Blog

  • ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಿ ಹೇಗಿರಬೇಕು?

    ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತಯಾರಿ ಹೇಗಿರಬೇಕು?

    ಪ್ರತಿವರ್ಷ ರೈಲ್ವೆ, ಬ್ಯಾಂಕ್‌, ಕೆಪಿಎಸ್‌ಸಿ, ಯುಪಿಎಸ್‌ಸಿ, ಪಿಡಿಒ, ಪೊಲೀಸ್‌ ನೇಮಕ ಪರೀಕ್ಷೆ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅಭ್ಯರ್ಥಿಗಳು ಎದುರಿಸಬೇಕಿರುತ್ತದೆ. ಬಹುತೇಕರು ಸರಕಾರಿ ಉದ್ಯೋಗ ಸಿಕ್ಕರೆ ಸಿಗಲಿ ಎಂಬ ಆಸೆಯಿಂದ ಅರ್ಜಿ ಸಲ್ಲಿಸುತ್ತಾರೆ. ಯಾವುದೇ ಸಮರ್ಪಕ ಸಿದ್ಧತೆ ಇಲ್ಲದೆ ಪರೀಕ್ಷೆ ಬರೆದು ಫಲಿತಾಂಶದಲ್ಲಿ ಹೆಸರು ಇಲ್ಲದೆ ಇರುವುದನ್ನು ‘ಸರಕಾರಿ ಜಾಬ್ಸ್‌ ಸಿಗುವುದು ಸುಲಭವಲ್ಲ’ ಎಂದುಕೊಳ್ಳುತ್ತಾರೆ.
    ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್‌ ನೋಟಿಫಿಕೇಷನ್‌ ಪ್ರಕಟವಾಗಲಿ. ಇರುವುದು ಕೆಲವೇ ಹುದ್ದೆಗಳಾಗಿದ್ದರೂ ಸಾವಿರ, ಲಕ್ಷ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಸರಕಾರಿ ನೌಕರಿಗಿರುವ ಸೆಳೆತ ಅಂತಹದ್ದು. ಕಠಿಣ ಪರಿಶ್ರಮವಿದ್ದರೆ ಇಂತಹ ಉದ್ಯೋಗಗಳನ್ನು ನೀವು ಪಡೆಯಬಹುದಾಗಿದೆ.

    ಸ್ಟಡಿ ಮೆಟಿರಿಯಲ್ಸ್‌

    ಅಭ್ಯರ್ಥಿಗಳು ಇತ್ತೀಚಿನ ಮತ್ತು ಪರಿಷ್ಕೃತ ಅಧ್ಯಯನ ಸಾಮಾಗ್ರಿಗಳನ್ನು ಸಂಗ್ರಹಿಸಿ ತಯಾರಿ ನಡೆಸಬೇಕು. ಅಂದರೆ, ಅಧ್ಯಯನ ನಡೆಸುವ ಮಾಹಿತಿಗಳು ಈಗಿನ ಪರೀಕ್ಷಾ ರೀತಿ ಮತ್ತು ಸಿಲೆಬಸ್‌ಗೆ ಹೊಂದಿಕೊಳ್ಳುವಂತೆ ಇರಬೇಕು. ಆಯಾ ಅಧಿಸೂಚನೆಗಳಲ್ಲಿ ಸಿಲೆಬಸ್‌ ಮಾಹಿತಿ ಇರುತ್ತದೆ. ಯಾವ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದ ಮಾಹಿತಿ ಇರುತ್ತದೆ. ಇದೆಲ್ಲವನ್ನು ಸರಿಯಾಗಿ ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಅಧ್ಯಯನ ನಡೆಸಿ.

    ಪರೀಕ್ಷಾ ಮಾರ್ಗದರ್ಶಿಗಳು

    ಪ್ರತಿಯೊಂದು ಪರೀಕ್ಷೆಗಳು ಸಹ ವಿಶೇಷ ವಿಧಾನಗಳನ್ನು ಒಳಗೊಂಡಿರುತ್ತವೆ. ಅಂದರೆ, ಅವುಗಳಲ್ಲಿ ನೀಡಲಾಗುವ ಪ್ರಶ್ನೆಗಳ ಸಂಖ್ಯೆ, ಪ್ರಶ್ನೆಗಳ ರೀತಿ, ಪರೀಕ್ಷಾ ಅವಧಿ, ನೆಗೆಟಿವ್‌ ಮಾರ್ಕ್ಸ್‌ ಇತ್ಯಾದಿಗಳು ಇರುತ್ತವೆ. ಇವೆಲ್ಲವನ್ನು ತಿಳಿದುಕೊಂಡು ಇದಕ್ಕೆ ತಕ್ಕಂತೆ ಅಧ್ಯಯನ ನಡೆಸಬೇಕು. ಇದಕ್ಕಾಗಿ ನಿಮಗೆ ಎಗ್ಸಾಂ ಗೈಡ್‌ಗಳು ಉಪಯುಕ್ತ. ಗೈಡ್‌ಗಳನ್ನು ನೋಡಿಕೊಂಡು ನಿಗದಿತ ಸಮಯದೊಳಗೆ ಸಮರ್ಪಕ ಉತ್ತರ ಬರೆಯುವ ಸಾಮರ್ಥ್ಯ‌ವನ್ನು ಪರಿಶೀಲಿಸಿಕೊಳ್ಳಬಹುದು.

