Author: Mallika

  • KIMS ಹುಬ್ಬಳ್ಳಿ : ನೇಮಕಾತಿ ಪ್ರಕಟಣೆ

    ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ ( ಕಿಮ್ಸ್) ಸಂಸ್ಥೆಯಲ್ಲಿ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ದಿನಾಂಕ : 18-03-2020 ರಂದು ಪತ್ರಿಕಾ ಪ್ರಕಟಣೆ ಮುಖಾಂತರ ‌ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಿಮ್ಸ್ ವೆಬ್‌ಸೈಟ್‌ www.hubballikims.karnataka.gov.in ರಲ್ಲಿ ಪ್ರಚುರ ಪಡಿಸಲಾಗಿದೆ.

    ಈ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ ದಿನಾಂಕ : 13-08-2021 ರ ಸಾಯಂಕಾಲ 05:00 ಘಂಟೆಯ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಂಸ್ಥೆಯ ಕಾರ್ಯಾಲಯಕ್ಕೆ ಸಲ್ಲಿಸಬಹುದು. ತದನಂತರ ಬಂದ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು. ಹಾಗೂ ಇದೇ ಅಂತಿಮ ಆಯ್ಕೆ ಪಟ್ಟಿಯೆಂದು ಪರಿಗಣಿಸಲಾಗುವುದು.

  • ಸಾರಿಗೆ ನೌಕರರ ತುಟ್ಟಿಭತ್ಯೆ ಹೆಚ್ಚಳ

    ನಾಲ್ಕು ಸಾರಿಗೆ ನಿಗಮಗಳ ನೌಕರರ ತುಟ್ಟಿ ಭತ್ಯೆ ಯನ್ನು ರಾಜ್ಯ ಸರಕಾರವು ಶೇ.11.25 ರಿಂದ ಶೇ.21.50 ಕ್ಕೆ ಹೆಚ್ಚಿಸಲಾಗಿದೆ. ಜುಲೈ ತಿಂಗಳ ವೇತನದಲ್ಲೇ ಹೆಚ್ಚಳ ಮಾಡಿ ಪಾವತಿಸಲು ಆದೇಶಿಸಲಾಗಿದೆ.
    ಜುಲೈ 26 ರಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಅದರಂತೆ ಕೆಎಸ್ ಆರ್ ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ನೌಕರರ ತುಟ್ಟಿಭತ್ಯೆಯನ್ನೂ ಪರಿಷ್ಕರಿಸಲಾಗಿದೆ.

  • ದಿ ಜನತಾ ಕೋ ಅಪರೇಟಿವ್ ಬ್ಯಾಂಕ್ ಲಿ ನಲ್ಲಿ ನೇಮಕಾತಿ ಪ್ರಕಟಣೆ

    ದಿ ಜನತಾ ಕೋ- ಅಪರೇಟಿವ್ ಬ್ಯಾಂಕ್ ಲಿ. ಮಲ್ಲೇಶ್ವರಂ ಬೆಂಗಳೂರು ಇಲ್ಲಿ ಖಾಲಿ ಇರುವ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಾಗಿ ಸಂದರ್ಶನದ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ವಿದ್ಯಾರ್ಹತೆ : ಪದವಿ ಜೊತೆಗೆ (ಎ) ಸಿಎಐಐಬಿ/ಡಿಬಿಎಫ್/ಡಿಪ್ಲೋಮಾ ಇನ್ ಕೋ ಅಪರೇಟಿವ್ ಬಿಜಿನೆಸ್ ಮ್ಯಾನೇಜ್ಮೆಂಟ್ ಅಥವಾ ತತ್ಸಮಾನ ಅರ್ಹತೆ ಅಥವಾ (ಬಿ) ಚಾರ್ಟರ್ಡ್ / ಕಾಸ್ಟ್ ಅಕೌಂಟೆಂಟ್ಸ್ ಅಥವಾ ( ಸಿ) ಯಾವುದೇ ಸ್ನಾತಕೋತ್ತರ ಪದವಿ.

