Blog

  • ಕಲಬುರಗಿ 331 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

    ಕಲಬುರಗಿ ಜಿಲ್ಲೆಯ ಮಹಿಳಾ‌ ಮಕ್ಕಖ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 09 ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 51+4=55 ಅಂಗನವಾಡಿ ಕಾರ್ಯಕರ್ತೆ ಮತ್ತು 276 ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

    ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಾರಂಭಿಕ ದಿನಾಂಕ: 01-07-2021
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-07-2021

    ವಯೋಮಿತಿ : 18 ರಿಂದ 35 ವಯೋಮಿತಿಯೊಳಗಿನ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್ ಎಸ್ ಎಲ್ ಸಿ ತೇರ್ಗಡೆಯಾಗಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 4 ನೇ ತರಗತಿ ತೇರ್ಗಡೆಯಾಗಿದ್ದು ಹಾಗೂ 9 ನೇ ತರಗತಿ ತೇರ್ಗಡೆಯಾಗಿರಬೇಕು.

    ಅಭ್ಯರ್ಥಿಗಳು ಎಲ್ಲಾ ದಾಖಲೆಗಳೊಂದಿಗೆ ಸಂಬಂಧಿಸಿದ ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 31-07-2021 ರ ಅಪರಾಹ್ನ 5.30 ಗಂಟೆಯೊಳಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.

  • ದಿ.ರಾಜಾಜಿನಗರ ಕೋಅಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ ವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ದಿ.ರಾಜಾಜಿನಗರ ಕೋಅಪರೇಟಿವ್ ಬ್ಯಾಂಕ್ ಲಿಮಿಟೆಡ್ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14/07/2021 ರ ತನಕ ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಸಹಾಯಕ ವ್ಯವಸ್ಥಾಪಕರು/ ಲೆಕ್ಕಿಗರು – 2 ಹುದ್ದೆ
    ಸಹಾಯಕ ಲೆಕ್ಕಾಧಿಕಾರಿ/ಆಂತರಿಕ ಲೆಕ್ಕಾಧಿಕಾರಿ/ಕ್ಷೇತ್ರಾಧಿಕಾರಿ/ಮೇಲ್ವಿಚಾರಕರು/ಮುಖ್ಯ ನಗದು ಅಧಿಕಾರಿ – 5 ಹುದ್ದೆಗಳು
    ಕಿರಿಯ ಸಹಾಯಕ – 2 ಹುದ್ದೆಗಳು
    ಭದ್ರತಾ ರಕ್ಷಕ/ವಾಹನ ಚಾಲಕರು – 4 ಹುದ್ದೆಗಳು

    ವಿದ್ಯಾರ್ಹತೆ : ಎಂ.ಸಿ.ಎ/ ಜೆ.ಡಿ.ಸಿ ಸಹಕಾರ ಬ್ಯಾಂಕ್ ಗಳಿಗೆ ಸಂಬಂಧಪಟ್ಟಂತೆ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು, ಇತರೆ ಸಹಕಾರಿ ಬ್ಯಾಂಕ್ ಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇರುವವರು, ಕನ್ನಡ ಓದಲು, ಬರೆಯಲು, ಬೆರಳಚ್ಚು ಮಾಡಲು ಬರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

    ಮುಚ್ಚಿದ ಲಕೋಟೆಯಲ್ಲಿ ಯಾವ ಹುದ್ದೆಗೆ ಎಂದು ಬರೆದು ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ವೈಯಕ್ತಿಕ‌ ವಿವರ, ಇತ್ತೀಚಿನ ಭಾವಚಿತ್ರ, ಇತರೆ ದಾಖಲೆಗಳ ಜೊತೆಗೆ ದಿನಾಂಕ 14/07/2021 ರ ಒಳಗೆ ಸಲ್ಲಿಸಬೇಕು.