    ವೇಳಾಪಟ್ಟಿಯಂತೆ ಅಧ್ಯಯನ

    ಬದುಕಿನಲ್ಲಿ ಶಿಸ್ತು ಇದ್ದರೆ ಗೆಲುವು ನಿಶ್ಚಿತ. ನೀವು ದಿನದಲ್ಲಿ ಎಷ್ಟು ಗಂಟೆ ಅಧ್ಯಯನ ಮಾಡಬೇಕೆಂದು ಟೈಂಟೇಬಲ್‌ ರಚಿಸಿಕೊಳ್ಳಿ. ದಿನದಲ್ಲಿ ಇಷ್ಟು ಗಂಟೆ ಎಗ್ಸಾಂ ತಯಾರಿಗೆ ಎಂದು ಮೀಸಲಿಟ್ಟು ಶ್ರದ್ಧೆಯಿಂದ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು.

    ರಿವಿಜನ್‌ ಮಾಡಿ

    ಓದಿದ ವಿಚಾರಗಳನ್ನು ಮೆಲುಕು ಹಾಕುವ ಅಭ್ಯಾಸ ಇರಲಿ. ಅಂದರೆ, ಇಸವಿಗಳು, ಫಾರ್ಮುಲಾಗಳು, ವ್ಯಾಖ್ಯಾನಗಳನ್ನು ಆಗಾಗ ನೆನಪಿಸುತ್ತ ಇರಿ. ಹಗಲುಕನಸನ್ನು ಪಕ್ಕಕ್ಕೆ ಇರಿಸಿ ಸಮಯ ಸಿಕ್ಕಾಗಲೆಲ್ಲ ಓದಿದ ವಿಚಾರಗಳನ್ನು ನೆನಪಿಸಿಕೊಳ್ಳುತ್ತ ಇರಿ.

    ಟಿಪ್ಪಣಿ ಬರೆಯುವುದು

    ಓದುವಾಗ ಅತ್ಯಮೂಲ್ಯ ಅನಿಸಿದ ಅಂಶಗಳನ್ನು ನೋಟ್ಸ್‌ನಲ್ಲಿ ಬರೆದಿಟ್ಟುಕೊಳ್ಳಿ. ಮರೆತು ಹೋಗಬಹುದಾದ ಸಂಗತಿಗಳನ್ನು ಹೀಗೆ ಬರೆದಿಟ್ಟರೆ ಆಗಾಗ ಓದಿಕೊಳ್ಳಬಹುದು. ಪರೀಕ್ಷೆಗೆ ಕೆಲವು ದಿನಗಳಿರುವಾಗ ಇಂತಹ ನೋಟ್ಸ್‌ ಮೇಲೆ ಕಣ್ಣಾಡಿಸುತ್ತಿದ್ದರೆ ಸಾಕು.

    ಪರಿಣತರಿಂದ ಮಾಹಿತಿ

    ನೀವು ಏಕಲವ್ಯನಂತೆ ಸಾಧನೆ ಮಾಡಬಹುದು ಅಥವಾ ಕಾಂಪಿಟೀಟಿವ್‌ ಎಗ್ಸಾಂನಲ್ಲಿ ಪರಿಣತಿ ಪಡೆದ ತಜ್ಞರಿಂದ ತರಬೇತಿ ಪಡೆಯಬಹುದು. ತಜ್ಞರ ಮಾರ್ಗದರ್ಶನವಿದ್ದರೆ ಪರೀಕ್ಷೆ ಬರೆಯುವ ಟೆಕ್ನಿಕ್‌ ತಿಳಿಯುತ್ತದೆ.

    ಸುದ್ದಿ ಪತ್ರಿಕೆಗಳನ್ನು ಓದಿ

    ದಿನನಿತ್ಯ ಹಲವಾರು ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಈ ಮಾಹಿತಿಯನ್ನು ಪರೀಕ್ಷೆಯಲ್ಲಿ ಕೇಳಬಹುದೇ ಎಂದು ಯೋಚಿಸುತ್ತ ಪತ್ರಿಕೆಗಳನ್ನು ಓದಿರಿ. ದಿನಪತ್ರಿಕೆಗಳಲ್ಲಿ ಪ್ರಮುಖವೆನಿಸುವ ಮಾಹಿತಿಗಳನ್ನು ನೋಟ್‌ ಮಾಡಿಟ್ಟುಕೊಳ್ಳಿ. ಅಂದರೆ, ಪ್ರಮುಖರ ನೇಮಕ, ಪ್ರಮುಖ ಒಪ್ಪಂದಗಳು, ಅಂತಾರಾಷ್ಟ್ರೀಯ ಸಂಬಂಧ ಸೇರಿದಂತೆ ಪ್ರಚಲಿತ ವಿದ್ಯಾಮಾನಗಳ ಮಾಹಿತಿಯನ್ನು ಪಡೆಯುತ್ತಿರಿ.

