Author: Mallika

  • KEA : 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ

    2015 ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದೆ ಭರ್ತಿಯಾಗದಿರುವ 145 ಹುದ್ದೆಗಳನ್ನು ಒಳಗೊಂಡಂತೆ ಪ್ರಸ್ತುತ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ.

    ಹುದ್ದೆ : ಸಹಾಯಕ ಪ್ರಾಧ್ಯಾಪಕರು

    ಹುದ್ದೆಗಳ ಸಂಖ್ಯೆ : 1242

    ಈ ಹುದ್ದೆಗಳ ಪೈಕಿ 1021 non HK ಹುದ್ದೆಗಳು, 221 HK ಹುದ್ದೆಗಳು ಖಾಲಿ ಇವೆ‌.

    ವಿದ್ಯಾರ್ಹತೆ : ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಖಾಲಿ ಇರುವ ಹುದ್ದೆಯ ವಿಷಯಕ್ಕೆ ಸಂಬಂಧಿಸಿದಂತೆ ಸ್ನಾತಕೋತ್ತರ ಪದವಿ ಜೊತೆಗೆ ಎನ್ ಇಟಿ, ಕೆಎಸ್ ಇಟಿ, ಪಿಹೆಚ್ ಡಿ ಉತ್ತೀರ್ಣರಾಗಿರಬೇಕು.

    ಪ್ರಮುಖ ದಿನಾಂಕ : ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 07-10-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-11-2021
    ಪರೀಕ್ಷೆ ನಡೆಯುವ ಸಂಭವನೀಯ ದಿನಾಂಕ : ಡಿಸೆಂಬರ್ 2021

    ಈ ಹುದ್ದೆಗಳಲ್ಲಿ ಶೇ.95 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಮತ್ತು ಶೆ.5 ರಷ್ಟು ಇಲಾಖೆಯ ಗ್ರೂಪ್ ಸಿ ವೃಂದದಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿದೆ.

    ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಯುಜಿಸಿ ವೇತನ ಶ್ರೇಣಿ ರೂ. 57,700- 1,82,400 ರವರೆಗೆ ಇರುತ್ತದೆ.

    ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮೀಸಲಾತಿ ( ನೇರ ಮತ್ತು ಸಮತಳ) ಮತ್ತು ರೋಸ್ಟರ್ ಗಳ ಮೂಲಕ ಆಯ್ಕೆ ಮಾಡಿ, ಅಂತಿಮ ಆಯ್ಕೆ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಲಾಗುತ್ತದೆ.

  • ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 3006 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಈ ಕೂಡಲೇ ಅರ್ಜಿ ಸಲ್ಲಿಸಿ

    ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬೀದರ್, ಬಳ್ಳಾರಿ, ಕಲಬುರಗಿ, ರಾಯಚೂರು, ಚಿಕ್ಕಮಗಳೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಉತ್ತರ ಕನ್ನಡ ಹಾಗೂ ಯಾದಗಿರಿ ಜಿಲ್ಲೆಗಳಿಗೆ ( ಹೆಚ್ಚಿನ ಆಧ್ಯತೆಯುಳ್ಳ ಜಿಲ್ಲೆಗಳು) ಹಾಗೂ ಹಾವೇರಿ, ಕೋಲಾರ, ಬೆಳಗಾವಿ, ತುಮಕೂರು, ಮೈಸೂರು, ದಕ್ಷಿಣ ಕನ್ನಡ, ಮಂಡ್ಯ, ಉಡುಪಿ, ಚಿಕ್ಕಬಳ್ಳಾಪುರ, ಕೊಡಗು, ದಾವಣಗೆರೆ, ಬೆಂಗಳೂರು ನಗರ ಮತ್ತು ಧಾರವಾಡ ಜಿಲ್ಲೆಗಳಿಗೆ ( ಆದ್ಯತೆ ಹೊರತು ಪಡಿಸಿದ ಇತರ ಜಿಲ್ಲೆಗಳು ) ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇಚ್ಛೆಯುಳ್ಳ ಅಭ್ಯರ್ಥಿಗಳು ಹೆಲ್ತ್ ಆಂಡ್ ವೆಲ್ ನೆಸ್ ಸೆಂಟರ್, ಎನ್ ಎಚ್ ಎಂ ಯೋಜನೆಯಡಿಯಲ್ಲಿ ಎಂ ಎಲ್ ಎಚ್ ಪಿ ಹುದ್ದೆ ಗಳಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಿವರಣೆ ಈ ಕೆಳಗಿನಂತಿವೆ :

    ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ ನರ್ಸಿಂಗ್ / ಪೋಸ್ಟ್ ಬಿಎಸ್ಸಿ ನರ್ಸಿಂಗ್ ಜೊತೆಗೆ ರಾಜ್ಯ ನರ್ಸಿಂಗ್ ಕೌನ್ಸಿಲ್ ಕೆ ಎನ್ ಸಿ/ ಐ ಎನ್ ಸಿ ನಿಂದ ನೋಂದಣಿ ಹೊಂದಿರಬೇಕು. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.

    ಮಾಸಿಕ‌ ಸಂಭಾವನೆ : ರೂ.24,200/- ಹೆಚ್ಚಿನ ಆದ್ಯತೆವುಳ್ಳ ಜಿಲ್ಲೆಗಳು ಹಾಗೂ ರೂ. 22,000 ಆದ್ಯತೆ ಹೊರತುಪಡಿಸಿದ ಇತರೆ ಜಿಲ್ಲೆಗಳಲ್ಲಿ ನೇಮಕಾತಿ ಬಯಸುವವರಿಗೆ ನೀಡಲಾಗುವುದು. ಜೊತೆಗೆ ಹೆಚ್ಚುವರಿಯಾಗಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನ ರೂ.8000/- ವರೆಗೆ ನೀಡಲಾಗುವುದು.

    ವಯೋಮಿತಿ : ಸಾಮಾನ್ಯ ಅಭ್ಯರ್ಥಿ : 35 ವರ್ಷ, ಎಸ್ ಸಿ/ ಎಸ್.ಟಿ/ ಪ್ರವರ್ಗ 1 / ಮಾಜಿ ಸೈನಿಕ, ವಿಧವೆ, ಅಂಗವಿಕಲರಿಗೆ 40 ವರ್ಷ, 2ಎ/2ಬಿ/3 ಎ/ 3 ಬಿ ಹಾಗೂ ಇತರೆ ಹಿಂದುಳಿದ ವರ್ಗ ( ರಾಜ್ಯ) 38 ವರ್ಷ, ಅಧಿಸೂಚನೆ ಹೊರಡಿಸಿದ ದಿನಾಂಕ ಒಳಗಾಗಿ (ವಿ.ಸೂ.ಐದನೇ ನೇಮಕಾತಿ ಪ್ರಕಟಣೆಯಾದ್ದರಿಂದ ಕಲ್ಯಾಣ ಕರ್ನಾಟಕ ( HK) ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ರೋಸ್ಟರ್ ನಿಯಮಾನುಸಾರ ಇತರೆ ( non HK) ಅಭ್ಯರ್ಥಿಗಳ ನ್ನು ಕಲ್ಯಾಣ ಕರ್ನಾಟಕ ( ಹೆಚ್ ಕೆ) ಜಿಲ್ಲೆಗಳಲ್ಲಿ ನೇಮಕಾತಿಗಾಗಿ ಪರಿಗಣಿಸಲಾಗುವುದು.