    ವಯೋಮಿತಿ: 35 ವರ್ಷ ಮೇಲ್ಪಟ್ಟು 65 ವರ್ಷದೊಳಗೆ.

    ವೇತನ : ಒಟ್ಟುಗೂಡಿಸಿದ ಮಾಸಿಕ ವೇತನ : ರೂ.1,00,000/-

    ಅನುಭವ: ಬ್ಯಾಂಕಿಂಗ್ ವಲಯದ ಒಂದು ಸಂಸ್ಥೆಯಲ್ಲಿ ಮಧ್ಯಮ/ಹಿರಿಯ ಹಂತದಲ್ಲಿ ಕನಿಷ್ಠ ಹತ್ತು ವರ್ಷಗಳ ಸತತ ಸೇವೆ ಸಲ್ಲಿಸಿದ ಅನುಭವ ಇರುವುದು ಕಡ್ಡಾಯ.

    ಅವಧಿ: ಹುದ್ದೆಯ ಅವಧಿ 6 ವರ್ಷಗಳು.
    ಈ ಹುದ್ದೆಯ ಸ್ವರೂಪ ಗುತ್ತಿಗೆ ನಿಯಮಗೊಳಪಟ್ಟಂತೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09.08.2021

    ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ನಿಗದಿತ ವೆಬ್‌ಸೈಟ್‌ ನಿಂದ ಅರ್ಜಿ ನಮೂನೆಯನ್ನು www.jcbank.in ನಿಂದ ಡೌನ್‌ಲೋಡ್ ಮಾಡಿಕೊಂಡು ಅಥವಾ ಬ್ಯಾಂಕಿನಿಂದ ಖುದ್ದಾಗಿ ಪಡೆದುಕೊಂಡು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿಕೊಂಡು ಮುಚ್ಚಿದ ಲಕೋಟೆಯಲ್ಲಿ ಬ್ಯಾಂಕಿನ‌ ವಿಳಾಸಕ್ಕೆ ಕಳುಹಿಸಬೇಕು.

    ಹೆಚ್ಚಿನ ವಿವರಗಳಿಗಾಗಿ: ದಿ ಜನತಾ ಕೋ ಅಪರೇಟಿವ್ ಬ್ಯಾಂಕ್ ಲಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, 9449842016

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಮಂಡ್ಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಮಂಡ್ಯ ಜಿಲ್ಲೆಯಲ್ಲಿ 2021-22 ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರ್.ಸಿ.ಹೆಚ್.ಕಚೇರಿ 08232-228700 , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, 08232- 224027 ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

    ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 27-07-2021 ರಿಂದ ( ಬೆಳಿಗ್ಗೆ 10 ರಿಂದ ಮಧ್ಯಾಹ್ನ 03.00 ), ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 03-08-2021ರವರೆಗೆ ( ಸಾರ್ವತ್ರಿಕ ರಜಾ ದಿನ ಹೊರತು ಪಡಿಸಿ) ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ. ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ದಿನಾಂಕ 05-08-2021 ಬೆಳಿಗ್ಗೆ 10 ರಿಂದ ಮಧ್ಯಾಹ್ನ. 03.00 ರವರೆಗೆ.

