Author: Mallika

  • ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 6,100 ಹುದ್ದೆ, ಆಸಕ್ತರು ಅರ್ಜಿ ಸಲ್ಲಿಸಿ

    ಭಾರತೀಯ ಸ್ಟೇಟ್ ಬ್ಯಾಂಕ್ ದೇಶದಾದ್ಯಂತ ತನ್ನ ಶಾಖೆಗಳಲ್ಲಿ 6100 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಇವುಗಳಲ್ಲಿ ಕರ್ನಾಟಕದಲ್ಲಿ ೨೦೦ ಅಪ್ರೆಂಟಿಸ್‌ ತರಬೇತಿ ಹುದ್ದೆಗಳಿವೆ.

    ಎಸ್ ಬಿಐ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : 6100

    ಕರ್ನಾಟಕದಲ್ಲಿ ಎಸ್ ಬಿಐ ಅಪ್ರೆಂಟಿಸ್ ಹುದ್ದೆಗಳ ಸಂಖ್ಯೆ : 200

    ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕ :

    ಅರ್ಜಿ‌‌ ಸಲ್ಲಿಕೆಗೆ ಆರಂಭಿಕ ದಿನಾಂಕ : 06-07-2021
    ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 26-07-2021
    ಆನ್ಲೈನ್ ಪರೀಕ್ಷೆ ದಿನ : ಆಗಸ್ಟ್ ,2021

    ಅಪ್ಲಿಕೇಶನ್ ಶುಲ್ಕ ಎಷ್ಟು ?
    ಸಾಮಾನ್ಯ, ಒಬಿಸಿ ಮತ್ತು ಇಡ್ಬ್ಯುಎಸ್ ಅಭ್ಯರ್ಥಿಗಳಿಗೆ ರೂ.300!-
    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪಿಡ್ಬ್ಯುಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

    ಯಾವುದೇ ಯುನಿವರ್ಸಿಟಿ ಅಥವಾ ಇನ್ಸ್ಟಿಟ್ಯೂಟ್ ನಿಂದ ಪದವಿ ಪಡೆದವರು ಅರ್ಜಿಯನ್ನು ಸಲ್ಲಿಸಬಹುದು.

    ವಯೋಮಿತಿ : ಅರ್ಜಿ ಸಲ್ಲಿಸಬಯಸುವ ವ್ಯಕ್ತಿಗಳ ವಯಸ್ಸು 20 ವರ್ಷದಿಂದ 28 ವರ್ಷಗಳ ನಡುವೆ ಇರಬೇಕು. ಎಸ್ ಸಿ/ ಎಸ್ ಟಿ/ಒಬಿಸಿ/ ಪಿಡ್ಬ್ಯುಬಿಡಿ ಅಭ್ಯರ್ಥಿಗಳಿಗೆ ಭಾರತೀಯ ಸರಕಾರದ ನಿಯಮಾವಳಿ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.

    ನೇಮಕಾತಿ ವಿಧಾನ‌: ಅಭ್ಯರ್ಥಿಗಳಿಗೆ ಆನ್ಲೈನ್ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷೆ ಪರೀಕ್ಷೆ ನಡೆಸಿ ಆಯ್ಕೆ ನಡೆಸಲಾಗುತ್ತದೆ. ಆನ್ಲೈನ್ ಲಿಖಿತ ಪರೀಕ್ಷೆ 100 ಅಂಕಗಳ 100 ಅಬ್ಜೆಕ್ಟಿವ್ ಟೈಪ್ ಪ್ರಶ್ನೆಗಳಿಗೆ ನಡೆಸಲಾಗುತ್ತದೆ. ಪರೀಕ್ಷೆಯನ್ನು ಈ ಕೆಳಗಿನ 4 ಸೆಕ್ಷನ್ ಗಳಲ್ಲಿ ನಡೆಸಲಾಗುತ್ತದೆ. ಪ್ರತಿ ಸೆಕ್ಷನ್ ನಲ್ಲಿ 25 ಪ್ರಶ್ನೆಗಳು ಮತ್ತು 25 ಅಂಕಗಳು ಇರುತ್ತವೆ.