    ಒಟ್ಟು ಹುದ್ದೆಗಳು : 3006 ಹುದ್ದೆಗಳು. ಅಭ್ಯರ್ಥಿಗಳು ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸವಿರಬೇಕು ಹಾಗೂ ಕನ್ನಡವನ್ನು ಒಂದು ಭಾಷೆಯಾಗಿ ಎಸ್ ಎಸ್ ಎಲ್ ಸಿ / 10 ನೇ ತರಗತಿಯಲ್ಲಿ ಅಭ್ಯಾಸಿಸಿರಬೇಕು.

    ಅರ್ಜಿಯನ್ನು ಕೇವಲ ಆನ್ಲೈನ್ ಮುಖಾಂತರ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ಹಾಗೂ ಪರೀಕ್ಷೆಯನ್ನು ಆನ್ಲೈನ್ ಮುಖಾಂತರ ನಡೆಸಲಾಗುವುದು ( ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಸಂಪರ್ಕಿಸಬಹುದು )

    ಆನ್ಲೈನ್ ಅರ್ಜಿ ಪ್ರಾರಂಭ ದಿನಾಂಕ : 28/09/2021
    ಹಣ ಪಾವತಿಗಾಗಿ ಆನ್ಲೈನ್ ಗೇಟ್ವೇ ಪ್ರಾರಂಭ ದಿನಾಂಕ : 29/09/2021 ಮಧ್ಯಾಹ್ನ 1.30 ಗಂಟೆಗೆ
    ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18/10/2021 ( ಸಾಯಂಕಾಲ 5:00 ಗಂಟೆಯವರೆಗೆ )
    ಲಿಖಿತ ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆ ದಿನಾಂಕ: 23/10/2021
    ಮೂಲ ದಾಖಲೆಗಳ ಪರಿಶೀಲನೆ ಪ್ರಾರಂಭ : 26/10/2021 ರಂದು ಪ್ರಾರಂಭ

    ಹೆಚ್ಚಿನ ಮಾಹಿತಿಗಾಗಿ : https://karunadu.karnataka.gov.in/hfw/pages/home.aspx ಸಂಪರ್ಕಿಸಬಹುದು.

    ಸೂಚನೆ : ನೇಮಕಾತಿ ಸಂಬಂಧಿಸಿದ ತಿದ್ದೋಲೆಗಳನ್ನು ಮೇಲೆ ಸೂಚಿಸಿರುವ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

    ಬೆಂಗಳೂರು ಮೆಟ್ರೋ ರೈಲು ನಿಗಮಿತ ( ಬಿಎಂಆರ್ ಸಿಎಲ್) ಗುತ್ತಿಗೆ ಆಧಾರದ ಅಥವಾ ನಿಯೋಜನೆ‌ ಮೇರೆಗೆ‌ ಕೆಳಕಂಡ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಮತ್ತು ಅನುಭವವುಳ್ಳ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ : ಉಪ ಪ್ರಧಾನ ವ್ಯವಸ್ಥಾಪಕರು ( ಎಫ್ & ಎ) – 02 ಹುದ್ದೆಗಳು
    ಸಹಾಯಕ ಪ್ರಧಾನ ವ್ಯವಸ್ಥಾಪಕರು ( ಎಫ್ & ಎ) – 01 ಹುದ್ದೆ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-10-2021 ಸಂಜೆ 04.00 ಗಂಟೆಯವರೆಗೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ ಭೇಟಿ ನೀಡಬಹುದು.

  • BMRCL ನಲ್ಲಿ ವಿವಿಧ ಹುದ್ದೆ

    ಬೆಂಗಳೂರು ಮೆಟ್ರೋ ರೈಲು ನಿಗಮಿತ ( ಬಿಎಂಆರ್ ಸಿಎಲ್) ಗುತ್ತಿಗೆ ಆಧಾರದ ಅಥವಾ ನಿಯೋಜನೆ‌ ಮೇರೆಗೆ‌ ಕೆಳಕಂಡ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಮತ್ತು ಅನುಭವವುಳ್ಳ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ : ಉಪ ಪ್ರಧಾನ ವ್ಯವಸ್ಥಾಪಕರು ( ಎಫ್ & ಎ) – 02 ಹುದ್ದೆಗಳು
    ಸಹಾಯಕ ಪ್ರಧಾನ ವ್ಯವಸ್ಥಾಪಕರು ( ಎಫ್ & ಎ) – 01 ಹುದ್ದೆ

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-10-2021 ಸಂಜೆ 04.00 ಗಂಟೆಯವರೆಗೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ ಭೇಟಿ ನೀಡಬಹುದು.

