Author: Mallika

  • ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಉಪವ್ಯವಸ್ಥಾಪಕರು ( ಕಾನೂನು) ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

    ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಬೆಂಗಳೂರು ಇಲ್ಲಿ ಉಪವ್ಯವಸ್ಥಾಪಕರು ( ಕಾನೂನು) ( ಕಲ್ಯಾಣ ಣ ಕರ್ನಾಟಕ ವ್ಯಾಪ್ತಿಗೆ ಮೀಸಲು) ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಸಂಸ್ಥೆಯಿಂದ ಈಗಾಗಲೇ ಪತ್ರಿಕಾ ಪ್ರಕಟಣೆ ಸಂಖ್ಯೆ : ಕರಾಹಸಂ‌/ಪ್ರಕ/ಸಿಬ್ಬಂದಿ/ನೇಮಕಾತಿ/2021-22, ದಿನಾಂಕ 22.06.2021 ರ ಪ್ರಕಾರ ನೀಡಲಾಗಿದ್ದು, ಅರ್ಜಿ ಸಲ್ಲಿಕೆ ನಿಗದಿತ ದಿನಾಂಕವನ್ನು ಕೋವಿಡ್ – 19 ರ ಸಾಂಕ್ರಾಮಿಕ ಹಿನ್ನೆಲೆಯಲ್ಲಿ 10-08-2021 ರ ಸಂಜೆ 5.00 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿರುತ್ತದೆ.

    ಹೆಚ್ಚಿನ ವಿವರಗಳು ಸಂಸ್ಥೆಯ ವೆಬ್‌ಸೈಟ್‌ https://ksfc.karnataka.gov.in ನಲ್ಲಿ ಲಭ್ಯವಿರುತ್ತದೆ.

  • ಪೊಲೀಸ್ ಇಲಾಖೆಯಲ್ಲಿ 250 ಅನುಯಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಎಸ್ ಎಸ್ ಎಲ್ ಸಿ ಪಾಸಾದವರಿಗೆ ಮೊದಲ ಆದ್ಯತೆ

    ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆಗಳಲ್ಲಿ ಖಾಲಿಯಿರುವ ಅನುಯಾಯಿ (ಪುರುಷ) ( ಮಿಕ್ಕುಳಿದ) ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಹುದ್ದೆಗಳನ್ನು ಒಳಗೊಂಡಂತೆ ಖಾಲಿ ಹುದ್ದೆಗಳ ನೇರ ನೇಮಕಾತಿ ಕುರಿತು ಅಧಿಸೂಚನೆಯನ್ನು ಪ್ರಕಟಿಸಿದೆ.

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 30-07-2021 ಬೆಳಿಗ್ಗೆ 10.00 ಗಂಟೆಯಿಂದ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-08-2021 ಸಂಜೆ 06.00 ಗಂಟೆಯವರೆಗೆ
    ಅಧಿಕೃತ ಬ್ಯಾಂಕ್ ಶಾಖೆಗಳ/ ಅಂಚೆ ಕಚೇರಿ ವೇಳೆಯಲ್ಲಿ ಶು ಪಾವತಿಸಲು ಕೊನೆಯ ದಿನಾಂಕ : 01-09-2021

    ಹುದ್ದೆಗಳ ವಿವರ : ಕರ್ನಾಟಕ ರಾಜ್ಯ ಪೊಲೀಸ್ ಪಡೆಗಳಲ್ಲಿ ನೇರ ನೇಮಕಾತಿಯಡಿ ಖಾಲಿಯಿರುವ ಅನುಯಾಯಿ( ಪುರುಷ) ಹುದ್ದೆಗಳ ವಿವರ :

    ಅಡುಗೆಯವರು – 81 ಹುದ್ದೆಗಳು
    ಕ್ಷೌರಿಕ – 45 ಹುದ್ದೆಗಳು
    ಧೋಭಿ – 53 ಹುದ್ದೆಗಳು
    ಕಸ ಗುಡಿಸುವವರು- 58 ಹುದ್ದೆಗಳು
    ನೀರು ತರುವವರು- 13 ಹುದ್ದೆಗಳು

    ಒಟ್ಟು ಹುದ್ದೆ ಸಂಖ್ಯೆ- 250

    ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕದಂದು ಅಂದರೆ 30-08-2021 ರಂದು ಅಭ್ಯರ್ಥಿಗೆ ಕನಿಷ್ಠ 18 ವಯಸ್ಸಾಗಿರಬೇಕು. ಹಾಗೂ ಈ ಕೆಳಕಂಡ ವಯಸ್ಸು ಮೀರಿರಬಾರದು.

