Blog

  • ಅನುಕಂಪದ ನೌಕರಿ : ಬದಲಾವಣೆ ತಂದ ಸರಕಾರ

    ಅನುಕಂಪದ ನೌಕರಿ : ಬದಲಾವಣೆ ತಂದ ಸರಕಾರ

    ಸರಕಾರಿ ನೌಕರರು ಅಕಾಲಿಕ ಮರಣಕ್ಕೀಡಾದ ಸಂದರ್ಭದಲ್ಲಿ ಅನುಕಂಪ ಆಧಾರಿತ ಹುದ್ದೆಗಳನ್ನು ಮೃತರ ಮಗಳಿಗೂ ನೀಡಬಹುದು ಎಂಬ ಆದೇಶವನ್ನು ರಾಜ್ಯ ಸರಕಾರ ಹೊರಡಿಸಿದೆ.

    ಕರ್ನಾಟಕ ಸಿವಿಲ್ ಸೇವಾ(ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1966 ಕ್ಕೆ ತಿದ್ದುಪಡಿ ತಂದಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಶುಕ್ರವಾರ ತಿಳಿಸಿದೆ.

    ಮೃತ ಸರಕಾರಿ ನೌಕರರ ಪತಿ ಅಥವಾ ಪತ್ನಿ ಸೂಚಿಸುವ ಅವಿವಾಹಿತ, ವಿವಾಹಿತ ಅಥವಾ ವಿಚ್ಛೇಧಿತ ಮಗಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗವನ್ನು ನೀಡಬಹುದು ಎಂಬುದಾಗಿದೆ.

    ಮೃತ ನೌಕರರು ಅವಿವಾಹಿತರಾಗಿದ್ದರೆ ಅವರ ತಂದೆ ಅಥವಾ ತಾಯಿ ಸೂಚಿಸಿದ ಸಹೋದರ ಅಥವಾ ಸಹೋದರಿಯನ್ನು ನೇಮಕಾತಿ ಮಾಡಲು ಅವಕಾಶವಿದೆ. ಒಂದು ವೇಳೆ ತಂದೆ ತಾಯಿಯೂ ಮೃತಪಟ್ಟಿದ್ದರೆ ವಯಸ್ಸಿನ ಆಧಾರದ ಮೇಲೆ ಹಿರಿಯ ಸಹೋದರ ಅಥವಾ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.

    ಮೃತ ಪುರುಷ ವಿವಾಹಿತನಾಗಿದ್ದರೆ ಆತನ ಮೇಲೆ ಅವಲಂಬಿತರಾಗಿದ್ದ ಆತನ ಪತ್ನಿ, ಮಗ ಮತ್ತು ಮಗಳು ಅರ್ಹರಾಗಿರುತ್ತಾರೆ. ಮೃತನ ಪತ್ನಿಯು ಅರ್ಹರಾಗಿಲ್ಲದಿದ್ದರೆ ಅವರು ಸೂಚಿಸಿದ ಮಗ ಅಥವಾ ಮಗಳನ್ನು ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆ.

    ವಿವಾಹಿತ ಸರಕಾರಿ ಮಹಿಳಾ ಉದ್ಯೋಗಿ ಮೃತಪಟ್ಟರೆ ಆಕೆಯ ಮೇಲೆ ಅವಲಂಬಿತರಾಗಿರುವ ಮಗ, ಮಗಳು ಅಥವಾ ಪತಿಯು ಅರ್ಹರಾಗಿರುತ್ತಾರೆ. ಅವಿವಾಹಿತೆಯಾಗಿದ್ದರೆ ಆಕೆಯೊಂದಿಗೆ ವಾಸವಿದ್ದ ಸಹೋದರ ಅಥವಾ ಸಹೋದರಿ ಅರ್ಹರಾಗಿರುತ್ತಾರೆ.

