Category: Karnataka Jobs

Karnataka State Govt Jobs, KPSC Notifications, Bangalore Metro Jobs, KSRTC Recruitment, SSC Jobs in Karnataka, RRB Bangalore Recruitment, Railway Jobs, Bank Jobs in Karnataka, PDO Jobs in Karnataka, Data Entry Jobs, District court jobs, Karnataka court jobs, VA Recruitment etc all Karnataka govt job updates sarakarijobs.com

  • ವಿಪತ್ತು ನಿರ್ವಹಣಾ ಯೋಜನೆ ಕಲಬುರಗಿ: ಹುದ್ದೆಗಳಿಗೆ ಅರ್ಜಿ ಆಹ್ವಾನ

    ವಿಪತ್ತು ನಿರ್ವಹಣಾ ಯೋಜನೆ ಕಲಬುರಗಿ: ಹುದ್ದೆಗಳಿಗೆ ಅರ್ಜಿ ಆಹ್ವಾನ

    ವಿಪತ್ತು ನಿರ್ವಹಣಾ ಯೋಜನೆ ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಎಪ್ರಿಲ್ 26 ಮಧ್ಯಾಹ್ನ 1.30 ರೊಳಗೆ. ಕೊನೆ ದಿನದ ಬಳಿಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

    ಹುದ್ದೆ : ಜಿಲ್ಲಾ ವಿಪತ್ತು ನಿರ್ವಹಣೆಗಾರ ( district disaster Professional ) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ವಯೋಮಿತಿ : ಅಭ್ಯರ್ಥಿಗಳು ವಯೋಮಿತಿಯು 65 ವರ್ಷ ಮೀರಿರಬಾರದು.

    ಕೆಲಸದ ಅವಧಿ : 12 ತಿಂಗಳ ಅವಧಿಯ ಮೇರೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ವಿದ್ಯಾರ್ಹತೆ : ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪಡೆದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಪತ್ತು ನಿರ್ವಹಣೆ, ಸಾಮಾಜಿಕ ಕಾರ್ಯ, ಸಮಾಜ ಶಾಸ್ತ್ರ, ಕೃಷಿ, ವಾಸ್ತುಶಿಲ್ಪ, ಇಂಜಿನಿಯರಿಂಗ್ ನಗರ ಯೋಜನೆ ಹಾಗೂ ಇನ್ನಿತರ ಸಾಮಾಜಿಕ ವಿಜ್ಞಾನದಲ್ಲಿ ಪದವಿ ಪಡೆದವರಿಗೆ ಮೊದಲ ಆದ್ಯತೆ ನೀಡಲಾಗುವುದು.
    5 ವರ್ಷಗಳ ಅನುಭವ ಇರಬೇಕು. ಪಿಎಚ್ಡಿ ಪಡೆದ ಅಭ್ಯರ್ಥಿಗಳಿಗೆ 3 ವರ್ಷಗಳ ಅನುಭವ ಇರಬೇಕು.

    ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಉತ್ತಮ ಹಿಡಿತ ಹಾಗೂ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.

    ಎಂ.ಎಸ್.ಆಫೀಸ್ ಮತ್ತು ಇಂಟರ್ನೆಟ್ ನಲ್ಲಿ ಉತ್ತಮ ಜ್ಞಾನ ಹೊಂದಿರಬೇಕು. ಪ್ರತಿ ಮಾಹೆಗೆ ರೂ. 44,000/- ವೇತನ ನೀಡಲಾಗುವುದು.

    ಅಭ್ಯರ್ಥಿಗಳು ಇತ್ತೀಚಿನ ಸ್ವ ವಿವರಗಳೊಂದಿಗೆ ಸ್ವಯಂ ದೃಢೀಕರಿಸಿದ ಶೈಕ್ಷಣಿಕ ಮತ್ತು ಅನುಭವ ಪ್ರಮಾಣ ಪತ್ರಗಳೊಂದಿಗೆ ಅರ್ಜಿಯನ್ನು ಜಿಲ್ಲಾಧಿಕಾರಿಗಳು( ವಿಪತ್ತು ನಿರ್ವಹಣಾ ಕೋಶ ) ಕಲಬುರಗಿ -585102 ನೋಂದಾಯಿತ ಅಂಚೆ ಮೂಲಕ ಸಲ್ಲಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂ.ಸಂಖ್ಯೆ 08472- 278677 ಗೆ ಸಂಪರ್ಕಿಸಬಹುದು.

  • ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ

    ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ

    ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕ್ ಪಂಚಾಯತ್‌ನಲ್ಲಿ ಖಾಲಿ ಇರುವ ಕಂಪ್ಯೂಟರ ಆಪರೇಟರ್ ಹಾಗೂ ಡಿ.ಗುಂಪು ನೌಕರರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

    ಹುದ್ದೆ ಸಂಖ್ಯೆ : ಡಿ ಗುಂಪು ನೌಕರರು – 02
    ಕಂಪ್ಯೂಟರ್ ಅಪೇಟರ್ -02

    ವಿದ್ಯಾರ್ಹತೆ : ಡಿ ಗುಂಪು ನೌಕರಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಹತ್ತನೇ ತರಗತಿ ತೇರ್ಗಡೆ ಯಾಗಿರಬೇಕು.
    ಕಂಪ್ಯೂಟರ್ ಅಪರೇಟರ್ ಹುದ್ದೆಗೆ ಪಿಯುಸಿ ಉತ್ತೀರ್ಣ ಹಾಗೂ ಸರಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಗಣಕ ಯಂತ್ರ ಕೋರ್ಸ್ ಮಾಡಿರಬೇಕು. ಜೊತೆಗೆ ಕನ್ನಡ ಟೈಪಿಂಗ್ ಬಲ್ಲವರಾಗಿರಬೇಕು.

  • FSSAI : ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

    FSSAI : ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಎಫ್‌ಎಸ್‌ಎಸ್‌ಎಐ (ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ) ನೇರ ನೇಮಕಾತಿ ಆಧಾರದ ಮೇಲೆ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವರ್ಗಾವಾರು ಖಾಲಿ ಹುದ್ದೆಗಳ ಸಂಖ್ಯೆ ಹಾಗೂ ಗರಿಷ್ಠ ವಯೋಮಿತಿಗಾಗಿ ವಿವರವಾದ ಜಾಹೀರಾನ್ನು ನೋಡಬಹುದು.

    ಹುದ್ದೆಗಳ ವಿವರ:

    ಪ್ರಧಾನ ವ್ಯವಸ್ಥಾಪಕ – 01
    ಜಂಟಿ ನಿರ್ದೇಶಕ – (ತಾಂತ್ರಿಕ) – 08
    ಜಂಟಿ ನಿರ್ದೇಶಕ ( ಆಡಳಿತ ಮತ್ತು ಹಣಕಾಸು ) -04
    ಹಿರಿಯ ವ್ಯವಸ್ಥಾಪಕ – ಪತ್ರಿಕೋದ್ಯಮ/ಸಮೂಹ ಸಂವಹನ ಅಥವಾ ಸಾರ್ವಜನಿಕ ಸಂಪರ್ಕ-01
    ಹಿರಿಯ ವ್ಯವಸ್ಥಾಪಕ (ಐಟಿ) – ಮಾಹಿತಿ ತಂತ್ರಜ್ಞಾನ- 01
    ಉಪನಿರ್ದೇಶಕ – ತಾಂತ್ರಿಕ – 11
    ಆಡಳಿತ ಮತ್ತು ಹಣಕಾಸು – 06
    ವ್ಯವಸ್ಥಾಪಕ -(ಪತ್ರಿಕೋದ್ಯಮ/ಸಮೂಹ/ಸಂವಹನ ಅಥವಾ ಸಾರ್ವಜನಿಕ ಸಂಪರ್ಕ- 03
    ,ಮಾರ್ಕೆಟಿಂಗ್ – 02, ಸಾಮಾಜಿಕ ಕಾರ್ಯ ಅಥವಾ ಮನಃಶಾಸ್ತ್ರ ಅಥವಾ ಕಾರ್ಮಿಕ ಮತ್ತು ಸಮಾಜ ಕಲ್ಯಾಣ – 01

    ಅರ್ಜಿ ಮತ್ತು ಇತರೆ ವಿವರಗಳು www.fssai.gov.in ರಡಿ jobs @FSSAI ( Carers) Sectionರಲ್ಲಿ ಲಭ್ಯ.

    ಮೇಲೆ ನೀಡಲಾದ ಖಾಲಿ ಹುದ್ದೆಗಳು ಸೂಚಿತವಾಗಿದ್ದು ಇದರಲ್ಲಿ ಅಥಾ ಕಡಿಮೆಯಾಗಬಹುದು. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕಡೇ ದಿನಾಂಕ 15 ನೇ ಮೇ 2021. ಆನ್‌ಲೈನ್ ಅಪ್ಲಿಕೇಶನ್‌ಗಾಗಿ ಪೋರ್ಟಲ್ 16 ನೇ ಎಪ್ರಿಲ್ 2021ರಿಂದ 15ನೇ ಮೇ 2021 ರವರೆಗೆ ಲಭ್ಯ.

  • KSET ಪರೀಕ್ಷಾ ದಿನಾಂಕ ನಿಗದಿ: ಅಧಿಕೃತ ಪ್ರಕಟಣೆ ಬಿಡುಗಡೆ

    KSET ಪರೀಕ್ಷಾ ದಿನಾಂಕ ನಿಗದಿ: ಅಧಿಕೃತ ಪ್ರಕಟಣೆ ಬಿಡುಗಡೆ

    ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ) ಯನ್ನು ದಿನಾಂಕ : 11 ನೇ ಎಪ್ರಿಲ್ 2021 ರಂದು ನಡೆಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು.

