Category: State Govt Jobs

Karnataka Govt Jobs News in Kannada, Job news in kannada, employment news, kpsc update, karnataka police recruitment, bmtc driver jobs, ksrtc driver conductor jobs, gramapanchayiti jobs, bengaluru jobs, mysuru jobs, mangaluru jobs, hassan jobs, jobs in karnataka, jobs near me, ಕರ್ನಾಟಕ ಉದ್ಯೋಗ ವಾರ್ತೆ, ಕೆಪಿಎಸ್‌ಸಿ, ಸರಕಾರಿ ಉದ್ಯೋಗ, ಕನ್ನಡ ಉದ್ಯೋಗಾವಕಾಶ, ಉದ್ಯೋಗ ಮಾಹಿತಿ, ಜಾಬ್‌ ಸುದ್ದಿಗಳು

  • ಕೆನರಾ ಬ್ಯಾಂಕ್ : ಆರ್ಥಿಕ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ

    ಕೆನರಾ ಬ್ಯಾಂಕ್, ಪ್ರವರ್ತಿಸಿರುವ ಬೆಂಗಳೂರು ಜಿಲ್ಲೆ, ಆನೇಕಲ್ ತಾಲ್ಲೂಕಿನ ಆರ್ಥಿಕ ಸಾಕ್ಷರತ ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇರೆಗೆ ” ಆರ್ಥಿಕ ಸಲಹೆಗಾರ” ಹುದ್ದೆಗೆ ಬ್ಯಾಂಕಿನ ನಿವೃತ್ತ/ ಸ್ವ ಇಚ್ಛೆಯಿಂದ ನಿವೃತ್ತಿ ಹೊಂದಿದ 62 ವರ್ಷದ ಒಳಗಿನ ಪ್ರಬಂಧಕರು/ ಹಿರಿಯ ಪ್ರಬಂಧಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹೆಚ್ಚಿನ ಮಾಹಿತಿ ಮತ್ತು ನಿಬಂಧನೆಗಳಿಗೆ ‌ಹಾಗೂ‌ ಅರ್ಜಿ ನಮೂನೆಗಳಿಗಾಗಿ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ : ಕೃಷಿ ಸಾಲ ವಿಭಾಗ,‌ಕೆನರಾ ಬ್ಯಾಂಕ್, ಪ್ರಾದೇಶಿಕ ಕಚೇರಿ- ಪೂರ್ವ, ಸ್ಪೆನ್ಸರ್ ಟವರ್, ಎಂ.ಜಿ.ರಸ್ತೆ, ಬೆಂಗಳೂರು – 560001

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-07-2021
    ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9845461668

  • ಜ್ಯೂನಿಯರ್ ಅಸಿಸ್ಟೆಂಟ್ ಕಂ ಮಾರಾಟ ಗುಮಾಸ್ತ ಹುದ್ದೆಗೆ ಅರ್ಜಿ ಆಹ್ವಾನ

    ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿ., ಸರ್ಜಾಪುರ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : 5 ( ಐದು) ಕಿರಿಯ ಸಹಾಯಕ ‌ಕಂ ಮಾರಾಟ ಗುಮಾಸ್ತ ( junior assistant cum sales clerk) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
    ಕನ್ನಡ ಭಾಷೆಯನ್ನು ಕಲಿತಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಎಸ್ ಸಿ/ ಎಸ್ ಟಿ / ಪ್ರವರ್ಗ -1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
    ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು : ಇತ್ತೀಚಿನ ಎರಡು ಭಾವಚಿತ್ರ, ಪಾಸ್ ಪೋರ್ಟ್/ ಆಧಾರ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್/ ವೋಟರ್ ಐಡಿ ಯಾವುದಾದರೂ ಒಂದು. ವಯಸ್ಸು ದೃಢೀಕರಣ ಪತ್ರ ಅಥವಾ ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಪದವಿ ಅಂಕಪಟಯ, ಕಂಪ್ಯೂಟರ್ ಪದವಿ ಹೊಂದಿರುವ ಬಗ್ಗೆ ಸರ್ಟಿಫಿಕೇಟ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