    ಮೃತ ನೌಕರರ ಪತಿ ಅಥವಾ ಪತ್ನಿ ಈಗಾಗಲೇ ನಿಧನರಾಗಿದ್ದರೆ ಮಕ್ಕಳು ಅಪ್ರಾಪ್ತರಾಗಿದ್ದರೆ 2 ವರ್ಷದೊಳಗೆ 18 ವರ್ಷ ಪೂರೈಸುವವರಿಗೆ ಅವಕಾಶ ನೀಡಬಹುದು. 18 ವರ್ಷ ತುಂಬಿದ ಬಳಿಕ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಲು ಎರಡು ವರ್ಷ ಕಾಲಾವಕಾಶ ನೀಡಬೇಕು.

    ಅಪ್ರಾಪ್ತ ಮಕ್ಕಳ ವಯಸ್ಸು ಸೂಕ್ತವಾಗಿಲ್ಲದಿದ್ದರೆ ಅವರೊಂದಿಗೆ ವಾಸಿಸುವ ಹಾಗೂ ಅವರನ್ನು ಪೋಷಿಸುವ ಕಾನೂನಿನ ಪ್ರಕಾರ ಪ್ರಮಾಣೀಕೃತ ಪೋಷಕರು ಅರ್ಹರಾಗುತ್ತಾರೆ ಎಂದು ತಿಳಿಸಲಾಗಿದೆ.

  • KOF : ವಿವಿಧ ಹುದ್ದೆ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಆದ್ಯತೆ

    KOF : ವಿವಿಧ ಹುದ್ದೆ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಆದ್ಯತೆ

    ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿ.(ಕೆಒಎಫ್) ಹುಬ್ಬಳ್ಳಿ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆ, ವಿದ್ಯಾರ್ಹತೆ, ಇತ್ಯಾದಿಗಳ ಬಗ್ಗೆ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-05-2021 ಸಂಜೆ 5.30 ರೊಳಗಾಗಿ

    ಹುದ್ದೆ : ಸಾಮಾನ್ಯ ಕೆಲಸಗಾರ – 04
    ಚಾಲಕ – 01
    ಸಹಾಯಕ ಮಾರಾಟಾಧಿಕಾರಿ – ೦4
    ಸಹಾಯಕ ಲೆಕ್ಕಾಧಿಕಾರಿ – ೦3
    ಸಹಾಯಕ ಆಡಳಿತಾಧಿಕಾರಿ – ೦1
    ಕ್ಷೇತ್ರಾಧಿಕಾರಿ – ೦2

    ವಿದ್ಯಾರ್ಹತೆ : ಸಾಮಾನ್ಯ ಕೆಲಸಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು.
    ಚಾಲಕ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು ಹಾಗೂ ಲಘು ಮತ್ತು ಭಾರಿ ವಾಹನ ಚಾಲನೆ ಪರವಾನಿಗೆ ಹೊಂದಿರತಕ್ಕದ್ದು.
    ಸಹಾಯಕ ಮಾರಾಟಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಹಾಗೂ ಎಂಬಿಎ ಮಾರುಕಟ್ಟೆ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
    ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಬಿ.ಕಾಂ, ಪದವಿ ಜೊತೆಗೆ ಟ್ಯಾಲಿ ಅಕೌಂಟಿಂಗ್ ಹಾಗೂ ಕಂಪ್ಯೂಟರ್ ಜ್ಞಾನ ಅವಶ್ಯಕ.
    ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಹಾಗೂ ಕಾನೂನು ಪದವಿ ಪಡೆದವರಿಗೆ ಆಧ್ಯತೆ ನೀಡಲಾಗುವುದು.
    ಕ್ಷೇತ್ರಾಧಿಕಾರಿ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಕೃಷಿ ಪದವಿ ಹೊಂದಿರಬೇಕು.