    ಹುದ್ದೆ : ಮಕ್ಕಳ ತಜ್ಞರು, ಹುದ್ದೆಗಳ ಸಂಖ್ಯೆ : 2
    ನೇಮಕ ಮಾಡುವ ಸ್ಥಳ : ಎಸ್.ಎನ್.ಸಿ.ಯು ಕೆ.ಆರ್. ಪೇಟೆ 01 ಮತ್ತು ತಾಯಿ ಆರೋಗ್ಯ ಕಾರ್ಯಕ್ರಮ -01.
    ವಿದ್ಯಾರ್ಹತೆ ; ಡಿ.ಎಂ.ನಿಯೋನೇಟಾಲಜಿ, ಫೆಲೋಷಿಪ್ ಇನ್ ನಿಯೋನೇಟಾಲಜಿ, ಎಂಡಿ ಪಿಡಿಯಾಟ್ರಿಕ್/ ಡಿ.ಎನ್.ಬಿ( ಮಕ್ಕಳ ಆರೋಗ್ಯ), ಡಿಸಿಹೆಚ್ ಹಾಗೂ ಕೆಎಂಸಿ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಹಾಗೂ ತಜ್ಞತೆಯನ್ನು ಕರ್ನಾಟಕದ ಮೆಡಿಕಲ್ ಕೌನ್ಸಿಲ್ ನಲ್ಲಿ ನೊಂದಾಯಿಸಿರಬೇಕು.
    ವಯೋಮಿತಿ : 45 ವರ್ಷ ವಯಸ್ಸಿನೊಳಗಿನವರಿಗೆ ಮೊದಲ ಆದ್ಯತೆ. ಸದರಿ ವಯಸ್ಸಿನವರು ಲಭ್ಯವಿಲ್ಲದಿದ್ದಲ್ಲಿ60 ವರ್ಷದ ವಯೋಮಾನದೊಳಗಿನವರನ್ನು ಪರಿಗಣಿಸಲಾಗುವುದು. ( ದೈಹಿಕವಾಗಿ ಎಲ್ಲಾ ಕರ್ತವ್ಯ ನಿರ್ವಹಿಸಲು ಸದೃಢರಾಗಿರಬೇಕು) ಮಾಸಿಕ ವೇತನ : ರೂ. 1,10,000/-

    ಅರವಳಿಕೆ ತಜ್ಞರು. ಹುದ್ದೆ ಸಂಖ್ಯೆ 1. ಕಾರ್ಯಕ್ರಮ/ನೇಮಕ ಮಾಡುವ ಸ್ಥಳ : ತಾಯಿ ಆರೋಗ್ಯ ( ಎಫ್. ಆರ್.ಯು) ವಿದ್ಯಾರ್ಹತೆ : ಎಂಡಿ ಅನಸ್ತೀಶಿಯ/ಡಿಎನ್ ಬಿ/ಡಿಎ ಹಾಗೂ ಕೆಎಂಸಿ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಹಾಗೂ ತಜ್ಞತೆಯನ್ನು ಕರ್ನಾಟಕದ ಮೆಡಿಕಲ್ ಕೌನ್ಸಿಲ್ ನಲ್ಲಿ ನೋಂದಾಯಿಸಿರಬೇಕು. ವಯೋಮಿತಿ : 70 ವರ್ಷದ ಒಳಗಿರಬೇಕು ಹಾಗೂ ದೈಹಿಕವಾಗಿ ಎಲ್ಲಾ ಕರ್ತವ್ಯ ನಿರ್ವಹಿಸಲು ಸದೃಢರಾಗಿರಬೇಕು. ಮಾಸಿಕ ಸಂಚಿತ ವೇತನ : ರೂ. 1,10,000/-

    ಎಪಿಡಮಾಲಜಿಸ್ಟ್ : ಹುದ್ದೆಗಳ ಸಂಖ್ಯೆ : 1 . ಕಾರ್ಯಕ್ರಮ / ನೇಮಕ ಮಾಡುವ ಸ್ಥಳ : ಐ.ಡಿ.ಎಸ್.ಪಿ ವಿದ್ಯಾರ್ಹತೆ : ಎಂಬಿಬಿಎಸ್ ಜೊತೆಗೆ ಸ್ನಾತಕೋತ್ತರ ಪದವಿ/ಡಿಪ್ಲೋಮಾ ಇನ್ ಪ್ರಿವೆಂಟಿವ್ ಮತ್ತು ಸೋಷಿಯಲ್ ಮೆಡಿಸಿನ್/ ಡಿಪ್ಲೋಮಾ ಇನ್ ಪಬ್ಲಿಕ್‌ ಹೆಲ್ತ್ ಅಥವಾ ಎಪಿಡಮಾಲಜಿ ( ಎಂ.ಪಿ.ಹೆಚ್.ಡಿ, ಡಿ.ಪಿ.ಹೆಚ್, ಎಂ‌ಎಇ) ಅಥವಾ ಬಿ.ಡಿ.ಎಸ್/ಬಿ.ಎ.ಎಂ.ಎಸ್/ ಬಿ.ಹೆಚ್.ಎಂ.ಎಸ್ ಜೊತೆಗೆ ‌ಎಂ.ಪಿ.ಹೆಚ್/ಎಂ.ಎ.ಇ‌ ಮಾಡಿರಬೇಕು. ಹಾಗೂ ಪಬ್ಲಿಕ್ ಹೆಲ್ತ್ ಅಥವಾ ಎಪಿಡಮಾಲಜಿಯಲ್ಲಿ 2 ವರ್ಷದ ಸೇವಾನುಭವ ಇರುವವರಿಗೆ ಆದ್ಯತೆ. ವಯೋಮಿತಿ : 40 ವರ್ಷದ ಒಳಗಿರಬೇಕು. ಮಾಸಿಕ ಸಂಚಿತ ವೇತನ : ರೂ.30,000/-

