ಡಿಸಿಸಿ ಬ್ಯಾಂಕ್ನಲ್ಲಿ ಉದ್ಯೋಗ ಪಡೆಯಲು ಬಯಸುವುವರಿಗೆ ಸಿಹಿ ಸುದ್ದಿ. ಮಂಡ್ಯ ಡಿಸಿಸಿ ಬ್ಯಾಂಕ್ನಲ್ಲಿ ಉದ್ಯೋಗಾವಕಾಶವಿದೆ. ಕಿರಿಯ ಸಹಾಯಕ, ವಾಹನ ಚಾಲಕ, ಅಟೆಂಡರ್ ಹುದ್ದೆಗಳಿಗೆ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ವಯೋಮಿತಿ ಏನು? ಅರ್ಜಿ ಶುಲ್ಕ ಎಷ್ಟು? ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವಾಗ? ಯಾವ ಹುದ್ದೆಗೆ ಏನು ವಿದ್ಯಾರ್ಹತೆ ಬಯಸಲಾಗಿದೆ? ಇತ್ಯಾದಿ ವಿವರಗಳನ್ನು ಸರಕಾರಿಜಾಬ್ಸ್.ಕಾಂ ಇಲ್ಲಿ ನೀಡಿದೆ.
ಪ್ರಮುಖ ದಿನಾಂಕಗಳು ಮತ್ತು ಮಾಹಿತಿ
ಲಭ್ಯ ಇರುವ ಹುದ್ದೆಗಳ ಸಂಖ್ಯೆ: 94 ಮಂಡ್ಯ ಡಿಸಿಸಿ ಬ್ಯಾಂಕ್ಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಜನವರಿ 18, 2024 ಮಂಡ್ಯ ಡಿಸಿಸಿ ಬ್ಯಾಂಕ್ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 16, 2024 ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ಸೈಟ್: www.mandyadccbank.com ಸಹಾಯವಾಣಿ ಸಂಖ್ಯೆ: 91085328218 ಮಂಡ್ಯ ಡಿಸಿಸಿ ಬ್ಯಾಂಕ್ ವಿಳಾಸ: HEAD OFFICE BRANCH Post Box No: 14. Market Road, Mandya, Mandya
ವಿದ್ಯಾರ್ಹತೆ ಮತ್ತು ಇತರೆ ಅರ್ಹತೆಗಳು
ಮಾಹಿತಿ ತಂತ್ರಜ್ಞಾನ ಮುಖ್ಯ ವ್ಯವಸ್ಥಾಪಕರು ಗ್ರೇಡ್ 1 ಹುದ್ದೆಗಳ ಸಂಖ್ಯೆ 1. ವಿದ್ಯಾರ್ಹತೆ: ಅಂಗೀಕೃತ ವಿಶ್ವ ವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಎಂ.ಟೆಕ್ ಸ್ನಾತಕೊತ್ತರ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆಗೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು ಎಂದು ಅಧಿಸೂಚನೆ ತಿಳಿಸಿದೆ.
ಡಿಸಿಸಿ ಬ್ಯಾಂಕ್ ಮಂಡ್ಯದಲ್ಲಿ ಅತ್ಯಧಿಕ ಸಂಖೆಯ ಕಿರಿಯ ಸಹಾಯಕರ ಹುದ್ದೆಗಳಿವೆ. ಒಟ್ಟು ಕಿರಿಯ ಸಹಾಯಕರ 70 ಹುದ್ದೆಗಳಿಗೆ ಪಿಯುಸಿ ಓದಿರುವವರು ಅರ್ಜಿ ಸಲ್ಲಿಸಬಹುದು. ಕನ್ನಡದಲ್ಲಿ ಓದಲು, ಬರೆಯಲು ತಿಳಿದಿರಬೇಕು, ಕಂಪ್ಯೂಟರ್ ಜ್ಞಾನ ಇರಬೇಕು.
ವಾಹನ ಚಾಲಕ 2 ಹುದ್ದೆಗಳಿವೆ. ಎಸ್ಎಸ್ಎಲ್ಸಿ ವಿದ್ಯಾರ್ಹತೆ ಬಯಸಲಾಗಿದೆ. ಕನ್ನಡ ತಿಳಿದಿರಬೇಕು. ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು.