    ಸಾಮಾನ್ಯ ಪುರುಷ ಅಭ್ಯರ್ಥಿಗಳಿಗೆ – ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 35 ವರ್ಷ, ಇತರೆ ಅಭ್ಯರ್ಥಿಗಳಿಗೆ 30 ವರ್ಷ.

    ವಿದ್ಯಾರ್ಹತೆ : ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ( ವೃಂದ ಮತ್ತು ನೇಮಕಾತಿ) ನಿಯಮ 2020 ರ ಪ್ರಕಾರ ಅನುಯಾಯಿ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ 30-08-2021ಕ್ಕೆ ಹೊಂದಿರಬೇಕು.

    ಅರ್ಜಿ ಶುಲ್ಕ : ಸಾಮಾನ್ಯ ಅರ್ಹತೆ, ಪ್ರವರ್ಗ 2 ( ಎ), 2 (ಬಿ), 3 (ಎ), 3( ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ.250/-, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100/-

    ನಿಗದಿತ ಶುಲ್ಕವನ್ನು ನಗದು/ ಆನ್ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಚೇರಿಯಲ್ಲಿ ಅಥವಾ ಹೆಚ್.ಡಿ.ಎಫ್.ಸಿ ಬ್ಯಾಂಕ್ ನ ಶಾಖೆಯಲ್ಲಿ ಪಾವತಿಸಿ ನಂತರ ಚಲನ್ ನ ಅಭ್ಯರ್ಥಿ ಪ್ರತಿಯನ್ನು ಇಟ್ಟುಕೊಂಡಿರತಕ್ಕದ್ದು.

    ಅರ್ಜಿಗಳನ್ನು ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://recruitment.ksp.gov.in ನಲ್ಲಿ ಆನ್ಲೈನ್ ಮೂಲಕ ಮಾತ್ರ ಸಲ್ಲಿಸತಕ್ಕದ್ದು.

    ನೋಟಿಫಿಕೇಶನ್

  • ಜಿಲ್ಲಾ ಪಂಚಾಯತ ಕಾರ್ಯಾಲಯ ಹಾವೇರಿ : ವಿವಿಧ ಹುದ್ದೆ

    ಹಾವೇರಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕರು ( ಅರಣ್ಯ/ಕೃಷಿ/ತೋಟಗಾರಿಕೆ) ಮತ್ತು ಬಿ.ಎಫ್.ಟಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ತಾಂತ್ರಿಕ ಸಹಾಯಕರು ( ಅರಣ್ಯ) – 3 ಹುದ್ದೆ: ಬಿ.ಎಸ್ಸಿ ( ಅರಣ್ಯ) ವಿದ್ಯಾರ್ಹತೆಯನ್ನು ಹೊಂದಿರಬೇಕು.

    ತಾಂತ್ರಿ ಸಹಾಯಕರು ( ಕೃಷಿ) :3 ಹುದ್ದೆ: ಬಿಎಸ್ಸಿ (ಕೃಷಿ) ವಿದ್ಯಾರ್ಹತೆಯನ್ನು ಹೊಂದಿರಬೇಕು.

    ತಾಂತ್ರಿಕ ಸಹಾಯಕರು ( ತೋಟಗಾರಿಕೆ) : 8 ಹುದ್ದೆ: ಬಿಎಸ್ಸಿ ( hori) ವಿದ್ಯಾರ್ಹತೆಯನ್ನು ಹೊಂದಿರಬೇಕು.

    ಬಿ.ಎಫ್.ಟಿ( ಬರಿಗಾಲು ತಜ್ಞ) :8 ಹುದ್ದೆ: ಈ ಹುದ್ದೆಗೆ ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿರಬೇಕು.

    ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ https://haveri.nic.in/ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 29-07-2021
    ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12-08-2021
    ಮೂಲ ದಾಖಲೆಗಳನ್ನು ಪರಿಶೀಲಿಸಲು ‌ನಿಗದಿಪಡಿಸಿರುವ ದಿನಾಂಕ 24-08-2021 ರಂದು ಸಂಜೆ 5 ಹಾಜರಾಗುವ ಅಭ್ಯರ್ಥಿಗಳ ದಾಖಲೆಗಳನ್ನು ಮಾತ್ರ ಪರಿಶೀಲಿಸಲಾಗುವುದು.

