ಕರ್ನಾಟಕ ಲೋಕಸೇವಾ ಆಯೋಗದಿಂದ ದಾಖಲಾತಿ ಪರಿಶೀಲನೆ ರದ್ದು

Advertisements

ಕರ್ನಾಟಕ ಲೋಕಸೇವಾ ಆಯೋಗದಿಂದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿ ಕಿರಿಯ ತರಬೇತಿ ಅಧಿಕಾರಿ ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ದಿನಾಂಕ 18 ಮತ್ತು 19 ಫೆಬ್ರವರಿ 2021 ರಂದು ನಿಗದಿಪಡಿಸಲಾಗಿದ್ದ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಆಡಳಿತಾತ್ಮಕ ಕಾರಣಗಳಿಂದಾಗಿ ರದ್ದು ಗೊಳಿಸಲಾಗಿದೆ., ಅಭ್ಯರ್ಥಿಗಳು ಆಯೋಗಕ್ಕೆ ಖುದ್ದಾಗಿ ಹಾಜರಾಗುವಂತಿಲ್ಲ. ಹಾಗಾಗಿ ಈಗಾಗಲೇ ಕಳುಹಿಸಿರುವ ಸೂಚನಾ ಪತ್ರದಲ್ಲಿರುವಂತೆ ನಿಯಮಗಳಿಗೆ ಅನುಗುಣವಾಗಿ ನಿಮ್ಮ ಎಲ್ಲಾ ಪ್ರಮಾಣ ಪತ್ರಗಳ 2 ಸೆಟ್ ಜೆರಾಕ್ಸ್ ಪ್ರತಿಗಳನ್ನು ಅಧಿಕಾರಿಗಳಿಂದ ದೃಢೀಕರಿಸಿ ದಿನಾಂಕ ಫೆಬ್ರವರಿ 22, 2021 ರೊಳಗಾಗಿ ಸ್ಪೀಡ್ ಪೋಸ್ಟ್ (ತ್ವರಿತ ಅಂಚೆ ) ಮೂಲಕ ಈ ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ :

ಕರ್ನಾಟಕ ಲೋಕಸೇವಾಆಯೋಗ (ನೇಮಕಾತಿ ಶಾಖೆ-2)
ಉದ್ಯೋಗ ಸೌಧ, ಬೆಂಗಳೂರು -01

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Comments

Leave a Reply

Your email address will not be published. Required fields are marked *