    ಹಳೆಯ ಪ್ರಶ್ನೆಪತ್ರಿಕೆಗಳು

    ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಈ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳು ಆನ್‌ಲೈನ್‌ನಲ್ಲಿ ಲಭ್ಯವಿರುತ್ತವೆ. ಅವುಗಳಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ತಿಳಿದುಕೊಳ್ಳಿ.

    ತಂತ್ರಜ್ಞಾನದ ಸದ್ಭಳಕೆ

    ಇಂಟರ್‌ನೆಟ್‌ ಅನ್ನು ನಿಮ್ಮ ಜ್ಞಾನ ಹೆಚ್ಚಿಸುವ ಸಾಧನವಾಗಿ ಬಳಸಿ. ಸ್ಮಾರ್ಟ್‌ಫೋನ್‌ನಲ್ಲಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿ ಬಳಸಿ. ಪ್ರಮುಖ ವಿಷಯಗಳನ್ನು ಬುಕ್‌ಮಾರ್ಕ್‌ ಮಾಡಿಟ್ಟುಕೊಳ್ಳಿ. ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಿ. ಇಂಟರ್‌ನೆಟ್‌ನಲ್ಲಿ ಸಮಯ ಹಾಳು ಮಾಡುವ ವಿಷಯಗಳಿಂದ ದೂರವಿರಿ.

  • Social Skills: ವೃತ್ತಿ ಮತ್ತು ವೈಯಕ್ತಿಕ ಜೀವನದ ಯಶಸ್ಸಿಗೆ ಅವಶ್ಯವಾಗಿ ಬೇಕಾದ ಕೌಶಲಗಳ ವಿವರ

    ಕರಿಯರ್‌ನಲ್ಲಿ ಪ್ರಗತಿ ಕಾಣಲು ಕೇವಲ ಬಾಹ್ಯ ಅಂದ ಸಾಕಾಗದು. ಯಶಸ್ಸಿಗೆ ಸೋಷಿಯಲ್‌ ಸ್ಕಿಲ್ಸ್‌ ಅವಶ್ಯವಾಗಿದೆ. ಬಾಹ್ಯ ಅಂದವೆಂದರೆ ಶೋಕೇಸ್‌ನಲ್ಲಿರುವ ಗೊಂಬೆ, ಸೋಷಿಯಲ್‌ ಕೌಶಲವೆನ್ನುವುದು ಮನೆಯಲ್ಲಿ ಲವಲವಿಕೆಯಿಂದ ಓಡಾಡುವ ಪುಟ್ಟ ಮಗು. ನಿಮ್ಮ ಬಗ್ಗೆ ನಿಮಗಿರುವ ಸ್ವಯಂ ಭರವಸೆ, ಸಕಾರಾತ್ಮಕ ವರ್ತನೆ, ಉತ್ತಮ ಬಾಡಿ ಲ್ಯಾಂಗ್ವೇಜ್‌, ಐ ಕಾಂಟ್ಯಾಕ್ಟ್, ಅತ್ಯುತ್ತಮ ಸಂವಹನ ಕೌಶಲ ಇತ್ಯಾದಿಗಳು ಕರಿಯರ್‌ ಪ್ರಗತಿಗೆ ಸಾಥ್‌ ನೀಡುತ್ತವೆ.