    ಆನ್ಲೈನ್ ಮೂಲಕ ಇಲ್ಲಿ ಅರ್ಜಿ ಸಲ್ಲಿಸಿ

  • ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಪದವೀಧರರಿಗೆ ನೇಮಕಾತಿ

    ರಾಷ್ಟ್ರೀಯ ಆರೋಗ್ಯ ಅಭಿಯಾನ ( ಎನ್ ಎಚ್ ಎಂ) ಯೋಜನೆಯಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಿಂದ ‌ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-08-2021

    ಹುದ್ದೆಗಳ ವಿವರ : ಸಲಹೆಗಾರ ಕನ್ಸಲ್ಟೆಂಟ್ – ಮೆಟರ್ನಲ್ ಹೆಲ್ತ್ ಆಂಡ್ ಫ್ಯಾಮಿಲಿ ಪ್ಲಾನಿಂಗ್-1
    ಲಕ್ಷ್ಯ ಕಾರ್ಯಕ್ರಮ ಸಮನ್ವಯಕಾರ – 1
    ಎಚ್ ಎಂಐಎಸ್ ಆಂಡ್ ಎಂಸಿಟಿಎಸ್ ಸಮನ್ವಯಕಾರ – 1 ಹುದ್ದೆ
    ಸಲಹೆಗಾರರು ( ಎಚ್ ಆಂಡ್ ಪಿ)- 1
    ಕಾರ್ಯಕ್ರಮ ಸಹಾಯಕ – 2
    ಸಿಎಸ್ ಟಿ ಸಮನ್ವಯಕಾರರು- 1
    ಸಲಹೆಗಾರರು ಚೈಲ್ಡ್ -1

    ವೇತನ : ಈ ಹುದ್ದೆಗೆ ಅನುಗುಣವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,000/- ರಿಂದ ರೂ.60,000/- ಗಳವರೆಗೆ ವೇತನ ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ : ಕಂಪ್ಯೂಟರ್ ಸೈನ್ಸ್/ಇನ್ ಫರ್ಮೇಷನ್ ಸೈನ್ಸ್ ನಲ್ಲಿ ಬಿಇ, ಸ್ಟಟಿಸ್ಟಿಕ್ಸ್, ಗಣಿತದಲ್ಲಿ ಎಂಎಸ್ಸಿ/ಅರ್ಥಶಾಸ್ತ್ರದಲ್ಲಿ ಎಂಎ, ಬಿಬಿಎ/ಬಿಬಿಎಂ, ಎಂಬಿಬಿಎಸ್, ಎಂಡಿ, ಬಿಡಿಎಸ್, ಮಾಸ್ಟರ್ ಇನ್ ಪಬ್ಲಿಕ್ ಹೆಲ್ತ್, ಮಾಸ್ಟರ್ ಇನ್ ಅಪ್ಲೈಡ್ ಎಪಿಡೆಮಿಯೋಲಜಿ ( ಎಂಇಎ), ಎಂಎಸ್ ಡಬ್ಲ್ಯೂ ಮಾಡಿದ್ದು, ಕನಿಷ್ಠ 1-3 ವರ್ಷ ವೃತ್ತಿ ಅನುಭವ ಇರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ.

    ವಯೋಮಿತಿ : ಹುದ್ದೆಗಳಿಗನುಸಾರವಾಗಿ ಅಭ್ಯರ್ಥಿಗಳು ಗರಿಷ್ಠ 40 ರಿಂದ 65 ವರ್ಷ ವಯೋಮಿತಿಯೊಳಗಿನವರಾಗಿರಬೇಕು.

    ಈ ಹುದ್ದೆಗಳಿಗೆ ಇಲಾಖೆಯ ವೆಬ್‌ಸೈಟ್‌ ನಲ್ಲಿ ನೀಡಿದ ಗೂಗಲ್ ಫಾರ್ಮ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದವರ ಪೈಕಿ ಶಾರ್ಟ್ ಲಿಸ್ಟ್ ಆದವರನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು. ಈ ಹುದ್ದೆಗಳನ್ನು ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಆಯಿಲ್ ಇಂಡಿಯಾ ಲಿಮಿಟೆಡ್ ನಲ್ಲಿ 115 ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ,ಡಿಪ್ಲೋಮಾ, ಪದವಿ ಪಡೆದವರಿಗೆ ಆದ್ಯತೆ

    ಆಯಿಲ್ ಇಂಡಿಯಾ ಲಿಮಿಟೆಡ್ ನಲ್ಲಿ ಹಲವು ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಿದೆ.