    ವೇತನ : ಸಾಮಾನ್ಯ ಕೆಲಸಗಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.17,000/- ರಿಂದ ರೂ.28,950/- ವೇತನ ಇರುತ್ತದೆ.
    ಚಾಲಕ ಹುದ್ದೆಗೆ ರೂ.17,000/- ರಿಂದ ರೂ.28,950/- ಮಾಸಿಕ ವೇತನ ನಿಗದಿಯಾಗಿರುತ್ತದೆ.
    ಸಹಾಯಕ ಮಾರಾಟಾಧಿಕಾರಿ ಹುದ್ದೆಗೆ ಆಯ್ಕೆಯಾದವರಿಗೆ ತಿಂಗಳ ರೂ.27,650/- ರಿಂದ ರೂ.52,650/- ವೇತನವಿರುತ್ತದೆ
    ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ರೂ.27,650/- ರಿಂದ ರೂ.52,650/- ಮಾಸಿಕ ವೇತನ
    ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ರೂ.27,650/- ರಿಂದ ರೂ.52,650/- ಮಾಸಿಕ ವೇತನ ಹಾಗೂ
    ಕ್ಷೇತ್ರಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಿಂಗಳ ರೂ.37,900/-ರಿಂದ ರೂ.70,850/- ಮಾಸಿಕ ವೇತನ ನಿಗದಿಪಡಿಸಲಾಗಿದೆ.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

  • ಸಿಎಬಿಎಸ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಸಿಎಬಿಎಸ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಸೆಂಟರ್ ಫಾರ್ ಎರ್ ಬೋರ್ನ್ ಸಿಸ್ಟಮ್ಸ್ (ಸಿಎಬಿಎಸ್), ಡಿಫಿನ್ಸ್‌ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಓ) ರಕ್ಷಣಾ ಮಂತ್ರಾಲಯ ಇಲ್ಲಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಸಬಹುದು.

    ಹುದ್ದೆ : ಸಿವಿಲಿಯನ್ ಮೆಡಿಕಲ್ ಆಫೀಸರ್ ಹುದ್ದೆಗಾಗಿ ಅರ್ಹ ವೈದ್ಯರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ( ಗುತ್ತಿಗೆ ಆಧಾರದ ಮೇಲೆ)

    ಹುದ್ದೆ ಸಂಖ್ಯೆ – 01

    ವೇತನ : ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.55,೦೦೦/- ನಿಗದಿಪಡಿಸಲಾಗಿದೆ.

    ವಿದ್ಯಾರ್ಹತೆ : ಕೆಎಂಸಿ/ಐಎಂಸಿ ನೋಂದಣಿಯೊಂದಿಗೆ ಎಂಬಿಬಿಎಸ್‌, ಏವಿಯೇಷನ್‌ ಮೆಡಿಸಲನ್‌ನಲ್ಲಿ ಅಪೇಕ್ಷಣೀಯ ಪಿಜಿ ಡಿಪ್ಲೋಮಾ/ಡಿಗ್ರಿ ಪಡೆದಿರಬೇಕು.

    ಕಾರ್ಯಾನುಭವ : ಕ್ಲಿನಿಕ್/ ಆಸ್ಪತ್ರೆಯಲ್ಲಿ ವೈಯಕ್ತಿಕ ಸಾಮರ್ಥ್ಯದಲ್ಲಿ ಒಬ್ಬ ಆರ್‌ಎಂಪಿಯಾಗಿ ಕನಿಷ್ಠ 5 ವರ್ಷಗಳ ಅನುಭವವಿರಬೇಕು.
    ಸ್ಥಳೀಯ ಭಾಷೆ ಕನ್ನಡ ಬಲ್ಲವರಾದ ಬೆಂಗಳೂರಿಗರಿಗೆ ಆದ್ಯತೆ.

    ‍‍‍‍‍‍‍‍‍‍ಷರತ್ತುಗಳು :