    ಯೋಗ ಇನ್ಸಟ್ರಕ್ಟರ್. ಹುದ್ದೆಗಳ ಸಂಖ್ಯೆ : 53. ಕಾರ್ಯಕ್ರಮ ‌/ ನೇಮಕ ಮಾಡುವ ಸ್ಥಳ : ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರ ಮಟ್ಟದಲ್ಲಿ. ವಿದ್ಯಾರ್ಹತೆ : ಅಭ್ಯರ್ಥಿಗಳು ಪಿಯುಸಿ ತೇರ್ಗಡೆ ಹೊಂದಿರಬೇಕು. ಯೋಗ ತರಬೇತಿ ಹೊಂದಿರುವ ಸರ್ಟಿಫಿಕೇಟ್ ನ್ನು ಹೊಂದಿರಬೇಕು ಹಾಗೂ‌ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಪ್ರತೀ ಸೆಷನ್ ಗೆ ರೂ.250/- ರಂತೆ ಮಾಸಿಕ ಗರಿಷ್ಠ 20 ಸೆಷನ್ ಗಳಿಗೆ ಗೌರವಧನ ನೀಡಲಾಗುವುದು. ಸ್ಥಳೀಯರಿಗೆ ಆದ್ಯತೆ. ಗರಿಷ್ಠ 45 ವರ್ಷ.

    ಲ್ಯಾಬ್ ಟೆಕ್ನಿಶಿಯನ್ : ಹುದ್ದೆ ಸಂಖ್ಯೆ 1. ಕಾರ್ಯಕ್ರಮ/ ನೇಮಕ ಮಾಡುವ ಸ್ಥಳ : ಎನ್.ಟಿ.ಇ.ಸಿ ಕಾರ್ಯಕ್ರಮ. ( ಪ್ರಾ.ಆ.ಕೇಂದ್ರ. ಗಂಜಿಗೆರೆ ಕೆ.ಆರ್.ಪೇಟೆ) ವಿದ್ಯಾರ್ಹತೆ : ಇಂಟರ್ ಮೀಡಿಯೆಟ್ ( 10+2) ಮತ್ತು ಡಿಪ್ಲೋಮಾ/ ಸರ್ಟಿಫೈಡ್ ಕೋರ್ಸ್ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ/ ಸಮಾನ ಪದವಿ. ಒಂದು ವರ್ಷ ಆರ್.ಎನ್.ಟಿ.ಪಿ.ಸಿ ಕಾರ್ಯಕ್ರಮ / ಸ್ಪೂಟಮ್ ಸ್ಕಿಯರ್ ಮೈಕ್ರೋಸ್ಕೋಪಿ. ಹೆಚ್ಚುವರಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ( ಉದಾಹರಣೆ ಪದವಿ) ಆದ್ಯತೆ ನೀಡಲಾಗುವುದು. ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ವಯೋಮಿತಿ : 45 ವರ್ಷದ ಒಳಗಿರಬೇಕು. ಮಾಸಿಕ ಸಂಚಿತ ವೇತನ : ರೂ. 13,500/-