    ಹುದ್ದೆ: ಅಸಿಸ್ಟೆಂಟ್ ವೆಲ್ಡರ್, ಅಸಿಸ್ಟೆಂಟ್ ಫಿಟ್ಟರ್, ಅಸಿಸ್ಟೆಂಟ್ ಡೀಸೆಲ್‌ ಮೆಕ್ಯಾನಿಕ್, ಇಲೆಕ್ಟ್ರಿಕಲ್ ಸೂಪರ್ ವೈಸರ್ ಮತ್ತು ಇತರೆ ಹಲವು ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿದೆ.

    ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಎಸ್ ಎಸ್ ಎಲ್ ಸಿ/ ಡಿಪ್ಲೊಮಾ/ ಪದವಿಯನ್ನು ಹೊಂದಿರಬೇಕು.

    ನೇರ ಸಂದರ್ಶನ ದಿನಾಂಕ : ಆಗಸ್ಟ್ 16 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಸಲಿದೆ.

    ನೋಟಿಫಿಕೇಶನ್

  • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಹಾಸನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ರಾಷ್ಟ್ರೀಯ ಆರೋಗ್ಯ ಅಭಿಯಾನದ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಹಾಸನ ಇಲ್ಲಿ ಎನ್.ಟಿ.ಇ.ಪಿ ಗುತ್ತಿಗೆ ನೇಮಕಾತಿ ಮಾರ್ಗಸೂಚಿ ಅನ್ವಯ ಅನುಮೋದನೆಗೊಂಡು ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ ಮತ್ತು ಹುದ್ದೆಗೆ ಸಂಬಂಧಪಟ್ಟ ಮಾಹಿತಿಯನ್ನು ಈ ಕಚೇರಿಯ ವೇಳೆಯಲ್ಲಿ ಪಡೆಯಲು ತಿಳಿಸಿದೆ.

    ಹುದ್ದೆಯ ಹೆಸರು : 1. ಕ್ಷಯರೋಗ ವೀಕ್ಷಕರು ( TBHV)
    ಹುದ್ದೆಗಳ ಸಂಖ್ಯೆ : 02
    ವಿದ್ಯಾರ್ಹತೆ : ವಿಜ್ಞಾನದಲ್ಲಿ ಪದವಿ ಹೊಂದಿರಬೇಕು.

    1. ಪ್ರಯೋಗಶಾಲಾ ತಂತ್ರಜ್ಞಾನ (LT): ಹುದ್ದೆಗಳ ಸಂಖ್ಯೆ : 01, ವಿದ್ಯಾರ್ಹತೆ : 10+2 (PUC) DMLT ಅಭಿಯಾನ ನಿರ್ದೇಶಕರು, ಎನ್.ಹೆಚ್.ಎಂ ರವರ ಪತ್ರದನ್ವಯ ಕಂಪ್ಯೂಟರ್ ಸಾಕ್ಷರತೆಯನ್ನು ಸರಕಾರದಿಂದ ಅಥವಾ ಸರಕಾರದ ಮಾನ್ಯತೆ ಹೊಂದಿರುವ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗಳಿಂದ ಪಡೆದಿರುವ ಕಂಪ್ಯೂಟರ್ ಸಾಕ್ಷರತಾ ಪ್ರಮಾಣ ಪತ್ರವನ್ನು ಮೇಲ್ಕಂಡ 2 ಹುದ್ದೆಗಳಿಗೂ ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದೆ.

    ಭರ್ತಿ ಮಾಡಿದ ಅರ್ಜಿ ಮತ್ತು ಮೂಲ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿದ ನಕಲು ಪ್ರತಿಗಳೊಂದಿಗೆ ದಿನಾಂಕ 11-08-2021 ರಂದು ಬೆಳಿಗ್ಗೆ 10.30 ಕ್ಕೆ ಸರಿಯಾಗಿ ದಾಖಲಾತಿ ಪರಿಶೀಲನೆಗಾಗಿ ಹಾಜರಾಗಲು ತಿಳಿಸಿದೆ.