    a.ಹುದ್ದೆಯು ಕೇವಲ ಗುತ್ತಿಗೆ ಆಧಾರಿತವಾಗಿರುತ್ತದೆ.
    b.ಎನ್‌ಪಿಎ ಮತ್ತು ಇತರೆ ಭತ್ಯೆಗಳು ಸ್ವೀಕಾರ್ಹವಲ್ಲ.
    c.ನೇಮಕಾತಿಯ ಅವಧಿ ಕೆಲಸ ಕೈಗೆತ್ತಿಕೊಂಡ ದಿನದಿಂದ ಒಂದು ವರ್ಷ ಅಥವಾ ಸಿಎಬಿಎಸ್‌ಗೆ ಖಾಯಂ ಹುದ್ದೆಗಾರ ದೊರೆಯುವವರೆಗೆ ಯಾವುದು ಮೊದಲೋ ಅದರನ್ವಯ
    d.ಹುದ್ದೆಗೆ ಆಯ್ಕೆಯಾದ ಅಧಿಕಾರಿಯು ಮುಂದೊಮ್ಮೆ ಖಾಯಂ ಸರಕಾರಿ ಸೇವೆಗೆ ಆಯ್ಕೆಯಾದಲ್ಲಿ ಸೇವಾ ಹಿರಿತನ ಅಥವಾ ಯಾವುದೇ ಅನ್ವಯ ಸವಲತ್ತುಗಳಿಗೆ ಅರ್ಹರಾಗುವುದಿಲ್ಲ.
    e.ನೇಮಕಾತಿಯು ನವದೆಹಲಿಯ ಡಿಆರ್‌ಡಿಒ ಕೇಂದ್ರ ಕಚೇರಿಯ ಅನುಮೋದನೆಗೆ ಒಳಪಟ್ಟಿರುತ್ತದೆ.
    f.ಕೆಲಸದ ವೇಳೆ ( ರಜಾದಿನ ಬಿಟ್ಟು ) ಸೋಮವಾರದಿಂದ ಶುಕ್ರವಾರ 8.30 ಗಂಟೆಯಿಂದ 05.೦೦ ಗಂಟೆಯವರಿಗೆ. ಶನಿವಾರ/ಭಾನುವಾರ (ತುರ್ತು ಅಥವಾ ಕರೆಯ ಮೇರೆಗೆ)
    g.ಅರ್ಹ ಅಭ್ಯರ್ಥಿಗಳು ಹೆಸರು, ತಂದೆ/ಗಂಡನ ಹೆಸರು, ಜನ್ಮದಿನಾಂಕ, ಸಂವಹನ ವಿಳಾಸ, ವಿದ್ಯಾರ್ಹತೆ ಅನುಭವ ವಿವರ, ದೂರವಾಣಿ ಸಂಖ್ಯೆ ಮತ್ತು ಇಮೇಲ್ ವಿಳಾಸದೊಂದಿಗೆ ಕೆಎಂಸಿ/ಐಎಂಸಿ ನೋಂದಣಿಯನ್ನು ಒಂದು ಬಿಳಿಯ ಹಾಳೆಯ ಮೇಲೆ ಅರ್ಜಿಯನ್ನು ಬೆರಳಚ್ಚು ಮಾಡಿಸಿ ಮತ್ತು ಪೂರಕ ಪ್ರಮಾಣಪತ್ರ/ಯೋಗ್ಯತಾ ಪತ್ರಗಳ ಸ್ವ ದೃಢೀಕೃತ ನಕಲು ಪ್ರತಿಗಳನ್ನು ನಿರ್ದೇಶಕರು, ಸಿಎಬಿಎಸ್, ವಿಂಡ್ ಟೆನಲ್ ರಸ್ತೆ, ಬೇಲೂರು,ಯಮಲೂರು ಅಂಚೆ, ಬೆಂಗಳೂರು -560037 ಗೆ ಈ ಜಾಹೀರಾತು ಪ್ರಕಟವಾದ 30 ದಿನದೊಳಗಾಗಿ ಸಲ್ಲಿಸಬೇಕು. ಲಕೋಟೆಯ ಮೇಲೆ ‘ಸಿವಿಲಿಯನ್ ಮೆಡಿಕಲ್ ಆಫೀಸರ್- ಗುತ್ತಿಗೆ ಹುದ್ದೆಗಾಗಿ ಅರ್ಜಿ’ ಎಂದು ಸೂಪರ್‌ಸ್ಕ್ರೈಬ್ಡ್ ಆಗಿರಬೇಕು.