    ಅರ್ಜಿ ಸಲ್ಲಿಸುವ ವಿಧಾನ : ಸಂಘದ ಕೇಂದ್ರ ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ ಅರ್ಜಿಗಳನ್ನು ವಿತರಿಸಲಾಗುವುದು. ರೂ. 1000/- ಪಾವತಿ ಮಾಡಿ ಅರ್ಜಿಯನ್ನು ಪಡೆಯಬಹುದು. ಈ ಹಣವನ್ನು ಯಾವುದೇ ಸಂದರ್ಭದಲ್ಲಿ ಹಿಂದಿರಿಗಿಸಲಾಗುವುದಿಲ್ಲ. ಸಂಘದಿಂದ ಪೂರೈಸಿದ ಮೂಲ ಅರ್ಜಿಯೊಂದಿಗೆ ಪೂರಕ ದಾಖಲೆಗಳ ನಕಲುಗಳನ್ನು ಸ್ವಯಂ ದೃಢೀಕರಿಸಿ ಸದಸ್ಯ ಕಾರ್ಯದರ್ಶಿ, ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿ. ಸರ್ಜಾಪುರ – 562125 ಆನೇಕಲ್ ತಾಲ್ಲೂಕು, ಬೆಂಗಳೂರು ‌ನಗರ ಜಿಲ್ಲೆ ಇಲ್ಲಿ ಸಲ್ಲಿಸತಕ್ಕದ್ದು

    ಅರ್ಜಿ ಸಲ್ಲಿಸಲು ದಿನಾಂಕ 24-05-2021 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಕೋವಿಡ್ 19 ರಿಂದಾಗಿ ಸರಕಾರವು ಲಾಕ್ ಡೌನ್ ಆದೇಶಿಸಿದ್ದ ಕಾರಣ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ತೊಂದರೆ ಉಂಟಾಗಿರುತ್ತದೆ. ಆದ ಕಾರಣ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-07-2021 ಸಂಜೆ 5.00 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ.

  • KIOCL ಲಿಮಿಟೆಡ್ : ವಿವಿಧ ಹುದ್ದೆ

    ಕೆಐಒಸಿಎಲ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಹುದ್ದೆ: ಜೆಜಿಎಂ ( ಕಮರ್ಷಿಯಲ್‌) – 1 ಹುದ್ದೆ
    ಜೆಜಿಎಂ ( ಮೆಟಿರಿಯಲ್) – 1 ಹುದ್ದೆ
    ಡಿಜಿಎಂ ( ಎಲೆಕ್ಟ್ರಿಕಲ್ ) – 1 ಹುದ್ದೆ
    ಮ್ಯಾನೇಜರ್ ( ಕಾರ್ಪೋರೇಟ್ ಕಮಿಷನ್) /E3 – 1 ಹುದ್ದೆ

    ಎಕ್ಸಿಕ್ಯೂಟಿವ್ ಟ್ರೈನಿಸ್
    1.ಎಕ್ಸಿಕ್ಯೂಟಿವ್ ಟ್ರೈನಿ ( ಹೆಚ್ ಆರ್)/ ಇಒ- 3 ಹುದ್ದೆಗಳು

    1. ಎಕ್ಸಿಕ್ಯೂಟಿವ್ ಟ್ರೈನಿ ( ಫೈನಾನ್ಸ್)/ ಇಒ- 4 ಹುದ್ದೆಗಳು
    2. ಎಕ್ಸಿಕ್ಯೂಟಿವ್ ಟ್ರೈನಿ ( ಕಂಪನಿ ಸೆಕ್ರೆಟರಿ) /ಇಒ- 1 ಹುದ್ದೆ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-07-2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • KSMCL ನಲ್ಲಿ 16 ವಿವಿಧ ಹುದ್ದೆಗಳು: ನೇರ ಸಂದರ್ಶನಕ್ಕೆ ಆಹ್ವಾನ

    ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ( ಕೆ‌.ಎಸ್.ಎಂ.ಸಿ.ಎಲ್) ಕರ್ನಾಟಕ ರಾಜ್ಯಾದ್ಯಂತ ತನ್ನ ಗಣಿ/ಕ್ವಾರಿಗಳಲ್ಲಿ ಕೆಲಸ ನಿರ್ವಹಿಸಲು ಈ ಕೆಳಕಂಡ ಶಾಸನಬದ್ಧ ಹುದ್ದೆಗಳನ್ನು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ‌ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಹುದ್ದೆಯ ಹೆಸರು : ಗಣಿ ಮುಂದಾಳು – 08 ಹುದ್ದೆಗಳು
    ಗಣಿ ಸಂಗಾತಿ – 04 ಹುದ್ದೆಗಳು
    ಬ್ಲಾಸ್ಟರ್ – 04 ಹುದ್ದೆಗಳು

    ವಯೋಮಿತಿ : ಅಭ್ಯರ್ಥಿಗಳು ಕನಿಷ್ಠ 23 ವರ್ಷ, ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.