    ಅರ್ಜಿ ಸಲ್ಲಿಸುವ ವಿಳಾಸ : ಪ್ರಧಾನ ವ್ಯವಸ್ಥಾಪಕರು, ಅಂಚೆಪೆಟ್ಟಿಗೆ 1036, ದಿ.ರಾಜಾಜಿನಗರ ಕೋ ಅಪರೇಟಿವ್ ಬ್ಯಾಂಕ್ ಲಿಮಿಟೆಡ್, ರಾಜಾಜಿನಗರ ಪೋಸ್ಟ್ ಆಫೀಸ್, ರಾಜಾಜಿನಗರ, ಬೆಂಗಳೂರು – 560010

  • 1242 ಸಹಾಯಕ ಪ್ರಾಧ್ಯಾಪಕ ಮತ್ತು 310 ಪ್ರಾಂಶುಪಾಲ ಹುದ್ದೆಗಳ ನೇಮಕಕ್ಕೆ ಸರಕಾರ ಆದೇಶ

    ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರ ಹುದ್ದೆಗಳಿಗೆ ರಾಜ್ಯ ಸರಕಾರವು ನೇರ ನೇಮಕಾತಿ ಮಾಡಲು ಸೂಚನೆ ನೀಡಿದೆ. ಈ ಬಗ್ಗೆ ಸರಕಾರದ ಅಪರ ಕಾರ್ಯದರ್ಶಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದು, ವಿವಿಧ ವಿಶ್ವವಿದ್ಯಾಲಯಗಳು ಹೊರಡಿಸಿರುವ ಸುತ್ತೋಲೆಗಳಲ್ಲಿ, 2021-22 ಶೈಕ್ಷಣಿಕ ವರ್ಷ ಬರುವ ಆಗಸ್ಟ್ ನಿಂದ ನವೆಂಬರ್ ಒಳಗಾಗಿ ಪ್ರಾರಂಭಿಸುವುದಾಗಿ ತಿಳಿಸಿದರು.

    ಆನ್ಲೈನ್ ತರಗತಿಗಳು ಅನುದಾನಿತ ಪದವಿ ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಆರಂಭವಾಗಿದ್ದು, ಸರಕಾರದ ಅನುಮತಿ ಮೇರೆಗೆ, ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಆದೇಶ ನೀಡುವಂತೆ ಸೂಚಿಸಿದೆ.

    ರಾಜ್ಯದ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರು ಮತ್ತು 310 ಪ್ರಾಂಶುಪಾಲರ ಹುದ್ದೆಗಳನ್ನು ನೇಮಕಾತಿ ಮಾಡಲು ಸರಕಾರ ಅನುಮತಿಯನ್ನು ನೀಡಿದೆ.

  • BMRCL : ಸೀನಿಯರ್ ಅರ್ಬನ್ ಪ್ಲಾನರ್ ಹುದ್ದೆ

    ಬಿಎಂಆರ್ ಸಿಎಲ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹತೆ ಹೊಂದಿದ ಮತ್ತು ಅನುಭವವುಳ್ಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

    ಹುದ್ದೆ: ಸೀನಿಯರ್ ಅರ್ಬನ್ ಪ್ಲಾನರ್ ( ಕನ್ಸಲ್ಟೆಂಟ್) – 01 ಹುದ್ದೆ

    ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ : 15-07-2021 ರಂದು ಸಂಜೆ 5.00 ಗಂಟೆಗೆ.

    ದಾಖಲೆ ಪತ್ರಗಳೊಡನೆ ಸಹು ಮಾಡಿದ ಮುದ್ರಿತ ಅರ್ಜಿ ಸ್ವೀಕರಿಸಲು ಕಡೆಯ ದಿನಾಂಕ: 18-07-2021

    ವಿದ್ಯಾರ್ಹತೆ : ಬ್ಯಾಚುಲರ್ ಡಿಗ್ರಿ ಇನ್ ಪ್ಲ್ಯಾನಿಂಗ್/ ಆರ್ಕಿಟೆಕ್ಚರ್/ಸಿವಿಲ್ ಇಂಜಿನಿಯರಿಂಗ್/ಜಿಯೋಗ್ರಫಿ+ ಮಾಸ್ಟರ್ಸ್ ಡಿಗ್ರಿ ಇನ್ ಅರ್ಬನ್ ಪ್ಲಾನಿಂಗ್/ಡಿಸೈನ್ ಮಾಡಿರಬೇಕು.

