on a consolidated remuneration of Rs. 80,000/- per month for the assignment term 2024-2025.

    ಉದ್ಯೋಗ ನೇಮಕಾತಿ ಸಂಸ್ಥೆಯ ಹೆಸರುಸುಪ್ರೀಂಕೋರ್ಟ್‌ ಆಫ್‌ ಇಂಡಿಯಾ
    ಎಷ್ಟು ಹುದ್ದೆಗಳಿವೆ?̈̈90
    ಅರ್ಜಿ ಸಲ್ಲಿಸುವುದು ಹೇಗೆ?ಆನ್‌ಲೈನ್‌ ಮೂಲಕ
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ25.01.2024
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ15.02.2024
    ಅರ್ಜಿ ಶುಲ್ಕ500 ರೂಪಾಯಿ
    ಅಧಿಸೂಚನೆ ಪಿಡಿಎಫ್‌ ಲಿಂಕ್‌https://jobapply.in/supremeCourtLawClerk2024/
    ವೆಬ್‌ಸೈಟ್‌ ವಿಳಾಸ: https://main.sci.gov.in/recruitment

    The selection will be made subject to fulfillment of the following essential qualifications and other eligibility conditions. It is made clear that the engagement as Law Clerk-cum-Research Associate is a full time assignment, purely contractual in nature. It will not confer any right on the selected candidates to claim regular appointment/continuance in service in the Supreme Court of India. Further, such engagement may be terminated by the Registry at any point of time with prescribed notice. A Law Clerk will not accept any other assignment during their assignment term as Law Clerk. They shall not practise as an Advocate in any Court of Law during the course of their assignment term as Law Clerks.

    Essential Qualifications
    (i) The candidate must be a Law Graduate (before taking up the assignment as Law Clerk) having a Bachelor Degree in Law (including Integrated Degree Course in Law) from any School/College/University/Institution established by law in India and recognized by the Bar Council of India for enrolment as an Advocate. (ii) The candidate studying in the fifth year of the Five-Year Integrated Law Course or the third year of the Three-Year Law Course after graduation in any stream will also be eligible to apply, subject to furnishing proof of acquiring Law qualification before taking up the assignment as Law Clerkcum-Research Associate.
    (iii) The candidate must have research and analytical skills, writing abilities, and knowledge of computers, including retrieval of desired information from various search engines/processes such as e-SCR, Manupatra, SCC Online, LexisNexis, Westlaw etc.

    Age Limit
    The candidate must not be below the age of 20 years and above 32 years as on 15.02.2024.

    Method of selection
    The selection process shall be conducted in three phases: Part I- Multiple Choice Based Questions, testing the candidates’ ability to understand and apply the law, and comprehension skills; Part II- Subjective Written Examination, covering writing and analytical skills; Part III- Interview. Details of the Pattern of Examination, Minimum Qualifying Standards, Terms and Conditions of contractual assignment are given in the “Scheme of Engaging Law Clerk-cumResearch Associates on Short-Term Contractual Assignment in the Supreme Court of India-January 2024” available on the website of the Supreme Court of India, i.e. www.sci.gov.in.

    Date of Exam
    Written Examination in connection with engagement as Law Clerk-cumResearch Associate to be held on 10.03.2024. Model Answer Keys will be uploaded on the website at 12:00 Noon on 11.03.2024 and will be available till 11:59 p.m. on 12.03.2024 for inviting online objections, if any, from the candidates relating to Part-I Multiple Choice Based Questions subject to payment of charges.

    Registration of application and payment of fee
    Eligible candidates are required to apply online for which the link will be provided through Supreme Court website, www.sci.gov.in. The application will be accepted through online registration only which is to start from 25.01.2024 at 00:00 Hours. Candidates will be required to pay Application/Test Fee of Rs.500/- plus bank charges, if applicable, through online mode only. Fee shall not be accepted in any other form. No postal application shall be accepted. The fee shall be paid online through Payment Gateway provided by UCO Bank.