    ವಿಶೇಷ ಸೂಚನೆ : ಸದರಿ ಪ್ರಕಟಣೆಯ ರೋಲಿಂಗ್ ಪ್ರಕಟಣೆಯಾಗಿದ್ದು, ಪ್ರಕಟಣಾ ದಿನದಿಂದ 31 ಮಾರ್ಚ್ 2022 ರವರೆಗೆ ಚಾಲ್ತಿಯಲ್ಲಿರುತ್ತದೆ. ಆದ್ದರಿಂದ ರೋಸ್ಟರ್ ಅನ್ವಯವಾಗುವುದಿಲ್ಲ. ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳು ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಮೂಲ ಅಂಕಪಟ್ಟಿಗಳು, ಎಲ್ಲಾ ಪ್ರಮಾಣ ಪತ್ರಗಳು, ಭಾವಚಿತ್ರ ಹಾಗೂ ಗುರುತಿನ ಚೀಟಿ ಹಾಗೂ ಸದರಿ ದಾಖಲೆಗಳ 01 ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ನಿಗದಿತ ಸಮಯದೊಳಗೆ ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗುವುದು. ಸದರಿ ನೇಮಕಾತಿ ಪ್ರಕ್ರಿಯೆಯು ಜಿಲ್ಲಾ ಆರೋಗ್ಯ ಸಂಘದ ಆದೇಶಕ್ಕೆ ಅನುಗುಣವಾಗಿ ಮುಂದಿನ ಮಾರ್ಪಾಡುಗಳಿಗೆ ಒಳಪಟ್ಟಿರುತ್ತದೆ.

  • ನಮ್ಮ ಮೆಟ್ರೋದಲ್ಲಿ ವಿವಿಧ ಉದ್ಯೋಗವಕಾಶಗಳು

    ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ( ಬಿಎಂಆರ್ ಸಿಎಲ್) ನಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಈ ಕೆಳಕಂಡ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.

    ಹುದ್ದೆ : ಮ್ಯಾನೇಜರ್ ( ವ್ಯವಸ್ಥಾಪಕರು) ( F &A) -01 ಹುದ್ದೆ
    ಅಸಿಸ್ಟೆಂಟ್ ಮ್ಯಾನೇಜರ್ ( ಸಹಾಯಕ ವ್ಯವಸ್ಥಾಪಕರು) ( ಸ್ಟೋರ್ಸ್) -01 ಹುದ್ದೆ
    ಅಸಿಸ್ಟೆಂಟ್ ಮ್ಯಾನೇಜರ್ ( ಸಹಾಯಕ ವ್ಯವಸ್ಥಾಪಕರು) ( ಹೆಚ್ ಆರ್) – 01 ಹುದ್ದೆ

    ವಯೋಮಿತಿ : ಮ್ಯಾನೇಜರ್ ಹುದ್ದೆಗೆ ಅಭ್ಯರ್ಥಿಗಳಿಗೆ ಕನಿಷ್ಠ 45 ವರ್ಷ, ಅಸಿಸ್ಟೆಂಟ್ ಮ್ಯಾನೇಜರ್ ( ಸ್ಟೋರ್ಸ್ ) 40 ವರ್ಷ, ಅಸಿಸ್ಟೆಂಟ್ ಮ್ಯಾನೇಜರ್ ( ಹೆಚ್ ಆರ್ ) 40 ವರ್ಷ ಮೀರಿರಬಾರದು.