  • ಬ್ಯಾಂಕ್ ಆಫ್ ಬರೋಡ ವಿವಿಧ ಹುದ್ದೆಗೆ ನೇಮಕ

    ಬ್ಯಾಂಕ್ ಆಫ್ ಬರೋಡ ವಿವಿಧ ಹುದ್ದೆಗೆ ನೇಮಕ

    ಬ್ಯಾಂಕ್ ಆಫ್ ಬರೋಡಾನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಚೀಫ್ ಎಕಾನಮಿಸ್ಟ್ -01
    ಪಬ್ಲಿಕ್ ರಿಲೇಷನ್ ಆಫೀಸರ್ – 01
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 29-04-2021

    ಅರ್ಜಿ ಶುಲ್ಕ : ಅಭ್ಯರ್ಥಿಗಳು ಅರ್ಜಿಶುಲ್ಕವನ್ನು ಆನ್‌ಲೈನ್‌ ನಲ್ಲಿ ಪಾವತಿಸಬಹುದು.
    ಜನರಲ್, ಒಬಿಸಿ, ಇಡ್ಬ್ಲುಎಸ್, ಅನ್‌ರಿಸರ್ವ್‌ಡ್ ಅಭ್ಯರ್ಥಿಗಳಿಗೆ ರೂ.6೦೦/-, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ. ಪಿಡ್ಬ್ಲುಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂ. 1೦೦/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

    ಡಬ್ಲುಎಸ್ ಪೋಸ್ಟ್‌ ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ಚೀಫ್ ಎಕಾನಮಿಸ್ಟ್ ಪೋಸ್ಟ್‌ ನೋಟಿಫಿಕೇಶನ್‌ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ : ಎಸ್ಎಸ್ಎಲ್ ಸಿ ಪಾಸಾದವರಿಗೂ ಅವಕಾಶ

    ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ : ಎಸ್ಎಸ್ಎಲ್ ಸಿ ಪಾಸಾದವರಿಗೂ ಅವಕಾಶ

    ಆದಾಯ ತೆರಿಗೆ ಮುಖ್ಯ ಆಯುಕ್ತರ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ.

    ಹುದ್ದೆ : ಇನ್ಕಂಟ್ಯಾಕ್ಸ್ ಇನ್ಸ್ ಪೆಕ್ಟರ್- 01
    ಟ್ಯಾಕ್ಸ್ ಅಸಿಸ್ಟೆಂಟ್ – 4
    ಸ್ಟೆನೋಗ್ರಾಫರ್ ಗ್ರೇಡ್ 2 – 3
    ಮಲ್ಟಿ ಟಾಸ್ಕಿಂಗ್ ಸ್ಟಾಫ್ – 06

    ವಯೋಮಿತಿ : ಎಲ್ಲಾ ಹುದ್ದೆಗಳಿಗೆ ಕನಿಷ್ಠ 18 ವರ್ಷ. ಇನ್ಕಂಟ್ಯಾಕ್ಸ್ ಹುದ್ದೆಗೆ ಗರಿಷ್ಠ 30 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 27 ವರ್ಷ.

    ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

    ವಿದ್ಯಾರ್ಹತೆ : SSLC , ಪಿಯುಸಿ, ದ್ವಿತೀಯ ಪಿಯುಸಿ ಪಡೆದಿರಬೇಕು. ಟ್ಯಾಕ್ಸ್ ಅಸಿಸ್ಟೆಂಟ್ ಗೆ ಪ್ರತಿ ಗಂಟೆಗೆ 8000 ಪದಗಳ ಡೇಟಾ ಎಂಟ್ರಿಗಳ ವೇಗ ಹೊಂದಿರಬೇಕು. ಸ್ಟೆನೋಗ್ರಾಫರ್ ಗೆ ಡಿಕ್ಟೇಷನ್ ಪ್ರತಿ ನಿಮಿಷಕ್ಕೆ 80 ಪದಗಳ ವೇಗ ಹೊಂದಿರಬೇಕು. ಪ್ರತಿ ನಿಮಿಷಕ್ಕೆ ಇಂಗ್ಲೀಷ್ ನಲ್ಲಿ 50 ಪದ, 65 ಹಿಂದಿ ಪದಗಳ ಪ್ರತಿಲೇಖನ ಕೌಶಲ ಹೊಂದಿರಬೇಕು.

    ಹುದ್ದೆ ಸ್ಥಳ : ದೆಹಲಿಯ ಮುಖ್ಯ ಆಯುಕ್ತರ ಕಛೇರಿ.