    ಜೆನೆರಲ್/ ಫೈನಾನ್ಷಿಯಲ್ ಅವಾರ್ ನೆಸ್
    ಜೆನಡರಲ್ ಇಂಗ್ಲೀಷ್
    ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್
    ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಅಪ್ಟಿಟ್ಯೂಡ್

    ಅಪ್ರೆಂಟಿಸ್ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮೊದಲ ವರ್ಷ ಮಾಸಿಕ ರೂ.15,000/- ನೀಡಲಾಗುತ್ತದೆ.

    ಅಪ್ರೆಂಟಿಸ್ ಹುದ್ದೆಯ ಅವಧಿ : 1 ವರ್ಷ.

    ಅರ್ಜಿ ಸಲ್ಲಿಕೆ ಹೇಗೆ? ಅಭ್ಯರ್ಥಿಗಳು ವೆಬ್ ಸೈಟ್ https://sbi/careers ಅಥವಾ https://sbi.co.in/careers ಗೆ ಭೇಟಿ ನೀಡಿರಿ.

    ಬೇಸಿಕ್ ಮಾಹಿತಿಗಳಾದ ಹೆಸರು, ಮೊಬೈಲ್ ನಂಬರ್, ಇ- ಮೇಲ್ ವಿಳಾಸ ನೀಡಿ ರಿಜಿಸ್ಟರ್ ಆಗಿ, ನಂತರ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಮಾಹಿತಿಗಳನ್ನು ನೀಡಬೇಕು. ಅಗತ್ಯ ಸ್ಕ್ಯಾನ್ ಕಾಪಿಗಳಾದ ಭಾವಚಿತ್ರ, ಸಹಿ ಅಪ್ ಲೋಡ್ ಮಾಡಬೇಕಾಗುತ್ತದೆ. ನಂತರ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ ಅಂತಿಮವಾಗಿ ಅರ್ಜಿ‌ಸಲ್ಲಿಕೆ ಪೂರ್ಣಗೊಳಿಸಬಹುದು.

    ಅರ್ಜಿ ಶುಲ್ಕವನ್ನು ನಿಗದಿತ ದಿನಾಂಕದೊಳಗೆ ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.

    ರಾಜ್ಯದಲ್ಲಿ ಎಷ್ಟು ಹುದ್ದೆಗಳಿವೆ?: ರಾಜ್ಯದಲ್ಲಿ ಒಟ್ಟು ೨೦೦ ಹುದ್ದೆಗಳಿದ್ದು, ಜಿಲ್ಲಾವಾರು ಮಾಹಿತಿ ಈ ಕೆಳಗಿನಂತೆ ಇದೆ.

    Bagalkot-8, Bangalore Rural-10, Bangalore Urban-10, Belgaum-10, Bellary-10, Bidar-5, Chickmagaluru-5, Chikkaballapur-5, Chitradurga-5, Dakshina Kannada-10, Davangere-5, Dharwad-10, Gadag-5, Kalaburagi-10, Hassan-5, Haveri-5, Kodagu-5, Kolar-5, Koppal-5, Mandya-5, Mysore-5, Raichur-5, Ramanagaram-5, Shimoga-5, Tumkur-9, Vijapura-10, Udupi-5, Uttar KANNADA-8, YADGIR-5.

    ನೋಟಿಫಿಕೇಶನ್

  • ಆಯಿಲ್ ಇಂಡಿಯಾದಲ್ಲಿ ಕೆಲಸ, ಪಿಯುಸಿ ಪಾಸಾದವರಿಗೆ ಆದ್ಯತೆ

    ಸರಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

    ಆಯಿಲ್ ಇಂಡಿಯಾ ಲಿಮಿಟೆಡ್ ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ.