    Closing Date for online applications:
    The starting date for online registration of application is 25.01.2024 at 00:00 Hours and last date thereof is 15.02.2024 at 24:00 Hours

  • ಕೆಪಿಎಸ್‌ಸಿ ವಾಣಿಜ್ಯ ತೆರಿಗೆ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕ ಪರೀಕ್ಷೆ- ಉತ್ತರ ಕೀ ಪ್ರಕಟ

    ಕೆಪಿಎಸ್‌ಸಿ ವಾಣಿಜ್ಯ ತೆರಿಗೆ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕ ಪರೀಕ್ಷೆ- ಉತ್ತರ ಕೀ ಪ್ರಕಟ

    ಕರ್ನಾಟಕ ಲೋಕ ಸೇವಾ ಆಯೋಗವು ವಾಣಿಜ್ಯ ತೆರಿಗೆ ಇನ್‌ಸ್ಪೆಕ್ಟರ್‌ ಹುದ್ದೆಗಳ ನೇಮಕಕ್ಕೆ ಸಂಬಂಧಪಟ್ಟಂತೆ ಉತ್ತರ ಕೀ ಪ್ರಕಟಿಸಿದೆ. ಒಟ್ಟು 245 ಹುದ್ದೆಗಳ ನೇಮಕಕ್ಕೆ ಸಂಬಂಧಪಟ್ಟ ಸ್ಪರ್ಧಾತ್ಮಕ ಪರೀಕ್ಷೆಯ ಉತ್ತರ ಕೀಗಳನ್ನು ಪ್ರಕಟಿಸಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು 29-08-2023 ಸಾಲಿನ ಅಧಿಸೂಚನೆಗೆ ಸಂಬಂಧಪಟ್ಟ ಈ ಉತ್ತರ ಕೀಗಳನ್ನು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಆನ್ಸರ್‌ ಕೀಗಳನ್ನು ನೇರವಾಗಿ ನೋಡಲು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಹೋಗಬಹುದು.

    ಉತ್ತರ ಕೀಗಳನ್ನು ನೇರವಾಗಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ

  • NTPC Jobs: ಎನ್‌ಟಿಪಿಸಿ ಲಿಮಿಟೆಡ್‌ನಲ್ಲಿ ಉದ್ಯೋಗಾವಕಾಶ, 55 ಸಾವಿರ ರೂ ವೇತನ, 223 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

    NTPC Jobs: ಎನ್‌ಟಿಪಿಸಿ ಲಿಮಿಟೆಡ್‌ನಲ್ಲಿ ಉದ್ಯೋಗಾವಕಾಶ, 55 ಸಾವಿರ ರೂ ವೇತನ, 223 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

    ಭಾರತದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ ಲಿಮಿಟೆಡ್‌)ವು ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ಪ್ರಕ್ರಿಯೆ, ಅಧಿಸೂಚನೆ ಪಿಡಿಎಫ್‌ ಸೇರಿದಂತೆ ಸಂಪೂರ್ಣ ವಿವರವನ್ನು ಇಲ್ಲಿ ಪಡೆಯಿರಿ.

    ಹುದ್ದೆಗಳ ವಿವರ

    ಒಟ್ಟು 223 ಹುದ್ದೆಗಳಿವೆ. ಇವುಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 98, ಇಡಬ್ಲ್ಯುಎಸ್‌ಗೆ 22, ಒಬಿಸಿಗೆ 40, ಎಸ್‌ಸಿ ಅಭ್ಯರ್ಥಿಗಳಿಗೆ 39 ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ 24 ಹುದ್ದೆಗಳನ್ನು ಮೀಸಲಿಡಲಾಗುತ್ತದೆ.

    ವಿದ್ಯಾರ್ಹತೆ: ಎಲೆಕ್ಟ್ರಿಕಲ್‌/ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. 100 ಮೆಗಾವ್ಯಾಟ್‌ ಅಥವಾ ಅದಕ್ಕಿಂತ ಹೆಚ್ಚು ಸಾಮರ್ಥ್ಯದ ಪವರ್‌ ಪ್ಲಾಂಟ್‌ನಲ್ಲಿ ಒಂದು ವರ್ಷದ ಆಪರೇಷನ್‌/ ಮೇಂಟೆನ್ಸ್‌ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಪದವಿಯಲ್ಲಿ ಕನಿಷ್ಠ 40ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.RRB ALP Recruitment 2024: ಭಾರತೀಯ ರೈಲ್ವೆಯಲ್ಲಿ ಉದ್ಯೋಗ, 5696 ಅಸಿಸ್ಟೆಂಟ್‌ ಲೊಕೊ ಪೈಲಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಆರ್‌ಆರ್‌ಬಿ