    ಎರಡು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅರ್ಹ ಆಸಕ್ತ ಅಭ್ಯರ್ಥಿಗಳು ದಿನಾಂಕ‌ 15-04-2021 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು.

    ವೇತನ : ಇನ್ಕಂಟ್ಯಾಕ್ಸ್ ಆಫೀಸರ್ ಗೆ ಮಾಸಿಕ ರೂ.34,800/- , ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ ರೂ.20,200/- ವೇತನ ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ : ಶಾರ್ಟ್ ಲಿಸ್ಟ್ ಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ನೇರಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ದಿನಾಂಕ, ಸ್ಥಳ, ಸಮಯ ಇತ್ಯಾದಿಗಳನ್ನು ಶಾರ್ಟ್ ಲಿಸ್ಟ್ ಗೆ ಆಯ್ಕೆಯಾದ ಅಭ್ಯರ್ಥಿಗಳ ಮೇಲ್ ಗೆ ಕಳುಹಿಸಲಾಗುವುದು.

    ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯನ್ನು ಯಾವ ಹುದ್ದೆಗೆ ಅರ್ಜಿ ಸಲ್ಲಿಸುವುದು ಹಾಗೂ ಕ್ರೀಡಾ ವಿಭಾಗದಲ್ಲಿ ಯಾವ ಕ್ರೀಡೆ ಎಂಬುದನ್ನು ಸ್ಪಷ್ಟವಾಗಿ ಬರೆಯ ಬೇಕು.

    ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳನ್ನು ಈ ವಿಳಾಸಕ್ಕೆ ಸಲ್ಲಿಸಬೇಕು.

    The Deputy Commissioner Of Income Tax (Hqrs- Personnel), Room No.378A, C.R.Building, I.P.Estate, New Delhi – 110002

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಗ್ರಂಥಾಲಯ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ

    ಗ್ರಂಥಾಲಯ ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ

    ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಒಕ್ಕೂಟದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಗ್ರಂಥಾಲಯ ಟ್ರೈನಿ

    ಹುದ್ದೆ ಅವಧಿ : 11 ತಿಂಗಳ ಅವಧಿಗೆ

    ವಿದ್ಯಾರ್ಹತೆ : ಈ ಹುದ್ದೆಗಳಿಗೆ 2018 ರ ನಂತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಕರ್ನಾಟಕದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

    ವೇತನ : ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ರೂ.15,000/- ಮಾಸಿಕ ಸ್ಟೈಫೆಂಡ್ ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ದಿನಾಂಕ 27-04-2021 ರೊಳಗೆ ಸಲ್ಲಿಸತಕ್ಕದ್ದು.

    ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಲಕೋಟೆ ಮೇಲೆ ‘ಗ್ರಂಥಾಲಯ ಟ್ರೈನಿ’ ಎಂದು ನಮೂದಿಸಿರಬೇಕು.

    ಅರ್ಜಿಯನ್ನು ಅಭ್ಯರ್ಥಿಗಳು [email protected] ಇ-ಮೇಲ್ ಗೆ ಸಾಫ್ಟ್‌ ಕಾಪಿ ಕಳುಹಿಸಬಹುದು. ಅಥವಾ ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೂ ಸಲ್ಲಿಸಬಹುದು.

    ಅಗತ್ಯ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಸ್ವವಿವರಗಳನ್ನು ಸ್ವಯಂ ದೃಡೀಕೃತ ಹೆಚ್‌.ಎಸ್‌.ಸಿ ಯಿಂದ ಪ್ರಾರಂಭವಾಗುವ ಶೈಕ್ಷಣಿಕ ಅರ್ಹತೆಗಳನ್ನು ಹಾಗೂ ಒಂದು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರವನ್ನು 27-04-2021 ರೊಳಗೆ ಸಲ್ಲಿಸತಕ್ಕದ್ದು.

    ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ : ನಿರ್ದೇಶಕರು, ಗ್ರಂಥಾಲಯ,ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ,ಕರ್ನಾಟಕ, 4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು -560041