    • ಜನರೊಂದಿಗೆ ಬೆರೆಯಿರಿ
      ಸೋಷಿಯಲ್‌ ಕೌಶಲಗಳು ಮಾತ್ರವಲ್ಲದೆ, ಸೋಷಿಯಲ್‌ ಇಂಟರಾರ‍ಯಕ್ಷನ್‌ ಕಡೆಗೂ ಗಮನ ನೀಡಿ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ. ನೀವು ಜನರೊಂದಿಗೆ ಚರ್ಚೆಯಲ್ಲಿ ಕಡಿಮೆ ಭಾಗಿಯಾದಷ್ಟು ನೀವು ಕಡಿಮೆ ಆಕರ್ಷಕರಾಗುವಿರಿ.
    • ನಿಮ್ಮ ಸ್ವಂತ ಸ್ಟೈಲ್‌ ಇರಲಿ
      ನೀವು ಯಾರದ್ದೋ ರೀತಿ ಆಗಲು ಹೋಗಬೇಡಿ. ನಿಮ್ಮ ಸ್ವಂತಿಕೆ ಇರಲಿ. ನಿಮ್ಮ ಸ್ವಂತ ಸ್ಟೈಲ್‌ ರೂಪಿಸಿ. ನಿಮಗೆ ಹೆಚ್ಚು ಆರಾಮದಾಯಕವೆನಿಸುವ ಸ್ಟೈಲ್‌ ಹುಡುಕಿ ಮತ್ತು ಅದನ್ನು ನಿತ್ಯ ಅನುಸರಿಸಿ. ಇಂತಹ ಸ್ಟೈಲ್‌ ಅನ್ನು ಅನ್ವಯಿಸುವಾಗ ನಿಮ್ಮ ಸ್ವಂತಿಕೆ ಕಳೆದುಕೊಳ್ಳಬೇಡಿ. ಯಾವತ್ತಿಗೂ ನೀವು ನೀವಾಗಿಯೇ ಇರಲಿ. ಮುಖವಾಡ ಹಾಕಿಕೊಂಡು ಜೀವಿಸಬೇಡಿ.
    • ಸ್ಮಾರ್ಟ್‌ ಆಗಿರಿ, ಕೂಲಾಗಿರಿ
      ನಿಮ್ಮ ಮನಸ್ಸಿನೊಳಗೆ ನೂರಾರು ಒತ್ತಡಗಳು ಇರಬಹುದು. ಇಂತಹ ಸ್ಥಿತಿಯಲ್ಲಿಯೂ ಕೂಲ್‌ ಆಗಿ ಹೊರಗೆ ಕಾಣಿಸಲು ಪ್ರಯತ್ನಿಸಿ. ಸದಾ ಏನಾದರೂ ದೂರುತ್ತ, ಸಮಸ್ಯೆ ಹೇಳುತ್ತ ಇರುವವರನ್ನು ನೀವು ನೋಡಿರಬಹುದು. ಅಂತಹ ನಕಾರಾತ್ಮಕ ವ್ಯಕ್ತಿತ್ವ ನಿಮ್ಮದಾಗುವುದು ಬೇಡ.
    • ನಿಮ್ಮ ಬಗ್ಗೆ ನಿಮಗೆ ಸಂಶಯ ಬೇಡ
      ನಿಮ್ಮ ಮೇಲೆ ನಿಮಗೆ ನಂಬಿಕೆ ಇರದೆ ಇದ್ದರೆ ಇತರರು ಹೇಗೆ ನಿಮ್ಮನ್ನು ನಂಬುತ್ತಾರೆ. ನೀವು ಮಾಡುವ ಕೆಲಸ, ನೀವು ತೆಗೆದುಕೊಳ್ಳುವ ನಿರ್ಧಾರ ಇತ್ಯಾದಿಗಳಲ್ಲಿ ಭರವಸೆ ಇರಲಿ. ನಿಮ್ಮ ಸ್ವಂತ ತೀರ್ಮಾನದ ಮೇಲೆ ನಂಬಿಕೆ ಇರಲಿ. ನಿಮಗೆ ನಿಮ್ಮ ನಿರ್ಧಾರಗಳ ಕುರಿತು ಸಂದೇಹಗಳಿದ್ದರೆ ಯಾರಾದರೂ ಮೆಂಟರ್‌ ಬಳಿ ಅಭಿಪ್ರಾಯ ಕೇಳಬಹುದು. ನಿಮ್ಮಲ್ಲಿರುವ ಇಂತಹ ಗುಣವು ನಿಮ್ಮನ್ನು ಲೀಡರ್‌ ಆಗಿಸುತ್ತದೆ.
    • ಆಶಾವಾದಿಯಾಗಿರಿ
      ಆಶಾವಾದವು ಸಾಂಕ್ರಾಮಿಕ. ನೀವು ಆಶಾವಾದಿಯಾಗಿದ್ದರೆ ನಿಮ್ಮ ಜೊತೆಗಿದ್ದವರೂ ಆಶಾವಾದಿಯಾಗುತ್ತಾರೆ. ಸದಾ ನಕಾರಾತ್ಮಕವಾಗಿ ಚಿಂತಿಸುವ, ಮಾತನಾಡುವ ವ್ಯಕ್ತಿಗಳು ಯಾರಿಗೂ ಇಷ್ಟವಾಗುವುದಿಲ್ಲ. ಯಾವುದೇ ಸಮಯದಲ್ಲಿಯೂ, ಸ್ಥಿತಿಯಲ್ಲಿಯೂ ಆಶಾವಾದ ಕಳೆದುಕೊಳ್ಳದೆ ಇರುವವರು ಎಲ್ಲರಿಗೂ ಇಷ್ಟವಾಗುತ್ತಾರೆ.
    • ನಿಮ್ಮ ಕೆಲಸದ ಕುರಿತು ಉತ್ಸಾಹದಿಂದಿರಿ
