ವಿಶೇಷ ಭೂಸ್ವಾಧಿನಾಧಿಕಾರಿಗಳು ಹಾಗೂ ಸಕ್ಷಮ ಪ್ರಾಧಿಕಾರಗಳ ಕಚೇರಿಯಲ್ಲಿ 45 ವಿವಿಧ ಹುದ್ದೆ, ನೇರ ಸಂದರ್ಶನಕ್ಕೆ ಆಹ್ವಾನ

Advertisements

ವಿಶೇಷ ಭೂಸ್ವಾಧಿನಾಧಿಕಾರಿಗಳು ಹಾಗೂ ಸಕ್ಷಮ ಪ್ರಾಧಿಕಾರಿಗಳ ಕಚೇರಿ, ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ, ಹೆಬ್ಬಾಳ, ಬೆಂಗಳೂರು ಕಚೇರಿಯ ವ್ಯಾಪ್ತಿಗೆ ಒಳಪಡುವ ಹೊಸಕೋಟೆ, ಮಾಲೂರು, ಕೋಲಾರ, ಬಂಗಾರಪೇಟೆ, ಕೆ.ಜಿ.ಎಫ್ ತಾಲ್ಲೂಕುಗಳಲ್ಲಿ ವಿವಿಧ ಯೋಜನೆಗಳಿಗೆ ಕಂದಾಯ ಇಲಾಖೆ/ ಸರ್ವೇ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುವ ಶಿರಸ್ತೇದಾರರು, ಪ್ರಥಮ ದರ್ಜೆ ಸಹಾಯಕರು/ರಾಜಸ್ವ ನಿರೀಕ್ಷಕರು, ಗ್ರಾಮಲೆಕ್ಕಿಗರು ಮತ್ತು ಭೂಮಾಪಕರುಗಳ ಅವಶ್ಯಕತೆಯಿರುತ್ತದೆ. ಗುತ್ತಿಗೆ ಆಧಾರದ ಮೇರೆಗೆ ತಾತ್ಕಾಲಿಕವಾಗಿ ಈ ಕೆಳಕಂಡ ಹುದ್ದೆಗಳಿಗೆ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಲಾಗುವುದು.

ಶಿರಸ್ತೇದಾರರು – 5 ಹುದ್ದೆ
ರಾಜಸ್ವ ನಿರೀಕ್ಷಕರು – 10 ಹುದ್ದೆ
ಭೂಮಾಪಕರು – 10 ಹುದ್ದೆ
ಪ್ರಥಮ ದರ್ಯ ಸಹಾಯಕರು – 10 ಹುದ್ದೆ
ಗ್ರಾಮಲೆಕ್ಕಿಗರು – 10 ಹುದ್ದೆ

ಪ್ರಾಧಿಕಾರದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಮೇಲ್ಕಂಡ ತಾಲ್ಲೂಕುಗಳಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ ನೌಕರರು ಎಲ್ಲಾ ಸೇವಾ ದಾಖಲೆಗಳೊಂದಿಗೆ ದಿನಾಂಕ 02-08-2021 ಮತ್ತು 07-08-2021 ರವರೆಗೆ ನಡೆಯುವ walk in interview ಗೆ ಕಚೇರಿ ವೇಳೆಯಲ್ಲಿ ಈ ಕೆಳಕಂಡ ವಿಳಾಸದಲ್ಲಿ ಖುದ್ದು ಹಾಜರಾಗತಕ್ಕದ್ದು.

ಕಚೇರಿ ವಿಳಾಸ : ವಿಶೇಷ ಭೂಸ್ವಾಧಿನಾಧಿಕಾರಿಗಳು ಹಾಗೈ ಸಕ್ಷಮ ಪ್ರಾಧಿಕಾರಿಗಳು, ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ, ನಂ.678/3, ನೀರುಬಾವಿ ಕೆಂಪಣ್ಣ ಲೇಔಟ್ ಹೆಬ್ಬಾಳ, ಬೆಂಗಳೂರು – 560024, ದೂರವಾಣಿ ಸಂಖ್ಯೆ -: 9880414634

Comments

Leave a Reply

Your email address will not be published. Required fields are marked *