    ಸಂಚಿತ ಸಂಭಾವನೆ ಪ್ರತಿ ಮಾಹೆ ( ರೂ.ಗಳಲ್ಲಿ)- ಗಣಿ ಮುಂದಾಳು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ‌ ರೂ.32,000/-, ಗಣಿ ಸಂಗಾತಿ ಹುದ್ದೆಗೆ ರೂ.25,000/-,ಬ್ಲಾಸ್ಟರ್ ಹುದ್ದೆಗೆ ರೂ.20,000/- ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ಸಂದರ್ಶನದ ದಿನಾಂಕ ಹಾಗೂ ಸ್ಥಳ : ಗಣಿ ಮುಂದಾಳು -( mine foreman) 02-07-2021 ಸಮಯ 11.30 ಬೆಳಿಗ್ಗೆ.

    ಗಣಿ ಸಂಗಾತಿ (mine mate) : ಸಂದರ್ಶನದ ದಿನಾಂಕ ಹಾಗೂ ಸ್ಥಳ : 03-07-2021 ಸಮಯ 11.30 ಬೆಳಿಗ್ಗೆ .

    ಬ್ಲಾಸ್ಟರ್ : ಸಂದರ್ಶನದ ದಿನಾಂಕ ಹಾಗೂ ಸ್ಥಳ : 03-07-2021 ಸಮಯ 3.00 ಮಧ್ಯಾಹ್ನ .

    ವಿಳಾಸ : Deputy General Manager, Iron Ore Division, Vaishnavi Farms, Daulathpur Road, Sandur-583119, Ballari District.

    ಅಂಚೆ ಮೂಲಕ ಅಥವಾ ಮುದ್ದಾಂ ಆಗಿ ಕಳಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

    ಅರ್ಜಿ ನಮೂನೆ, ನೇಮಕಾತಿ ನಿಯಮಾವಳಿ ಹಾಗೂ ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ಜಾಲತಾಣ www.ksmc.karnataka.gov.in ನ್ನು ಸಂಪರ್ಕಿಸಬಹುದಾಗಿದೆ.

  • ಶಿವಮೊಗ್ಗ ಸ್ಮಾರ್ಟ್ ಸಿಟಿ : ನೇಮಕಾತಿ ಅಧಿಸೂಚನೆ

    ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ:
    ಹುದ್ದೆ : ಗುತ್ತಿಗೆ ಆಧಾರದ ಮೇರೆಗೆ ಒಂದು ಕಾರ್ಯಪಾಲಕ ಇಂಜಿನಿಯರ್ (ವಿದ್ಯುತ್) ಮತ್ತು ಒಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಇಚ್ಛಿಸಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02-07-2021

    ಅರ್ಜಿ ನಮೂನೆ ಹಾಗೂ ಇತರೆ ವಿವರಗಳಿಗಾಗಿ ವೆಬ್‌ಸೈಟ್‌ shivamoggasmartcity.co.in ಅಥವಾ shimogacity.mrc.gov.in ಹಾಗೂ ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಚೇರಿಯ ಸೂಚನಾ ಫಲಕವನ್ನು ನೋಡುವುದು.

  • ಎನ್ ಸಿಸಿ ವಿಶೇಷ ಯೋಜನೆಯಡಿ ಭಾರತೀಯ ಸೇನೆಗೆ ಸೇರಲು ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲದೆ ನೇರ ಸಂದರ್ಶನ

    ಎನ್ ಸಿಸಿಯಲ್ಲಿ ತೊಡಗಿಸಿಕೊಂಡವರಿಗೆ ಭಾರತೀಯ ಸೇನೆಯಲ್ಲಿ ಕೆಲಸಕ್ಕೆ ಸೇರುವ ಅವಕಾಶ ಒದಗಿದೆ.

    ಭಾರತೀಯ ಸೇನೆಯು ಎನ್ ಸಿಸಿ ಸ್ಪೆಷಲ್ ಎಂಟ್ರಿ ಸ್ಕೀಮ್ ಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.

    ಈ ನೇಮಕಾತಿ ಪ್ರಕ್ರಿಯೆಯಲ್ಲಿ 55 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಇದರಲ್ಲಿ 50 ಹುದ್ದೆಗಳನ್ನು ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಹಾಗೂ 5 ಹುದ್ದೆಗಳಿಗೆ ಎನ್ ಸಿಸಿ ಮಹಿಳಾ ಅಭ್ಯರ್ಥಿಗಳಿಗೆ ಭರ್ತಿ ಮಾಡಿಕೊಳ್ಳಲಾಗುವುದು.