      ಉತ್ಸಾಹರಹಿತ ವ್ಯಕ್ತಿಗಳು ಯಾರಿಗೂ ಇಷ್ಟವಾಗುವುದಿಲ್ಲ. ಕೆಲಸದ ಕುರಿತು, ಕರಿಯರ್‌ ಕುರಿತು ಸದಾ ಕಂಪ್ಲೇಟ್‌ ಹೇಳುವವರೂ ಇಷ್ಟವಾಗುವುದಿಲ್ಲ. ಹೀಗಾಗಿ, ನೀವು ಮಾಡುವ ಕೆಲಸವನ್ನು ಖುಷಿಯಿಂದ, ಶ್ರದ್ಧೆಯಿಂದ ಮಾಡಿ. ಎಲ್ಲಾದರೂ ನೀವು ಮಾಡುವ ಕೆಲಸದಲ್ಲಿ ನಿಮಗೆ ಖುಷಿ ಸಿಗುತ್ತಿಲ್ಲವೆಂದಾದರೆ ನೀವು ತಪ್ಪು ಕರಿಯರ್‌ ಆಯ್ಕೆ ಮಾಡಿಕೊಂಡಿದ್ದೀರಿ ಎಂದರ್ಥ. ಅದರ ಕುರಿತು ದೂರುವುದನ್ನು ನಿಲ್ಲಿಸಿ ನಿಮಗೆ ಆಸಕ್ತಿ ಇರುವ ಕ್ಷೇತ್ರಕ್ಕೆ ಕಾಲಿಡಿ. ನಿಮ್ಮ ಉತ್ಸಾಹ, ಲವಲವಿಕೆ ನಿಮಗೆ ಮಾತ್ರವಲ್ಲದೆ ಇತರರಿಗೂ ಸೂಧಿರ್ತಿ ನೀಡುತ್ತದೆ.
    • ಅಗ್ರೇಸಿವ್‌ ಆಗಿರಬೇಡಿ
      ಸದಾ ಆಕ್ರಮಣಕಾರಿಯಾಗಿ ವರ್ತಿಸುವವರಿಂದ ಜನರು ದೂರ ಹೋಗುತ್ತಾರೆ. ಇದು ನಿಮ್ಮ ಸೋಷಿಯಲ್‌ ಮತ್ತು ಪ್ರೊಫೆಷನಲ್‌ ಲೈಫ್‌ಗೆ ತಡೆಗೋಡೆಯಾಗಬಹುದು. ನಿಮ್ಮಲ್ಲಿ ಇರುವ, ಇರಬಹುದಾದ ಇಂತಹ ಆಕರ್ಷಕವಲ್ಲದ ಗುಣಗಳಿಗೆ ಕೊಕ್‌ ನೀಡಿ. ಜೀವನದಲ್ಲಿ ನೀವು ಏನಾಗಬೇಕು ಎನ್ನುವುದನ್ನು ಸಾವಧಾನವಾಗಿ ಯೋಚಿಸಿ, ಆ ದಿಕ್ಕಿನಲ್ಲಿ ಸಾಗಿ.
    • ಹಸನ್ಮುಖಿಯಾಗಿರಿ
      ಬೋರಿಂಗ್‌ ಮತ್ತು ಅತ್ಯಧಿಕ ಸೀರಿಯಸ್‌ ಆಗಿ ವರ್ತಿಸುವರು ಯಾರಿಗೂ ಇಷ್ಟವಾಗುವುದಿಲ್ಲ. ಸದಾ ಹಸನ್ಮುಖಿಯಾಗಿದ್ದರೆ ನಿಮಗೆ ಆತ್ಮೀಯರು ಹೆಚ್ಚುತ್ತಾರೆ. ನಿಮ್ಮ ಕಂಪೆನಿಯನ್ನು ಜನರು ಇಷ್ಟಪಡುತ್ತಾರೆ. ಜನರಿಗೆ ಕೇಳಿದಾಗ ಖುಷಿಯಾಗುವಂತಹ ಹಾಸ್ಯ ಸನ್ನಿವೇಶ ಅಥವಾ ಕತೆಗಳನ್ನು ನಿಮ್ಮಲ್ಲಿ ಇಟ್ಟುಕೊಳ್ಳಿ.
    • ಸ್ಥಿರತೆ ಇರಲಿ
      ನಿಮ್ಮ ಗುರಿ ಸಾಧನೆಯತ್ತ ಲಕ್ಷ್ಯವಿರಲಿ. ನಿಮ್ಮ ದಿನನಿತ್ಯದ ಚಟುವಟಿಕೆಗಳ ಜೊತೆಗೆ ಭವಿಷ್ಯದಲ್ಲಿ ಏನಾಗಬೇಕು ಎನ್ನುವ ಕುರಿತು ಗಮನ ಇರಲಿ. ಸೋಷಿಯಲ್‌ ಆಗಿರಬೇಕೆಂದು ಬೇಕಾಬಿಟ್ಟಿಯಾಗಿ ಬದುಕಬೇಡಿ.
    • ಅತ್ಯುತ್ತಮ ಕೇಳುಗರಾಗಿ
    • ನಂಬಿಕಸ್ಥರಾಗಿ
    • ಭರವಸೆ ಇರಲಿ
    • ಸೂಕ್ತವಾದ ಉಡುಗೆ ತೊಡಿ
    • ನಿಮ್ಮ ಬಗ್ಗೆ ಕಾಳಜಿ ಇರಲಿ
    • ಕೆಟ್ಟ ಅಭ್ಯಾಸಗಳಿಂದ ದೂರವಿರಿ.
  • ಕರ್ನಾಟಕ ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ: ಅಭ್ಯರ್ಥಿಗಳು ಆತಂಕಪಡುವುದು ಬೇಡ