    ಸೇವೆಯ ಅವಧಿ: ಇದು 3 ವರ್ಷದ ಗುತ್ತಿಗೆ ಆಧರಿತ ಉದ್ಯೋಗ, ಎರಡು ವರ್ಷಗಳ ಕಾಲ ವಿಸ್ತರಣೆ ಮಾಡುವ ಸಾಧ್ಯತೆ ಇರುತ್ತದೆ. ರಾತ್ರಿ ಶಿಫ್ಟ್‌ ಸೇರಿದಂತೆ ವಿವಿಧ ಪಾಳಿಗಳಲ್ಲಿ ಕೆಲಸ ಮಾಡಲು ಸಿದ್ಧರಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು.

    ವಯೋಮಿತಿ

    35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಡಿಲಿಕೆ ಇರುತ್ತದೆ.

    ವೇತನ ಎಷ್ಟು?
    55,000 ರೂ. ಮಾಸಿಕ ವೇತನ ಇರುತ್ತದೆ. ಹೆಚ್ಚುವರಿಯಾಗಿ ಎಚ್‌ಆರ್‌ಎ/ ಕಂಪನಿ ಸೌಕರ್ಯಗಳು ಇರುತ್ತವೆ. ಇದರೊಂದಿಗೆ ರಾತ್ರಿ ಪಾಳಿಗೆ ಹೆಚ್ಚುವರಿ ವೇತನವೂ ಇರುತ್ತದೆ. ಕುಟುಂಬಕ್ಕೆ ವೈದ್ಯಕೀಯ ಸೌಕರ್ಯಗಳು ಇರುತ್ತವೆ.

    ಅರ್ಜಿ ಸಲ್ಲಿಸುವುದು ಹೇಗೆ?

    ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಮೊದಲಿಗೆ https://www.ntpc.co.in/ ವೆಬ್‌ಸೈಟ್‌ಗೆ ಭೇಟಿ ನೀಡಿ. ಇದಾದ ಬಳಿಕ ಕರಿಯರ್‌ ಪುಟಕ್ಕೆ ಹೋಗಿ ಅಲ್ಲಿ ಅರ್ಜಿ ಸಲ್ಲಿಸಿರಿ. ಆನ್‌ಲೈನ್‌ ಹೊರತುಪಡಿಸಿ ಬೇರೆ ಯಾವುದೇ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

    ಅರ್ಜಿ ಶುಲ್ಕ ಎಷ್ಟು?

    ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 300 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಅರ್ಜಿ ಶುಲ್ಕವನ್ನು ಎಸ್‌ಬಿಐ ಬ್ಯಾಂಕ್‌ ಖಾತೆಯಲ್ಲಿ ಸಲ್ಲಿಸಬಹುದು. ಈ ಕುರಿತು ಹೆಚ್ಚಿನ ವಿವರವನ್ನು ಈ ಕೆಳಗೆ ನೀಡಲಾದ ಅಧಿಸೂಚನೆಯಿಂದ ಪಡೆಯಿರಿ. ಸರಕಾರಿ ಉದ್ಯೋಗಗಳ ಮಾಹಿತಿಗಾಗಿ ನಿರಂತರವಾಗಿ sarakarijobs.comಗೆ ಭೇಟಿ ನೀಡಿ.