21 ಅಟೆಂಡರ್ ಹುದ್ದೆಗಳಿವೆ. ಎಸ್ಎಸ್ಎಲ್ಸಿ ವಿದ್ಯಾರ್ಹತೆ ಬಯಸಲಾಗಿದೆ. ಕನ್ನಡ ತಿಳಿದಿರಬೇಕು.
ಮಂಡ್ಯ ಡಿಸಿಸಿ ಬ್ಯಾಂಕ್ ನೇಮಕ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಆಸಕ್ತ ಅರ್ಹ ಅಭ್ಯರ್ಥಿಗಳು www.mandyadccbank.com ವೆಬ್ಸೈಟ್ನಲ್ಲಿ ಡಿಸಿಸಿ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆ ಓದಿಕೊಳ್ಳಲು ಮರೆಯಬೇಡಿ.
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಶಿವಮೊಗ್ಗ, ಇದರಲ್ಲಿ ಖಾಲಿಯಿರುವ ಈ ಕೆಳಕಂಡ ವಿವಿಧ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕಿನ ನೌಕರರ ಸೇವಾ ನಿಯಮಾವಳಿ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಸಿಒ 58 ಸಿಸಿಬಿ 2018, ಬೆಂಗಳೂರು, ದಿನಾಂಕ 05-02 -2019 ಹಾಗೂ ಸಹಕಾರ ಇಲಾಖೆಯ ಪತ್ರ ಸಂಖ್ಯೆ: ಆರ್ಸಿಎಸ್/ಸಿಆರ್ಡಿ/ಕೆಎಂಸಿ-4/ 205/201718 ದಿನಾಂಕ 31-05-2021 ರನ್ವಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛೆಯುಳ್ಳ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಅರ್ಜಿ ನಮೂನೆಯಲ್ಲಿ ಸ್ವಹಸ್ತದ / ಗಣಕಯಂತ್ರದಿಂದ ಮಾಡಿದ ಅರ್ಜಿಯನ್ನು ಪೂರ್ಣ ವಿವರ, ಅಗತ್ಯ ದಾಖಲಾತಿಗಳ ದೃಢೀಕೃತ ಪ್ರತಿ ಹಾಗೂ ಅರ್ಜಿ ಶುಲ್ಕದೊಂದಿಗೆ ಈ ಕೆಳಗೆ ಸಹಿ ಮಾಡಿದವರಿಗೆ ಸಲ್ಲಿಸಬೇಕು. ನೇಮಕಾತಿ ಮಾಡಲುದ್ದೇಶಿಸಿರುವ ಹುದ್ದೆಗಳ ಒಟ್ಟು ಸಂಖ್ಯೆ: 98. ಸದರಿ ಹುದ್ದೆಗಳನ್ನು ಸರ್ಕಾರಿ ಆದೇಶ ಪ್ರಕಾರ ಈ ಕೆಳಕಂಡಂತೆ ವರ್ಗೀಕರಿಸಿ ಮೀಸಲಿರಿಸಲಾಗಿದೆ.
ವಿಶೇಷ ಸೂಚನೆ:- ಈ ಕೆಳಕಂಡ ಹುದ್ದೆಗಳ ಭರ್ತಿಗಾಗಿ ಬ್ಯಾಂಕು ಈ ಹಿಂದೆ ನೀಡಿದ್ದ ಪತ್ರಿಕಾ ಪ್ರಕಟಣೆ ಸಂಖ್ಯೆ: ಆ ಮತ್ತು ಸಿ/ 3041/2018-19 ದಿನಾಂಕ 22-02-2019ರ ಅನ್ವಯ ಅರ್ಜಿ ಸಲ್ಲಿಸಿ ಬ್ಯಾಂಕಿನಿಂದ ಲಿಖಿತ ಪರೀಕ್ಷೆಗೆ `ಪ್ರವೇಶ ಪತ್ರ’ ಸ್ವೀಕರಿಸಿದ ಅಭ್ಯರ್ಥಿಗಳು ಈ ಪ್ರಕಟಣೆಯನ್ನನುಸರಿಸಿ ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಹಿಂದಿನ ಅರ್ಜಿಯನ್ನೇ ಪರಿಗಣಿಸಲಾಗುವುದು.