    ಬೆಂಗಳೂರು (ಜ.20):- ಪಿಎಸ್‌ಐ ನೇಮಕಾತಿ ಮರು ಪರೀಕ್ಷೆಗೆ ಸಂಬಂಧಿಸಿದಂತೆ ಗುಪ್ತದಳದ (ಇಂಟಲಿಜೆನ್ಸ್) ಪರಿಶೀಲನೆ ವೇಳೆ ಮಾಹಿತಿ ಹೊರಬಿದ್ದಿದ್ದು, ಸಿಸಿಬಿ ಪೊಲೀಸರು ಕೂಲಂಕುಶವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

    ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರೋಪದ ಹಿನ್ನೆಲೆಯಲ್ಲಿ ಸಿಸಿಬಿಯವರು ವಿಚಾರಣೆಗೆ ಒಳಪಡಿಸಿದ್ದಾರೆ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಅಕ್ರಮದ ಬಗ್ಗೆ ಮಾಹಿತಿ ಸಂಗ್ರಹಿಸಲು ನಕಲಿ ಕರೆ ಮಾಡಿರುವುದಾಗಿ ಆರೋಪಿತ ಹೇಳಿಕೆ ನೀಡಿದ್ದಾನೆ. ಸತ್ಯಾಸತ್ಯತೆಯ ಬಗ್ಗೆ ಕುಲಂಕುಶವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಸುರಕ್ಷಿತವಾಗಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಆತಂಕಪಡುವುದು ಬೇಡ ಎಂದರು.

    ಹರಿಪ್ರಸಾದ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರತಿಕ್ರಿಯಿಸಲು ಹೋಗುವುದಿಲ್ಲ. ಅವರ ಹೇಳಿಕೆಗೆ ಸಂಬಂಧಿಸಿದ ಸುದ್ದಿ ರಾಜ್ಯಪಾಲರ ಗಮನಕ್ಕೆ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದರು. ಅದರನ್ವಯ ಕಾನೂನು ಚೌಕಟ್ಟಿನಲ್ಲಿ ಏನು ಕೆಲಸ ಮಾಡಬೇಕು ಅದನ್ನು ಪೊಲೀಸರು ಮಾಡಿದ್ದಾರೆ. ಹರಿಪ್ರಾದ್ ಅವರ ವಿರುದ್ಧ ಯಾರು ಒಳ ಸಂಚಾಗಲಿ, ಪಿತೂರಿ ನಡೆಸುತ್ತಿಲ್ಲ. ಅವರಿಗೆ ತೊಂದರೆ ಮಾಡಬೇಕು ಎಂಬ ಉದ್ದೇಶ ಯಾರಿಗೂ ಇಲ್ಲ ಎಂದು ತಿಳಿಸಿದರು.

    ಸಂಸದ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಪ್ರಕರಣದ ತನಿಖೆ ಮುಂದುವರಿದಿದೆ. ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಲಾಗುತ್ತಿದೆ ಎಂದರು.

    ಒಳಮೀಸಲಾತಿ ವಿಚಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಳ ಮೀಸಲಾತಿಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರಕ್ಕೆ ಸಾಧದಯವಿಲ್ಲ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ರಾಜ್ಯಸಭೆಯ ಸದನದಲ್ಲಿ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 341 (3) ಸಂವಿಧಾನಿಕ ತಿದ್ದುಪಡಿ ತಂದು ಒಳ ಮೀಸಲಾತಿಗೆ ಅವಕಾಶ ಮಾಡಿಕೊಡುವಂತೆ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದರೆ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತೇವೆ ಎಂದರು.

  • RRB ALP Recruitment 2024: ಭಾರತೀಯ ರೈಲ್ವೆಯಲ್ಲಿ ಉದ್ಯೋಗ, 5696 ಅಸಿಸ್ಟೆಂಟ್‌ ಲೊಕೊ ಪೈಲಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಆರ್‌ಆರ್‌ಬಿ

    RRB ALP Recruitment 2024: ಭಾರತೀಯ ರೈಲ್ವೆಯಲ್ಲಿ ಉದ್ಯೋಗ, 5696 ಅಸಿಸ್ಟೆಂಟ್‌ ಲೊಕೊ ಪೈಲಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಆರ್‌ಆರ್‌ಬಿ

    RRB ALP Recruitment 2024: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು 5696 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಅಸಿಸ್ಟೆಂಟ್‌ ಲೊಕೊ ಪೈಲೆಟ್‌ (Recruitment of Assistant Loco Pilot (ALP) ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಜನವರಿ 20, 2023 ರಿಂದ ಫೆಬ್ರವರಿ 20ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತರು indianrailways.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    ಭಾರತೀಯ ರೈಲ್ವೆಯಲ್ಲಿರುವ ಸುಮಾರು 5,696 ಅಸಿಸ್ಟೆಂಟ್‌ ಲೊಕೊ ಪೈಲೆಟ್‌ ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಮಾತ್ರ ಅರ್ಜಿಸಲ್ಲಿಸಲು ಅವಕಾಶವಿದೆ. ಆರ್‌ಆರ್‌ಬಿ ವೆಬ್‌ಸೈಟ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಸೇರಿದಂತೆ ವಿವಿಧ ಆರ್‌ಆರ್‌ಬಿ ವೆಬ್‌ಸೈಟ್‌ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಜನವರಿ 20, 2023
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 20, 2023

    ಆರ್‌ಆರ್‌ಬಿ ಎಎಲ್‌ಪಿ ನೇಮಕ: ವಿದ್ಯಾರ್ಹತೆ ಏನಿರಬೇಕು?