    ನೋಟಿಫಿಕೇಶನ್ ಈ ಕೆಳಗೆ ನೀಡಲಾಗಿದೆ.

  • SSC 3261 ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸ್ಟಾಫ್ ಸೆಲೆಕ್ಷನ್ ಕಮಿಷನ್ ( ಎಸ್ ಎಸ್ ಸಿ) ಸೆಲೆಕ್ಷನ್ ಪೋಸ್ಟ್ ( ಫೇಸ್ -9) ಹುದ್ದೆಗಳ ನೇಮಕಾತಿಗೆ ಶುಕ್ರವಾರ ಅಧಿಸೂಚನೆ ಪ್ರಕಟಿಸಿದೆ.

    ಕೇಂದ್ರ ಸರಕಾರದ ಅಧೀನದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

    ಎಸ್ ಎಸ್ ಸಿ ಒಟ್ಟು 3261 ಸೆಲೆಕ್ಷನ್ ಪೋಸ್ಟ್ ಗಳಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ.

    ಹುದ್ದೆಗಳ ವಿವರ : ಜೂನಿಯರ್ ಸೀಡ್ ಅನಾಲಿಸ್ಟ್, ಗರ್ಲ್ಸ್ ಕೆಡೆಟ್ ಇನ್ಸ್ ಸ್ಟ್ರಕ್ಟರ್, ಮೆಕ್ಯಾನಿಕಲ್ ವಿಭಾಗ ಚಾರ್ಜ್ ಮನ್, ಸೈಂಟಿಫಿಕ್ ಅಸಿಸ್ಟೆಂಟ್, ಅಕೌಂಟೆಂಟ್, ಹೆಡ್ ಕ್ಲರ್ಕ್, ರಿಹ್ಯಾಬಿಲಿಟೇಶನ್ ಕೌನ್ಸಲರ್, ಸ್ಟಾಫ್ ಕಾರ್ ಡ್ರೈವರ್, ಟೆಕ್ನಿಕಲ್ ಸೂಪರಿಂಟೆಂಡೆಂಟ್, ಕಂಸರ್ ವೇಶನ್ ಅಸಿಸ್ಟೆಂಟ್, ಟೆಕ್ನಿಕಲ್ ಅಸಿಸ್ಟೆಂಟ್, ರಿಸರ್ಚ್ ಇನ್ವೆಸ್ಟಿಗೇಟರ್, ಜೂನಿಯರ್ ಕಂಪ್ಯೂಟರ್ ಅಪರೇಟರ್, ಸಬ್ ಎಡಿಟರ್ ( ಹಿಂದಿ), ಸಬ್ ಎಡಿಟರ್ ( ಇಂಗ್ಲಿಷ್), ಮಲ್ಟಿಟಾಸ್ಕಿಂಗ್ ಸ್ಟಾಫ್, ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್ ( ಬಯೋಲಾಜಿ)
    ಒಟ್ಟು 3261 ಸೆಲೆಕ್ಷನ್ ಪೋಸ್ಟ್ ಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ – 24-09-2021
    ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 25-10-2021 ರ ರಾತ್ರಿ 11.30 ಗಂಟೆಯವರೆಗೆ
    ಆನ್ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ : 28-10-2021 ರ ರಾತ್ರಿ 11.30 ಗಂಟೆಯವರೆಗೆ
    ಆಫ್ ಲೈನ್ ಚಲನ್ ಜೆನರೇಟ್ ಮಾಡಲು ಕೊನೆಯ ದಿನಾಂಕ : 28-10-2021 ರ ರಾತ್ರಿ 11.30 ಗಂಟೆಯವರೆಗೆ
    ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ : 01-11-2021
    ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ಜನವರಿ/ ಫೆಬ್ರವರಿ 2022