    ಅರ್ಜಿ‌ ಸಲ್ಲಿಸಲು ಪ್ರಾರಂಭಿಕ ದಿನಾಂಕ : ಜುಲೈ 01, 2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಆಗಸ್ಟ್ 15, 2021

    ದುಲಿಯಾಜನ್ ನಲ್ಲಿರುವ ಕೇಂದ್ರ ಕಚೇರಿಯಿಂದ 120 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಬಳಿಕ‌ ಆಯ್ಕೆಯಾದ ಅಭ್ಯರ್ಥಿಗಳನ್ನು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಉತ್ಪಾದನೆ ಮತ್ತು ಪರಿಶೋಧನಾ ಪ್ರದೇಶಗಳಲ್ಲಿ oil ಘಟಕಗಳಲ್ಲಿ ಕೆಲಸಕ್ಕೆ ನಿಯೋಜಿಸಲಾಗುವುದು.

    ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ಯುನಿವರ್ಸಿಟಿ ಯಿಂದ 12 ನೇ ತರಗತಿ ಅಥವಾ ಪಿಯುಸಿಯಲ್ಲಿ ಶೇ.40 ರಷ್ಟು ಅಂಕ ಗಳಿಸಿ ಪಾಸಾಗಿರಬೇಕು.

    ಕನಿಷ್ಠ 06 ತಿಂಗಳ‌ ಅವಧಿಯ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಡಿಪ್ಲೋಮಾ ಅಥವಾ ಪ್ರಮಾಣ ಪತ್ರವನ್ನು ಹೊಂದಿರಬೇಕು. ಎಂಎಸ್ ವರ್ಡ್, ಎಂಎಸ್ ಎಕ್ಸೆಲ್, ಎಂಎಸ್ ಪವರ್ ಪಾಯಿಂಟ್ ಇತ್ಯಾದಿಗಳನ್ನು ಸಂಪೂರ್ಣವಾಗಿ ಬಲ್ಲವರಾಗಿರಬೇಕು.

    ವಯೋಮಿತಿ : ಜನರಲ್ ಕೆಟಗರಿ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ ವಯಸ್ಸು, ಒಬಿಸಿ( ಹಿಂದುಳಿದ ವರ್ಗ) ಅಭ್ಯರ್ಥಿಯ ವಯಸ್ಸು 18 ರಿಂದ 33 ವರ್ಷಗಳ ಒಳಗಿರಬೇಕು.

    ಅರ್ಜಿ ಶುಲ್ಕ : ಒಬಿಸಿ ಮತ್ತು ಜನರಲ್ ವರ್ಗದ ಅಭ್ಯರ್ಥಿಗಳು ರೂ.200 ಪಾವತಿಸಬೇಕಾಗುತ್ತದೆ. ಎಸ್ ಸಿ/ ಎಸ್ ಟಿ/ಇಡಬ್ಲುಎಸ್/ ಬೆಂಚ್ ಮಾರ್ಕ್/ ವಿಕಲಾಂಗ ವ್ಯಕ್ತಿಗಳು/ಮಾಜಿ ಸೈನಿಕರ ಅಭ್ಯರ್ಥಿಗಳಿಗೆ ಆನ್ಲೈನ್ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.

    ಸಿಬಿಟಿ ( ಕಂಪ್ಯೂಟರ್ ಆಧಾರಿತ ಪರೀಕ್ಷೆ) ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಒಟ್ಟು 40% ಅರ್ಹತಾ ಅಂಕಗಳನ್ನು ಗಳಿಸಬೇಕು. ಪರೀಕ್ಷೆಯು ಬಹು ಆಯ್ಕೆ ಪ್ರಶ್ನೆ ಪತ್ರಿಕೆ ( ಎಂಸಿಕ್ಯೂ) ಮಾದರಿ ಪ್ರಶ್ನೆಯನ್ನು ಒಳಗೊಂಡಿರುತ್ತದೆ.

    ನೇಮಕವಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 26,600 ಯಿಂದ ರೂ. 90,000 ಗಳವರೆಗೆ ವೇತನ ನಿಗದಿಪಡಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.