    ಅಸಿಸ್ಟೆಂಟ್‌ ಲೊಕೊ ಪೈಲೆಟ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ/10ನೇ ತರಗತಿ ಉತ್ತೀರ್ಣರಾಗಿರಬೇಕು. ಅಂಗೀಕೃತ ಸಂಸ್ಥೆಗಳಲ್ಲಿ ಐಟಿಐ ಓದಿರಬೇಕು. (Fitter, Electrician, Instrument Mechanic, Millwright/Maintenance Mechanic, Mechanic (Radio/TV), Electronics Mechanic, Mechanic (Motor Vehicle), Wireman, Tractor Mechanic, Armature and coil winder, Mechnical (Diesal), Heat Engine, Turner, Machinist, Refrigeration and Air Conditioning Mechanic ವಿಷಯಗಳಲ್ಲಿ ಐಟಿಐ ಓದಿರುವವರು ಅರ್ಜಿ ಸಲ್ಲಿಸಬಹುದು)

    ಅಥವಾ
    10ನೇ ತರಗತಿ ಉತ್ತೀರ್ಣರಾಗಿರಬೇಕು. ಮೂರು ವರ್ಷದ ಡಿಪ್ಲೊಮಾವನ್ನು ಮೆಕ್ಯಾನಿಕಲ್‌/ ಎಲೆಕ್ಟ್ರಿಕಲ್‌/ ಎಲೆಕ್ಟ್ರಾನಿಕ್ಸ್‌/ ಆಟೋಮೊಬೈಲ್‌ ಎಂಜಿನಿಯರಿಂಗ್‌ನಲ್ಲಿ ಓದಿರುವವರು ಅರ್ಜಿ ಸಲ್ಲಿಸಬಹುದು.

    ಇದನ್ನು ಓದಿ: DCC Bank Recruitment 2024: ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಜಾಬ್ಸ್‌, ಕಿರಿಯ ಸಹಾಯಕ, ವಾಹನ ಚಾಲಕ, ಅಟೆಂಡರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

    RRB ALP Recruitment 2024: ವಯೋಮಿತಿ ಏನು?

    ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    RRB ALP Recruitment 2024: ಆರ್‌ಆರ್‌ಬಿ ಎಎಲ್‌ಪಿ ಹುದ್ದೆಗಳಿಗೆ ವೇತನ ಎಷ್ಟು?

    ಏಳನೇ ವೇತನ ಆಯೋಗದ ಲೆವೆಲ್‌ 2 ಶಿಫಾರಸ್ಸಿನ ಅನ್ವಯ ವೇತನ ಇರುತ್ತದೆ. ಬೇಸಿಕ್‌ ವೇತನ 19900 ರೂಪಾಯಿ ಇರುತ್ತದೆ. ಡಿಎ, ಎಚ್‌ಆರ್‌ಎ, ನೈಟ್‌ ಶಿಫ್ಟ್‌ ಅಲೊವೆನ್ಸ್‌ ಸೇರಿದಂತೆ ಹಲವು ಸೌಕರ್ಯ ಇರುತ್ತದೆ. ಒಟ್ಟಾರೆ ವೇತನ 25-35 ಸಾವಿರ ರೂ.ವರೆಗೆ ಇರುತ್ತದೆ. ವೇತನ ಶ್ರೇಣಿ: 19900- 63200 ರೂಪಾಯಿ.

    RRB ALP Recruitment 2024: ಅರ್ಜಿ ಶುಲ್ಕ ಎಷ್ಟು?

    ಎಸ್ಸಿ, ಎಸ್ಟಿ, ಎಕ್ಸ್‌ ಸರ್ವೀಸ್‌ ಮ್ಯಾನ್‌, ಮಹಿಳಾ, ಟ್ರಾನ್ಸೆಂಜರ್‌, ಮೈನಾರಿಟಿ, ಇಬಿಸಿ ಅಭ್ಯರ್ಥಿಗಳು 250 ರೂ. ಮತ್ತು ಉಳಿದ ಎಲ್ಲಾ ಅಭ್ಯರ್ಥಿಗಳು 500 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಮಾತ್ರ ಪಾವತಿಸಲು ಅವಕಾಶವಿದೆ.

    RRB ALP Recruitment 2024: ಕರ್ನಾಟಕದಲ್ಲಿ ಎಷ್ಟು ಹುದ್ದೆಗಳಿವೆ?

    ಅಹಮದಾಬಾದ್‌, ಅಜ್ಮೆರ್‌, ಬೆಂಗಳೂರು, ಭೋಪಾಲ್, ಭುವನೇಶ್ವರ, ಬಿಲಾಸಪುರ, ಚೆನ್ನೈ, ಗೋರಕ್‌ಪುರ, ಗುವಾಹಟಿ, ಜಮ್ಮು, ಕೊಲ್ಕಾತ್ತಾ ಸೇರಿದಂತೆ ವಿವಿಧ ಆರ್‌ಆರ್‌ಬಿಗಳಿಗೆ ಹುದ್ದೆ ಹಂಚಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ 219+65 ಹುದ್ದೆಗಳಿವೆ.