    ಅರ್ಜಿ ಶುಲ್ಕ : ರೂ.100 ಶುಲ್ಕ ಪಾವತಿಸಬೇಕು. ಮಹಿಳಾ/ ಎಸ್ ಸಿ/ ಎಸ್ ಟಿ/PWD/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಆನ್ಲೈನ್ ಮೂಲಕ ಮತ್ತು ಆಪ್ ಲೈನ್ ಚಲನ್ ಮೂಲಕ ಸಹ ಪಾವತಿ ಮಾಡಬಹುದು‌.

    ವಿದ್ಯಾರ್ಹತೆ : ಪಿಯುಸಿ, ಪದವಿ, ಸ್ನಾತಕ ಪದವಿ ಕೋರ್ಸ್ ಗಳನ್ನು ಪಾಸ್ ಮಾಡಿದ ಅಭ್ಯರ್ಥಿಗಳಿಗೆ ಅವಕಾಶವಿದೆ.

    ಆನ್ಲೈನ್ ಅಪ್ಲೈ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್ ಈ ಕೆಳಗೆ ನೀಡಲಾಗಿದೆ

  • ONGC ಯಲ್ಲಿ ವಿವಿಧ 313 ಹುದ್ದೆಗಳಿಗೆ ಅರ್ಜಿ ಆಹ್ವಾನ

    ತೈಲ ಮತ್ತು ನೈಸರ್ಗಿಕ ಅನಿಲ‌ ಆಯೋಗ ( ಒಎನ್ ಜಿಸಿ) 2021 ರ ನೇಮಕಾತಿ ಅಧಿಸೂಚನೆ ನ್ನು ಬಿಡುಗಡೆ ಮಾಡಿದೆ. ಒಎನ್ ಜಿಸಿ 313 ಪದವೀಧರ ತರಬೇತಿ ( ಎಂಜಿನಿಯರಿಂಗ್ ಮತ್ತು ಜಿಯೋ ಸೈನ್ಸ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗ ನೋಂದಣಿ ಕಮ್ ಅರ್ಜಿ ಪ್ರಕ್ರಿಯೆಯು ಸೆ.22, 2021 ರಂದು ಪ್ರಾರಂಭವಾಗಿದೆ. ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 12, 2021 ರಂದು ಕೊನೆಗೊಳ್ಳಲಿದೆ.

    ಅರ್ಹತೆ ; ಒಎನ್ ಜಿಸಿ ನೇಮಕಾತಿಯ ವಿವಿಧ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ/ಎಂ.ಎಸ್ಸಿ/ಎಂ.ಟೆಕ್ ನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಹೊಂದಿರಬೇಕು. ಜೊತೆಗೆ ಗೇಟ್ 2020 ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದಿರಬೇಕು.

    ವಯೋಮಿತಿ : ಅಭ್ಯರ್ಥಿಗಳು ಜುಲೈ 31,2020 ರ ಅನ್ವಯ ‌28 ವರ್ಷ,( AEE ಗಾಗಿ) ಮತ್ತು 30 ವರ್ಷ ವಯೋಮಿತಿ ಯನ್ನು (AEE ಹೊರತು ಪಡಿಸಿ ಇತರ ಎಲ್ಲ ಹುದ್ದೆಗಳನ್ನು) ಹೊಂದಿರಬೇಕು. 3 ವರ್ಷಗಳು ( ಒಬಿಸಿ) ಮತ್ತು 5 ವರ್ಷಗಳ ( ಎಸ್ ಸಿ/ಎಸ್ ಟಿ) ವರೆಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