    ವೇತನ : ಮ್ಯಾನೇಜರ್ ( ಎಫ್ ಎ) ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 75,000/- ವೇತನವಿರುತ್ತದೆ. ಅಸಿಸ್ಟೆಂಟ್ ಮ್ಯಾನೇಜರ್ ( ಸ್ಟೋರ್ಸ್ ) ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ( ಹೆಚ್ ಆರ್ ) ಹುದ್ದೆಗೆ ರೂ.50,000/- ವೇತನವಿರುತ್ತದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-08-2021 ( ಸಂಜೆ 4 ಗಂಟೆಗೆ)

    ಅರ್ಜಿ ಸಲ್ಲಿಕೆ ಹೇಗೆ ? ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು. ಅರ್ಜಿಯ ಲಕೋಟೆ ಮೇಲೆ Application for the post of( post name) ಎಂದು ಬರೆದಿರಬೇಕು. ಅರ್ಜಿಯನ್ನು ವಿಳಾಸ General Manager ( HR), Bangalore Metro Rail Corporation Limited, 3rd Floor, BMTC Complex, K.H.Road, Shantinagar, Bangalore – 560027 ಕ್ಕೆ ಕಳುಹಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

  • ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಕುಲಪತಿ ಹುದ್ದೆಯ ನೇಮಕಾತಿ

    ಕೋಲಾರದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯ ಹುದ್ದೆಗೆ ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯಗಳ ಅಧಿನಿಯಮ -2000 ಪ್ರಕರಣ 14(2) ರ ಉಪಬಂಧಗಳನುಸಾರ ನೇಮಕಾತಿ ಮಾಡಲು ಈ ಕೆಳಕಂಡ ಅರ್ಹತೆಯುಳ್ಳ ಪ್ರಾಧ್ಯಾಪಕರ/ ಶಿಕ್ಷಣ ತಜ್ಞರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಉನ್ನತ ಮಟ್ಟದ ಆಡಳಿತ, ಶೈಕ್ಷಣಿಕ ಹಾಗೂ ಸಂಶೋಧನಾ ಸಾಮರ್ಥ್ಯ, ಪ್ರಾಮಾಣಿಕತೆ, ಸಮಗ್ರತೆ/ ಋಜತ್ವ ನೈತಿಕ ಮೌಲ್ಯಗಳನ್ನು ಹಾಗೂ ಸಾಂಸ್ಥಿಕ ಬದ್ಧತೆಯನ್ನು ಹೊಂದಿರತಕ್ಕದ್ದು.

    ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿದ ಅಥವಾ ವಿಖ್ಯಾತ ಸಂಶೋಧನಾ/ ಅಥವಾ ಶೈಕ್ಷಣಿಕ ಆಡಳಿತ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷಗಳು ಕಾರ್ಯನಿರ್ವಹಿಸಿದ ಅನುಭವವನ್ನು ಹಾಗೂ ರುಜುವಾತದ ಶೈಕ್ಷಣಿಕ ಅಗ್ರಗಾಮಿತ್ವವನ್ನು ಹೊಂದಿರತಕ್ಕದ್ದು.

    ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯ ನೇಮಕಾತಿಗೆ ಉಮೇದುವಾರಿಕೆ ಸಲ್ಲಿಸಬಯಸುವ ಆಸಕ್ತರು ತಮ್ಮ ವಿದ್ಯಾರ್ಹತೆ, ಸಂಶೋಧನೆ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಅನುಭವಗಳು, ಸಾಧನೆಗಳು ಹಾಗೈ ಇತರೆ ವಿವರಗಳನ್ನು ಯುಜಿಸಿಯಿಂದ‌ ನಿಗದಿಪಡಿಸಲಾಗಿರುವ ನಮೂನೆಯಲ್ಲಿ ಭರ್ತಿ ಮಾಡಿ ಮುದ್ರಿತ ಅರ್ಜಿಗಳನ್ನು ತ್ರಿಪ್ರತಿಗಳಲ್ಲಿ ಈ ನೇಮಕಾತಿ ಜಾಹೀರಾತು ಪ್ರಕಟಣೆಯಾದ 15 ದಿನದೊಳಗೆ ಸ್ವೀಕೃತವಾಗುವಂತೆ ” ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, 6 ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು – 560001 ” ಇವರಿಗೆ ಸಲ್ಲಿಸತಕ್ಕದ್ದು.

    ಹೆಚ್ಚಿನ ವಿವರ ಈ ಕೆಳಗೆ ನೀಡಲಾಗಿದೆ.