    ಆರ್‌ಆರ್‌ಬಿ ವಿವರವಾದ ಅಧಿಸೂಚನೆ ಸದ್ಯದಲ್ಲಿಯೇ ಪ್ರಕಟಗೊಳ್ಳಲಿದೆ.

    ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿ ಪಡೆಯಲು indianrailways.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಆರ್‌ಆರ್‌ಬಿ ಮತ್ತು ಇತರೆ ನೇಮಕಾತಿಗಳ ವಿವರ ಪಡೆಯಲು, ಆರ್‌ಆರ್‌ಬಿ ಎಎಲ್‌ಪಿ ನೇಮಕಾತಿ ವಿಧಾನ, ಸಿಲೇಬಸ್‌ ಸೇರಿದಂತೆ ಹೆಚ್ಚಿನ ವಿವರಗಳು ಸದ್ಯದಲ್ಲಿಯೇ sarakarijobs.com ನಲ್ಲಿ ಪ್ರಕಟಗೊಳ್ಳಲಿದೆ.

  • AAI Jobs: ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾದಲ್ಲಿ ಉದ್ಯೋಗಾವಕಾಶ, 130 ಅಪ್ರೆಂಟಿಸ್‌ಶಿಪ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

    AAI Jobs: ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾದಲ್ಲಿ ಉದ್ಯೋಗಾವಕಾಶ, 130 ಅಪ್ರೆಂಟಿಸ್‌ಶಿಪ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರವಾದ ಎಎಐಯು ಅಪ್ರೆಂಟಿಸ್‌ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು. ವಯೋಮಿತಿ ಏನು? ಯಾವೆಲ್ಲ ವಿಭಾಗದಲ್ಲಿ ಅವಕಾಶಗಳು ಇವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ. ಈ ಹುದ್ದೆಗಳ ಕುರಿತು ಆಸಕ್ತಿ ಉಳ್ಳವರು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು.

    ಒಟ್ಟು ಹುದ್ದೆಗಳ ಸಂಖ್ಯೆ: 130
    ಅರ್ಜಿ ಸಲ್ಲಿಸುವುದು ಹೇಗೆ? ಆನ್‌ಲೈನ್‌ ಮೂಲಕ
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 31,2024

    ವಯೋಮಿತಿ

    ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 26 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
    ವಿದ್ಹಾರ್ಹತೆ: ಸಂಬಂಧಪಟ್ಟ ವಿಷಯಗಳಲ್ಲಿ ಐಟಿಐ/ಡಿಪ್ಲೊಮಾ/ ಎಂಜಿನಿಯರಿಂಗ್‌ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

    ಎಷ್ಟು ಹುದ್ದೆಗಳಿವೆ?
    ಗ್ರಾಜುವೇಟ್‌ ಅಪ್ರೆಂಟಿಸ್‌: 30 ಹುದ್ದೆಗಳು
    ಡಿಪ್ಲೊಮಾ ಅಪ್ರೆಂಟಿಸ್‌ 45 ಹುದ್ದೆಗಳು
    ಐಟಿಐ ಟ್ರೇಡ್‌ ಅಪ್ರೆಂಟಿಸ್‌: 55 ಹುದ್ದೆಗಳಿವೆ.

    Airports Authority of India, Regional Headquarter (Eastern Region) is inviting applications from the eligible candidates who are domicile of West Bengal, Bihar, Odisha, Chhattisgarh, Jharkhand, Andaman & Nicobar and Sikkim for an Apprenticeship Training Program of one year in RHQ, Kolkata and various airports in Eastern Region for the year 2023-24. During the period of Apprenticeship Training, the candidates are governed by Apprentices Act 1961 (as amended in 1973 and till date) and commensurate policies/rules of the organization.

    Educational Qualification


    Graduate & Diploma: Candidates should possess full time (regular) four years degree or three years (regular) diploma in Engineering in any of the above-mentioned streams, recognized by AICTE, GOI.
    ITI Trade: Candidates should possess ITI/NCVT certificate of the above-mentioned trades from institutes recognized by AICTE, GOI.

    Eligibility Criteria


    Only Indian Nationals from the Eastern Region are eligible.
    Candidates passed degree/diploma in 2019 or after 2019 are eligible.
    Age limit: Minimum age is 18 years and Maximum age is 26 years as on 31/12/2023. (Relaxation in upper age limit for categories like SC/ST/OBC/PWBD etc. as per Govt. of India guidelines is applicable)

    How to Apply?
    The interested candidates are required to apply through BOAT/RDAT’s web portal www.nats.education.gov.in (for graduate/diploma apprentices) and www.apprenticeshipindia.org (for ITI Trade) by finding establishment Airports Authority of India –RHQ ER, Kolkata (EWBPNC000015(BOAT)/ E02211900015 (NAPS))