    ಪುರುಷ ಉದ್ಯೋಗಿಗಳ ಪೈಕಿ ಸಾಮಾನ್ಯ ವರ್ಗಕ್ಕೆ 45, ಅಪಘಾತಕ್ಕೀಡಾಗಿರುವ ಸೇನಾ ಸಿಬ್ಬಂದಿ ಅಭ್ಯರ್ಥಿಗಳಿಗೆ 5 ಹುದ್ದೆಗಳು ಮೀಸಲಿವೆ. ಮಹಿಳಾ ಉದ್ಯೋಗಿಗಳ ಪೈಕಿ 4 ಸಾಮಾನ್ಯ ವರ್ಗಕ್ಕೆ ಹಾಗೂ 1 ಸೇನಾ ಸಿಬ್ಬಂದಿಗಳಿಗೆ ಮೀಸಲಾಗಿಡಲಾಗಿದೆ.

    ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ.50 ಅಂಕದೊಂದಿಗೆ ಪದವಿ ಹೊಂದಿರಬೇಕು. ಇನ್ನು ಅಂತಿಮ ವರ್ಷ ಅಧ್ಯಯನ ಮಾಡುವವರು ಕೂಡಾ ಅರ್ಜಿ ಸಲ್ಲಿಸಬಹುದು. ಕ್ರಮವಾಗಿ ಮೂರು/ನಾಲ್ಕು ವರ್ಷಗಳಲ್ಲಿನ ಕೋರ್ಸ್ ಗಳಲ್ಲಿನ ಮೊದಲ ಎರಡು/ ಮೂರು ವರ್ಷಗಳಲ್ಲಿ ಕನಿಷ್ಠ 50 ರಷ್ಟು ಅಂಕಗಳನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು.

    ಎನ್ ಸಿಸಿ ಅಭ್ಯರ್ಥಿಗಳಿಗಾಗಿಯೇ ಇರುವ ಹುದ್ದೆ ಇದಾಗಿರುವುದರಿಂದ ಅಭ್ಯರ್ಥಿಗಳು ಎನ್ ಸಿಸಿಯಲ್ಲಿ ಸೀನಿಯರ್ ಡಿವಿಷನ್ ವಿಭಾಗದಲ್ಲಿ ಕನಿಷ್ಠ ಎರಡರಿಂದ ಮೂರು ವರ್ಷ ಕಾರ್ಯನಿರ್ವಹಿಸಬೇಕು.

    ಅಭ್ಯರ್ಥಿಯ ವಯೋಮಿತಿ 19 ರಿಂದ 25 ವರ್ಷದೊಳಗಿರಬೇಕು. ಜುಲೈ 1,2021 ರೊಳಗೆ ಗರಿಷ್ಠ ‌25 ವಯೋಮಿತಿ ಹೊಂದಿರಬೇಕು.

    ಆಯ್ಕೆ ಪ್ರಕ್ರಿಯೆ ಹೇಗೆ? ಎರಡು ಹಂತದ ಆಯ್ಕೆ ವಿಧಾನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮಾಡಿಕೊಳ್ಳಲಾಗುತ್ತದೆ. ಆನಂತರ ಸರ್ವಿಸ್ ಸೆಲೆಕ್ಷನ್ ಬೋರ್ಡ್ (ಎಸ್ ಎಸ್ ಬಿ) ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಿದೆ.

    5 ದಿನಗಳ ಕಾಲ ಎಸ್ ಎಸ್ ಬಿ ಸಂದರ್ಶನ ನಡೆಯಲಿದೆ. ಅಲಹಾಬಾದ್, ಭೋಪಾಲ್, ಬೆಂಗಳೂರು ಹಾಗೂ ಕಪುರ್ತಲದಲ್ಲಿ ಎಸ್ ಎಸ್ ಬಿ ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಚೆನ್ನೈನ ಒಟಿಒದಲ್ಲಿ ಪೂರ್ವ ಆಯೋಗದ ತರಬೇತಿ ನೀಡಲಾಗುತ್ತದೆ.

    ಪರೀಕ್ಷೆ ಬರೆಯೋ ಟೆನ್ಶನ್ ಇಲ್ಲದೆ ನೇರವಾಗಿ ಸಂದರ್ಶನಗಳನ್ನು ಎದುರಿಸಿ ಸೇನೆಗೆ ಸೇರಬಹುದು. ಈ‌ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಿ

    ಅರ್ಜಿ ಸಲ್ಲಿಸೋ ಪ್ರಕ್ರಿಯೆಯು ಜೂನ್ 16 ರಿಂದ ಪ್ರಾರಂಭವಾಗಿ ಜುಲೈ 15 ಕ್ಕೆ ಮುಕ್ತಾಯಗೊಳ್ಳಲಿದೆ.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