    ವೇತನ : ನೇಮಕಾತಿಯ ವಿವಿಧ ಉದ್ಯೋಗಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಅಧಿಸೂಚನೆಯಲ್ಲಿ ಉಲ್ಲೇಖಿಸಿರುವಂತೆ ವೇತನವನ್ನು ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ : ಒಎನ್ ಜಿಸಿ ನೇಮಕಾತಿಯ ವಿವಿಧ ಉದ್ಯೋಗಗಳಿಗರ ಅಭ್ಯರ್ಥಿಗಳ ಆಯ್ಕೆಯನ್ನು ಅವರ ಶೈಕ್ಷಣಿಕ ಅರ್ಹತೆ, ಸಂಬಂಧಿತ ವಿಭಾಗದಲ್ಲಿ ಗೇಟ್ 2020 ಸ್ಕೋರ್ ಆಧರಿಸಿ ಕಿರು ಪಟ್ಟಿಯನ್ನು ಮಾಡಿ ತದನಂತರ ಸಂದರ್ಶನ ದ ಮೂಲಕ ಆಯ್ಕೆ ಮಾಡಲಾಗುತ್ತದೆ.

    ಅರ್ಜಿ ಶುಲ್ಕ : ಒಎನ್ ಜಿಸಿ ನೇಮಕಾತಿಯ ವಿವಿಧ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನೋಂದಣಿ ಶುಲ್ಕವಾಗಿ 300/- ರೂ. ಅನ್ನು ಆನ್ಲೈನ್ ಮೂಲಕ ಪಾವತಿಸಬೇಕಿರುತ್ತದೆ. ಎಸ್ ಸಿ / ಎಸ್ ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು ಲೇಖನದ ಕೊನೆಯಲ್ಲಿ ನೀಡಿರುವ ಅಧಿಕೃತ ಒಎನ್ ಜಿಸಿ ಜಿಟಿ ಅಧಿಸೂಚನೆ 2021 ರಲ್ಲಿ ಉಲ್ಲೇಖಿಸಿರುವಂತೆ ನೋಂದಣಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.

    ನೇಮಕಾತಿ ಅರ್ಜಿ ಸಲ್ಲಿಕೆ : ಒಎನ್ ಜಿಸಿ ನೇಮಕಾತಿಯ ವಿವಿಧ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಬಹುದು.

    ನೋಟಿಫಿಕೇಶನ್ ಈ ಕೆಳಗೆ ನೀಡಲಾಗಿದೆ.

  • ATI ಮೈಸೂರು ; ಬೋಧಕ ಹುದ್ದೆ, ಈ ಕೂಡಲೇ ಅರ್ಜಿ ಸಲ್ಲಿಸಿ

    ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ ;

    ಹುದ್ದೆ ವಿವರ : ಬೋಧಕರು ( ವಿಕೋಪ ನಿರ್ವಹಣಾ ಕೇಂದ್ರ) – 01
    ಬೋಧಕರು : 01
    ಒಟ್ಟು ಹುದ್ದೆ -02

    ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಹಾ ನಿರ್ದೇಶಕರು, ಆ.ತ.ಸಂ.ಮೈಸೂರು ವಿಳಾಸಕ್ಕೆ ದಿ. 27.09.2021ರೊಳಗಾಗಿ ನೊಂದಾಯಿತ ಅರ್ಜಿಯ ಮೂಲಕ ಹಾಗೂ ಸಾಫ್ಟ್ ಕಾಪಿಯನ್ನು ಇ ಮೇಲ್ [email protected] ವಿಳಾಸಕ್ಕೆ ಕಳುಹಿಸುವುದು.

    ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರತಿ ಹುದ್ದೆಗೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವುದು. ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕ ತಮ್ಮ ಸ್ವಂತ ಖರ್ಚಿನಲ್ಲಿಯೇ ಹಾಜರಾಗುವುದು.