    ಅಧಿಕೃತ ವೆಬ್‌ಸೈಟ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಚಿಕ್ಕಮಗಳೂರಿನಲ್ಲಿ ಅರೆಕಾಲಿಕ ಶಿಕ್ಷಕರ ನೇಮಕ

    ಚಿಕ್ಕಮಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಸರಕಾರಿ ಬಾಲಕಿಯರ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕ‌ ಪ್ರಕಟಣೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಅರೆಕಾಲಿಕ ಶಿಕ್ಷಕರ ಹುದ್ದೆಗಳ‌ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅಭ್ಯರ್ಥಿಗಳು ಸಲ್ಲಿಸಬೇಕಾದ ಅಗತ್ಯ ದಾಖಲೆಗಳು : ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಶೈಕ್ಷಣಿಕ ಅರ್ಹತೆಯ ದಾಖಲೆಗಳು.

    WCD ಇಲಾಖೆಯು ಸರಕಾರಿ ಬಾಲಕಿಯರ ಬಾಲಮಂದಿರ ಸಂಸ್ಥೆಗೆ ವಿಜ್ಞಾನ, ಗಣಿತ, ಯೋಗ/ ದೈಹಿಕ, ಕನ್ನಡ, ಇಂಗ್ಲೀಷ್ , ಸಂಗೀತ ವಿಷಯಗಳಿಗೆ ಅರೆಕಾಲಿಕ ಶಿಕ್ಷಕರನ್ನು ಭರ್ತಿ ಮಾಡಲಾಗುತ್ತಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 30, 2021

    ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಚಿಕ್ಕಮಗಳೂರಿನ ಸರಕಾರಿ ಬಾಲಕಿಯರ ಬಾಲ ಮಂದಿರದ ಅಧೀಕ್ಷಕರ ದೂರವಾಣಿ ಸಂಖ್ಯೆ 08262-295693, 9538448394 ನ್ನು ಸಂಪರ್ಕಿಸಬಹುದು.

  • ಚಿಕ್ಕಮಗಳೂರು ಗ್ರಾಮಕಾಯಕ ಮಿತ್ರ ಹುದ್ದೆಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

    ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ‘ಗ್ರಾಮ ಕಾಯಕ ಮಿತ್ರ’ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಗ್ರಾಮ ಕಾಯಕ ಮಿತ್ರ ರನ್ನು ಗೌರವಧನ ಆಧಾರದಲ್ಲಿ ನೇಮಕ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 03-07-2021

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-07-2021 ಸಂಜೆ 5 ಗಂಟೆಗೆ.

    ಗ್ರಾಮ ಕಾಯಕ ಮಿತ್ರ ಹುದ್ದೆಗಳಿಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.

    ವಿದ್ಯಾರ್ಹತೆ : ಕನಿಷ್ಠ 10 ನೇ ತರಗತಿ ಉತ್ತೀರ್ಣರಾಗಿರಬೇಕು.

    ವಯೋಮಿತಿ : ಅಭ್ಯರ್ಥಿಯು ದಿ. 01-01-2021 ಕ್ಕೆ ಅನ್ವಯಿಸುವಂತೆ 45 ವರ್ಷ ಮೀರಿರಬಾರದು.

    ಹೆಚ್ಚಿನ ವಿವರಗಳಿಗಾಗಿ ತಮ್ಮ ಗ್ರಾಮ ಪಂಚಾಯತಿಗೆ ಸಂಪರ್ಕಿಸಬಹುದಾಗಿದೆ. ಅರ್ಜಿಯು https://chikkamagaluru.nic.in ವೆಬ್‌ಸೈಟ್‌ ನಲ್ಲಿ ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿರುತ್ತದೆ.

  • ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಉದ್ಯೋಗ

    ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 ( ಎನ್ ಎಫ್ ಎಸ್ ಎ) ರ ನಿಬಂಧನೆ ಅಡಿಯಲ್ಲಿ ಕರ್ನಾಟಕ ಸರಕಾರದಿಂದ ಸ್ಥಾಪಿಸಲಾದ ” ಕರ್ನಾಟಕ ರಾಜ್ಯ ‌ಆಹಾರ ಆಯೋಗಕ್ಕೆ ” ಕಚೇರಿ ಕೆಲಸದ ಪೂರ್ಣ ವೇಳೆಯ ಸದಸ್ಯರು ( ಒಂದು ಹುದ್ದೆ ) ಹುದ್ದೆಗಾಗಿ ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ, ಅರ್ಹತಾ ಅಗತ್ಯತೆ,‌ ಅರ್ಜಿ ಫಾರಂ ಹಾಗೂ ಇತರೆ ವಿವರಗಳನ್ನು ಒಳಗೊಂಡ ಸಂಪೂರ್ಣ ಮಾಹಿತಿಗಾಗಿ ಅರ್ಜಿದಾರರು ಇವೆಲ್ಲವನ್ನು ಇಲಾಖೆಯ ವೆಬ್‌ಸೈಟ್‌ : www.ahara.kar.nic.in ಲಿಂಕ್ ನೋಟಿಫಿಕೇಶನ್ ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಲು ಮನವಿ ಮಾಡಲಾಗಿದೆ.

    ಎಲ್ಲಾ ವಿಧದಲ್ಲೂ ಭರ್ತಿಯಾದ ಅರ್ಜಿಗಳನ್ನು‌ ಸ್ವೀಕರಿಸಲು ಕೊನೆಯ ದಿನಾಂಕ : 07-08-2021

  • ಕೇಂದ್ರೀಯ ಉಗ್ರಾಣ ನಿಗಮ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ, ಜುಲೈ 7 ಕಡೇ ದಿನಾಂಕ

    ಕೇಂದ್ರೀಯ ಉಗ್ರಾಣ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ ವಿವರ : ನಿವೃತ್ತ ಸಿಡಬ್ಲ್ಯುಸಿ ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ಸ್, ಟೆಕ್ನಿಕಲ್ ಅಸಿಸ್ಟೆಂಟ್ಸ್, ಜೂನಿಯರ್ ಸೂಪರಿಂಟೆಂಡೆಂಟ್ಸ್, ಸೂಪರಿಂಟೆಂಡೆಂಟ್ ಗಳು, ಉತ್ತರ ಕರ್ನಾಟಕದ ಉಗ್ರಾಣ ಘಟಕಗಳಾದ ಬಿದರ್, ಕಲಬುರಗಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಸೇಡಂ ಮುಂತಾದ ” ಸ್ವಂತ ಮತ್ತು ಬಾಡಿಗೆ ಉಗ್ರಾಣಗಳಲ್ಲಿ ” ಸಲಹೆಗಾರರಾಗಿ ಕೆಲಸ ಮಾಡಲು ಬೇಕಾಗಿದ್ದಾರೆ. ಅರ್ಜಿದಾರರ ವಿರುದ್ಧ ಯಾವುದೇ ವಿಜಿಲೆನ್ಸ್ ಪ್ರಕರಣ ಬಾಕಿ ಇರಬಾರದು.

    ಆಸಕ್ತರು ತಮ್ಮ ರೆಸ್ಯೂಮ್ ಗಳನ್ನು ಜುಲೈ 7, 2021 ರ ಒಳಗಾಗಿ ” ಪ್ರಾದೇಶಿಕ ವ್ಯವಸ್ಥಾಪಕರು, ಕೇಂದ್ರೀಯ ಉಗ್ರಾಣ ನಿಗಮ, ಪ್ರಾದೇಶಿಕ ಕಚೇರಿ, ಬೆಂಗಳೂರು ಇವರ ಹೆಸರಿಗೆ ಅಥವಾ [email protected].,
    [email protected] ಗೆ ಇ-ಮೇಲ್ ಮೂಲಕ ಕಳುಹಿಸಬಹುದು.

    ಹೆಚ್ಚಿನ ಮಾಹಿತಿಗಾಗಿ 080- 23598866, 23598861