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.75,000/- ರಿಂದ ರೂ.1,00,000/- ರವರೆಗೆ ವೇತನವಿರುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ವಿತ್ತೀಯ ಕಾರ್ಯನೀತಿ ಸಂಸ್ಥೆ ( ವಿಕಾಸಂ) : ವಿವಿಧ ಹುದ್ದೆ

    ಯುನಿಸೆಫ್ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ಸರಕಾರದ ಮಕ್ಕಳ ಆಯವ್ಯಯ ಮತ್ತು ಸಂಶೋಧನೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆ ವಿವರ ಈ ಕೆಳಗಿನಂತಿವೆ:

    ಹುದ್ದೆ : ಸಂಶೋಧನಾ ಅಧಿಕಾರಿಗಳು ಮತ್ತು ಆಡಳಿತ ಸಮನ್ವಯ ಅಧಿಕಾರಿಗಳ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಗುತ್ತಿಗೆ ಆಧಾರದಲ್ಲಿ ಆರು ತಿಂಗಳ ಅವಧಿಗಾಗಿ, ಅರ್ಹ ಮತ್ತು ಅನುಭವವುಳ್ಳ ಅಭ್ಯರ್ಥಿಗಳಿಂದ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಪೂರ್ಣಗೊಳಿಸಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 15-07-2021

    ಸಂಶೋಧನಾ ಅಧಿಕಾರಿ : 4 ಹುದ್ದೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾಸ್ಟರ್ಸ್ ಡಿಗ್ರಿಯನ್ನು ಎಕಾನಮಿಕ್ಸ್/ಎಕನಾಮಿಟ್ರಿಕ್ಸ್/ಸ್ಟಟಿಸ್ಟಿಕ್ಸ್/ಪಬ್ಲಿಕ್ ಪಾಲಿಸಿಯನ್ನು‌ ಶೇ.55 ಅಂಕಗಳೊಂದಿಗೆ ತೇರ್ಗಡೆಹೊಂದಿರಬೇಕು.‌ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.50,000/- ವೇತನವಿರುತ್ತದೆ.

    ಆಡಳಿತ ಸಮನ್ವಯ ಅಧಿಕಾರಿ :1 ಹುದ್ದೆ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.45,000/- ವೇತನವಿರುತ್ತದೆ.ಅಭ್ಯರ್ಥಿಗಳು ಮಾಸ್ಟರ್ಸ್ ಡಿಗ್ರಿಯನ್ನು ಯಾವುದೇ ಅಂಗೀಕೃತ ಯುನಿವರ್ಸಿಟಿಯಿಂದ ಪಡೆದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಆಂಗ್ಲ ಮತ್ತು ಕರ್ನಾಟಕ ವಾದ್ಯಗಾರರ ಹುದ್ದೆ : ಅರ್ಜಿ ಅವಧಿ ವಿಸ್ತರಣೆ

    ಕೆ.ಎ.ಆರ್.ಪಿ.ಮೌಂಟೆಡ್ ಕಂಪನಿ, ಲಲಿತಮಹಲ್ ರಸ್ತೆ, ಮೈಸೂರು ಇಲ್ಲಿ ಖಾಲಿಯಿರುವ ಆಂಗ್ಲ ಮತ್ತು ಕರ್ನಾಟಕ ವಾದ್ಯಗಾರರ ಹುದ್ದೆಗಳನ್ನು ಭರ್ತಿ ಮಾಡಲು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿ, ದಿನಾಂಕ 01-06-2021 ರಿಂದ 25-06-2021 ರವರೆಗೆ ಮಾರಾಟ ಮತ್ತು ಸ್ವೀಕೃತಿಗಾಗಿ ಅವಧಿ ನಿಗಧಿಪಡಿಸಲಾಗಿತ್ತು. ಆಡಳಿತಾತ್ಮಕ ಕಾರಣದಿಂದ ದಿನಾಂಕ: 15-07-2021 ರವರೆಗೆ ಅರ್ಜಿ ಸ್ವೀಕೃತಿಗಾಗಿ ಅವಧಿ ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಹಾಗೂ ಮಾಹಿತಿ/ ಸೂಚನೆಯನ್ನು ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ www.ksp.gov.in ನಲ್ಲಿ ಪಡೆದುಕೊಳ್ಳಬಹುದಾಗಿದೆ.