    ಡಿಸ್ಕ್ಲೈಮರ್‌: ಉದ್ಯೋಗಾಂಕ್ಷಿಗಳಿಗೆ ಮಾಹಿತಿ ನೀಡುವ ಸಲುವಾಗಿ ಸರಕಾರಿಜಾಬ್ಸ್‌.ಕಾಂ ತಾಣವು ಉದ್ಯೋಗ ಅಧಿಸೂಚನೆ ಆಧರಿತ ವಿವರಗಳನ್ನು ಇಲ್ಲಿ ನೀಡುತ್ತಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ನಿಗದಿತ ಸಂಸ್ಥೆಯ ವೆಬ್‌ಸೈಟ್‌ನಿಂದ ಅಧಿಸೂಚನೆ ಡೌನ್‌ಲೋಡ್‌ ಮಾಡಿಕೊಂಡು ಸಂಪೂರ್ಣ ಮಾಹಿತಿ ಪಡೆದು ಅರ್ಜಿ ಸಲ್ಲಿಸಿರಿ.́

    RRB ALP Recruitment 2024: ಭಾರತೀಯ ರೈಲ್ವೆಯಲ್ಲಿ ಉದ್ಯೋಗ, 5696 ಅಸಿಸ್ಟೆಂಟ್‌ ಲೊಕೊ ಪೈಲಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಆರ್‌ಆರ್‌ಬಿ

  • ಪಿಎಸ್ಐ ಅಕ್ರಮದ ವರದಿ ಕುರಿತು ಸಿಎಂ ಜತೆ ಚರ್ಚಿಸಿ ಕ್ರಮ: ಗೃಹ ಸಚಿವ ಡಾ.‌ ಜಿ.ಪರಮೇಶ್ವರ

    ಬೆಂಗಳೂರು (ಜ.23):- ಎಲ್ಲ ಮುನ್ನೆಚ್ಚರಿಕೆ‌ ಕ್ರಮಗಳನ್ನು ವಹಿಸಿ ಪಿಎಸ್ಐ ಮರುಪರೀಕ್ಷೆ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

    ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಹಳ ದಿನದಿಂದ ನೆನೆಗುದಿಗೆ ಬಿದ್ದಿದ್ದ ಪಿಎಸ್ಐ ಪರೀಕ್ಷೆ ಇವತ್ತು ನಡೆಯುತ್ತಿದೆ. ಕಳೆದ ಬಾರಿ ರೀತಿ ಆಗದಂತೆ ಈ ಪರೀಕ್ಷೆಯನ್ನ ಎಚ್ಚರಿಕೆಯಿಂದ ನಡೆಸುತ್ತಿದ್ದೇವೆ. ಹೈಕೋರ್ಟ್ ಆದೇಶದ ಪ್ರಕಾರ ಕರ್ನಾಟಕ‌ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

    ಕಳೆದ ಬಾರಿ ಅಕ್ರಮದ ಕುರಿತು ನ್ಯಾ. ವೀರಪ್ಪ ಅವರ ಆಯೋಗದ ವರದಿ ಕೊಟ್ಟಿದೆ. ನಾನು ಅ ವರದಿಯನ್ನ ನೋಡಿಲ್ಲ. ಮುಖ್ಯಮಂತ್ರಿಯವರಿಗೆ ನೀಡಿದ್ದಾರೆ. ವರದಿಯಲ್ಲಿ ಏನು ಶಿಫಾರಸು ಮಾಡಿದ್ದಾರೋ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಅದರಲ್ಲಿ ಯಾರ ಹೆಸರು ಇದೆ ಎಂಬುದು ಗೊತ್ತಿಲ್ಲ. ನಾವೆಲ್ಲ ಸಿಎಂ ಜೊತೆ ಕುಳಿತು ವರದಿ ವಿಶ್ಲೇಷಣೆ ಮಾಡುತ್ತೇವೆ. ಅಕ್ರಮದ ಬಗ್ಗೆ ಬಹಿರಂಗ ಹೇಳಿಕೆ ನೀಡಿದವರು ಸಮಿತಿಯು ವಿಚಾರಣೆ ವೇಳೆ ಕರೆದಾಗ ಹೋಗಿರಲಿಲ್ಲ. ಅದು ಯಾವ ರೀತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ನಿರ್ಧಾರ ಏನು ಮಾಡು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ಹೇಳಿದರು‌

    ಆಡಿಯೋ ವೈರಲ್ ಪ್ರಕರಣಕ್ಕು ಪಿಎಸ್ಐ ಮರುಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಎಸ್ಐ ಲಿಂಗಯ್ಯ ಎಂಬುವರನ್ನು ಸಿಸಿಬಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಆರೋಪಿತ ಎಸ್ಐ ಇಂಟಲಿಜೆನ್ಸ್‌ನಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ. ಈ ಪರೀಕ್ಷೆಯಲ್ಲಿಯೂ ಅಕ್ರಮ ನಡೆಯುತ್ತಿರಬಹುದು. ಅದರ ಸುಳಿವು ಸಿಗಬಹುದು ಎಂಬ ನಿಟ್ಟಿನಲ್ಲಿ ನಕಲಿ (Fake call) ಕರೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಸಿಸಿಬಿ ಅವರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿಸಿದರು.