    ಆದ್ದರಿಂದ ಸದರಿ ಕೆಸೆಟ್ 2021 ಪರೀಕ್ಷೆಯನ್ನು 25-04-2021 (ಭಾನುವಾರ) ನಡೆಸಲು ತೀರ್ಮಾನಿಸಲಾಗಿದೆ.

    ಕೆಸೆಟ್ 2021 ರ ಪರೀಕ್ಷೆಯನ್ನು ನಡೆಸಲು ಪತ್ರದ ಮುಖಾಂತರ ಈಗಾಗಲೇ ಕರ್ನಾಟಕ ಸರಕಾರದ ಗಮನಕ್ಕೆ ತರಲಾಗಿದೆ. ಈ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದಿದೆ.

  • ವಿಕಾಸ್ ಸೌಹಾರ್ದ ಕೋಅಪರೇಟಿವ್ ಬ್ಯಾಂಕ್ ನಲ್ಲಿ ಹುದ್ದೆ

    ವಿಕಾಸ್ ಸೌಹಾರ್ದ ಕೋಅಪರೇಟಿವ್ ಬ್ಯಾಂಕ್ ನಲ್ಲಿ ಹುದ್ದೆ

    ವಿಕಾಸ್ ಸೌಹಾರ್ದ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಹುದ್ದೆ : ಪ್ರೊಬೆಷನರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ‌.

    ಹುದ್ದೆ ಸ್ಥಳ : ವಿಜಯನಗರ- ಕರ್ನಾಟಕ

    ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 15-04-2021
    ಮೌಖಿಕ ಸಂದರ್ಶನ : 01-05-2021 ( 8.30am)
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-04-2021
    ಪರೀಕ್ಷಾ ದಿನಾಂಕ: 25-04-2021( 11.00am)

    ಅರ್ಜಿ ಶುಲ್ಕ : ರೂ. 100/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

    ವಯೋಮಿತಿ : 01-04-2021 ರ ಅನ್ವಯ ಅಭ್ಯರ್ಥಿಗಳಿಗೆ 30 ವರ್ಷ ಮೀರಿರಬಾರದು.

    ವಿದ್ಯಾರ್ಹತೆ : ಅಭ್ಯರ್ಥಿಗಳು ಗ್ರಾಜ್ಯುಯೇಶನ್ ನನ್ನು 50% ಅಂಕಗಳೊಂದಿಗೆ ಅಂಗೀಕೃತ ಯುನಿವರ್ಸಿಟಿಯಿಂದ ಪಡೆದಿರಬೇಕು.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ.

    ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಕಲಬುರಗಿ ಮಹಾನಗರ ಪಾಲಿಕೆ: ಹುದ್ದೆಗಳಿಗೆ ನೇಮಕ

    ಕಲಬುರಗಿ ಮಹಾನಗರ ಪಾಲಿಕೆ: ಹುದ್ದೆಗಳಿಗೆ ನೇಮಕ

    ಕಲಬುರಗಿ ಜಿಲ್ಲೆಯ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ವಿವರಗಳು ಈ ಕೆಳಗಿನಂತಿವೆ :

    ಹುದ್ದೆ : ಪೌರಕಾರ್ಮಿಕರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ.

    ಕ್ಷೇಮಾಭಿವೃದ್ಧಿ/ಗುತ್ತಿಗೆ/ಹೊರಗುತ್ತಿಗೆ/ದಿನಗೂಲಿ/ಸಮಾನ ಕೆಲಸ ಕ್ಕೆ ಸಮಾನ ವೇತನ/ಇತರೆ ಆಧಾರದ ಮೇಲೆ‌‌ ಕರ್ತವ್ಯ ನಿರತರಿಗೆ ಆದ್ಯತೆ ನೀಡಿ ಪರಿಗಣಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-04-2021 ( ಸಾಯಂಕಾಲ 5 ಗಂಟೆಯವರೆಗೆ)

    ಅಭ್ಯರ್ಥಿಗಳು ಅರ್ಜಿಯನ್ನು ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ ಕಲಬುರಗಿ, ಜಿಲ್ಲಾಧಿಕಾರಿಗಳ ಕಚೇರಿ ಕಲಬುರಗಿ ಅಥವಾ ಆಯುಕ್ತರು ಮಹಾನಗರ ಪಾಲಿಕೆ ಕಲಬುರಗಿ ಕಚೇರಿಯಿಂದ ಪಡೆದುಕೊಳ್ಳತಕ್ಕದ್ದು. .

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮಹಾನಗರ ಪಾಲಿಕೆ ಕಲಬುರಗಿ ಕಾರ್ಯಾಲಯದಿಂದ ಅಥವಾ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ‌.