    ರಾಹುಲ್ ಗಾಂಧಿ ಅವರು ಹಿಂದೆ ಭಾರತ್ ಜೋಡೋ ಪಾದ ಯಾತ್ರೆ ಮಾಡಿದ್ದರು. ದೇಶದಲ್ಲಿ ಒಳ್ಳೆ ವಾತಾವರಣ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ಇರಬೇಕು ಎಂಬುದು ಪಾದಯಾತ್ರೆಯ ಉದ್ದೇಶ. ಅದು ಮುಂದುವರೆದ ಭಾಗವಾಗಿ ಈಗ 6 ಸಾವಿರ ಕಿ.ಮೀ ಮತ್ತೆ ಪಾದಯಾತ್ರೆ ಆರಂಭಿಸಿದ್ದಾರೆ. ಅದು ಶಾಂತಿಯುತವಾಗಿ ಕೈಗೊಂಡಿದ್ದಾರೆ. ಶಾಂತಿ ಸಂದೇಶ ಸಾರಲು ನಡೆಸುತ್ತಿದ್ದಾರೆ. ಅದರೆ ಅಸ್ಸಾಂ ಮುಖ್ಯಮಂತ್ರಿಯವರು ಬೇಕಂತಲೇ ಅಡ್ಡಿ ‌ಪಡಿಸುತ್ತಿದ್ದಾರೆ ಎಂದರು.

    ಬಿಜೆಪಿಯವರು ಉದ್ದೇಶಪೂರ್ವಕವಾಗಿ ಪಾದಯಾತ್ರೆಯನ್ನು ತಡೆಯುವುದು, ಯಾತ್ರಿಗಳ ಮೇಲೆ ಗಲಾಟೆ ಮಾಡುತ್ತಿದ್ದಾರೆ. ಯಾತ್ರೆಯಿಂದ ಬಿಜೆಪಿಗೆ ಭಯ ಅಗುತ್ತಿರಬಹುದು ಅನ್ನಿಸುತ್ತದೆ. ಅಸ್ಸಾಂ ಮುಖ್ಯಮಂತ್ರಿಗೆ ಏನು ನೋವಿದೆಯೋ ಗೊತ್ತಿಲ್ಲ. ಅವರು ನಮ್ಮ ಪಕ್ಷದಲ್ಲಿ ಇದ್ದವರು. ಇಂತಹ ಯಾತ್ರೆಗೆ ಅವಕಾಶ ಕೊಡಲಿಲ್ಲ ಅಂದರೆ ಹೇಗೆ. ರಾಹುಲ್ ಗಾಂಧಿಗೆ ಹೀಗೆ ಆದರೆ, ದೇಶದಲ್ಲಿನ ಸಾಮಾನ್ಯ ಜನರ ಕಥೆ ಏನು? ಹೀಗಾಗಿ ದೇಶ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದರು.

    ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರರನ್ನು ನೇಮ ಮಾಡೋವಾಗ ನಮ್ಮ ಅಭಿಪ್ರಾಯವನ್ನು ಯಾರು ಕೇಳಿಲ್ಲ. ಒಂದೆರಡು ಹೆಸರು ಕೊಡಿ ಅಂದಾಗ ಕೊಟ್ಟಿದ್ದೇನೆ. ಆದರೆ, ನಮ್ಮ ಜತೆ ಮಾತಾಡಿ ಪಟ್ಟಿ ಮಾಡಿಲ್ಲ. ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಮುಖಂಡರ ಕೆಲಸ ನಮಗೆ ಗೊತ್ತಿರುತ್ತೆ. ಸಿಎಂ ಹಾಗೂ ಪಕ್ಷದ ‌ಅಧ್ಯಕ್ಷರು ಇದ್ದಾರೆ. ಆಯ್ಕೆ ವಿಚಾರದ ಜವಾಬ್ದಾರಿಯನ್ನು ಅವರಿಗೆ ಬಿಡಬೇಕು ಎಂದು ಹೇಳಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಜಿಲ್ಲಾ ನಾಯಕರ ಜತೆ ಮಾತಾಡಿ ಪಟ್ಟಿ ಮಾಡಬೇಕು. ಅದರೆ ಈಗ ಪಕ್ಷದ ಪ್ರಧಾನ ಕಾರ್ಯದರ್ಶಿಯವರೇ ಮಾಡುತ್ತಿದ್ದಾರೆ.‌ ಹೀಗಾಗಿ‌ ಪಟ್ಟಿ ಸಿದ್ಧಪಡಿಸುವುದು ನಿಧಾನವಾಗಿದೆ. ನೋಡೋಣ ಏನ್ ಮಾಡ್ತಾರೆ ಅಂತ ಎಂದರು.

    ನಾನು ಸಹ 8 ವರ್ಷ ಪಕ್ಷದ ಅಧ್ಯಕ್ಷನಾಗಿದ್ದೆ. ಯಾರು ಯಾರು ಕೆಲಸ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಹತ್ತಾರು ವರ್ಷ ಪಕ್ಷಕ್ಕೆ ದುಡಿದವರಿದ್ದಾರೆ. ಅವರಿಗೆ ಅಧಿಕಾರ ಕೊಡಬೇಕು. ನಮ್ಮ ಅಭಿಪ್ರಾಯ ಪಡೆಯದೇ ಇರುವುದರಿಂದ ಹೀಗೆ ಆಗಿದೆ. ಕೆಲಸ ಮಾಡದವರಿಗೆ ಅಧಿಕಾರ ಕೊಟ್ಟರೆ, ಕೆಲಸ ಮಾಡಿರುವರಿಗೆ ನೋವು, ಅಸಮಾಧಾನವಾಗುತ್ತದೆ. ಹೀಗಾಗಿ ಮುಖಂಡರು, ಜಿಲ್ಲಾ ಅಧ್ಯಕ್ಷರ ಸಲಹೆಗಳನ್ನು ಕೇಳಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಅಂದರೆ ತಪ್ಪೇನು. ನಾವೆಲ್ಲರೂ ಜೈ ಶ್ರೀರಾಮ್ ಅಂತ ಹೇಳಿದ್ದೇವೆ. ಹೇಳದೇ ಇದ್ದರೆ ಶ್ರೀರಾಮನ ವಿರೋಧ ಅಂತಾರೆ. ಹೇಳಿದರೆ ಹೀಗೆ ಅಂತಾರೆ. ಇದರಲ್ಲಿ ಯಾವುದು ಸರಿ ಎಂದರು.

    ನಾವೆಲ್ಲ ಶ್ರೀರಾಮನ ಭಕ್ತರೇ. ಒಂದಲ್ಲ ಒಂದು ರೀತಿ ಶ್ರೀರಾಮನ ಆದರ್ಶ ಪಾಲನೆ ಮಾಡಬೇಕು ಅಂತ ಹೇಳುತ್ತೀವಿ. ಶ್ರೀರಾಮ ಬರೀ ನಾಲ್ಕು ಜನಕ್ಕೆ ಸೀಮಿತವಲ್ಲ. ನಮಗೆ ದಶರಥ ರಾಮ ಬೇಕು. ಮೋದಿಯ ರಾಮ ಬೇಕಾಗಿಲ್ಲ. ನಮಗೆ ಈ ದೇಶವನ್ನು ರಾಮರಾಜ್ಯ ಮಾಡಿದ ದಶರಥ ರಾಮ ಬೇಕೆ ಹೊರತು. ರಾಮನ ಹೆಸರು ಹೇಳಿಕೊಂಡು ಒಡೆದಾಳುವ ನೀತಿ ಆಚರಣೆ ಮಾಡುವವರು ಬೇಕಿಲ್ಲ ಎಂದು ಹೇಳಿದರು.