ಡಿಸಿಸಿ ಬ್ಯಾಂಕ್ ಉದ್ಯೋಗ- ವೇತನ ಎಷ್ಟು?
ಆಪ್ತ ಸಹಾಯಕರು/ಶೀಘ್ರಲಿಪಿಗಾರರು : ರೂ.33450-850-36000-950-39800-1100-46400- 1250-53900-1450-62600 ಕಿರಿಯ ಸಹಾಯಕರು/ಕ್ಷೇತ್ರಾಧಿಕಾರಿಗಳು/ನಗದು ಗುಮಾಸ್ತರು : ರೂ.30350-750-32600-850-36000-950-39800- 1100-46400-1250-53900-1450-58250 ವಾಹನ ಚಾಲಕರು : ರೂ.27650-650-29600-750-32600-850-36000-950-39800-1100-46400-1250-52650 ಅಟೆಂಡರ್ಸ್ : ರೂ.23500-550-24600-600-27000-650-29600-750-32600-850-36000-950-39800-1100- 46400-1250-47650 ಜಲಗಾರರು: ರೂ.17000-400-18600-450-20400-500-22400-550- 24600-600-27000-650-28950 ಮತ್ತು ನಿಯಮಗಳ ಪ್ರಕಾರ ಅನ್ವಯಿಸುವ ಇತರೆ ಭತ್ಯೆಗಳು.
Shivamogga DCC Bank Recruitment 2022: ವಿದ್ಯಾರ್ಹತೆ ಏನು?
ಆಪ್ತ ಸಹಾಯಕರು/ಶೀಘ್ರಲಿಪಿಗಾರರು: ಅಂಗೀಕೃತ ವಿಶ್ವವಿದ್ಯಾನಿಲಯದ ಪದವಿ ಹೊಂದಿರತಕ್ಕದ್ದು ಹಾಗೂ ಕರ್ನಾಟಕ ಪ್ರೌಡ ಶಿಕ್ಷಣ ಮಂಡಳಿ ಏರ್ಪಡಿಸುವ ಇಂಗ್ಲೀಷ್/ಕನ್ನಡ ಬೆರಳಚ್ಚು ಪರೀಕ್ಷೆಯ ಮತ್ತು ಶೀಘ್ರಲಿಪಿ ಪರೀಕ್ಷೆಯ ಪ್ರೌಢÀ ದರ್ಜೆ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರತಕ್ಕದ್ದು. ಕಂಪ್ಯೂಟರ್ನಲ್ಲಿ ಹೆಚ್ಚಿನ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ಕಿರಿಯ ಸಹಾಯಕರು/ಕ್ಷೇತ್ರಾಧಿಕಾರಿಗಳು/ನಗದು ಗುಮಾಸ್ತರು: (1) ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪಡೆದ ಪದವಿ (2) ಸಹಕಾರ ವಿಷಯಗಳಲ್ಲಿ ವಿದ್ಯಾರ್ಹತೆ ಮತ್ತು ಅನುಭವವನ್ನು ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಕಂಪ್ಯೂಟರ್ನಲ್ಲಿ ಹೆಚ್ಚಿನ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
ವಾಹನ ಚಾಲಕರು: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಹಾಗೂ ಡ್ರೈವಿಂಗ್ ಲೈಸನ್ಸ್ ಹೊಂದಿರತಕ್ಕದ್ದು.
ಅಟೆಂಡರ್: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಜಲಗಾರರು: ಕನ್ನಡ ಭಾಷೆಯಲ್ಲಿ 4ನೇ ತರಗತಿವರೆಗೆ ಓದಿರತಕ್ಕದ್ದು.
Shivamogga DCC Bank Recruitment 2022: ವಯೋಮಿತಿ ಎಷ್ಟು?
ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಕನಿಷ್ಟ 18 ವರ್ಷಗಳು ಹಾಗೂ ಕೆಳಕಂಡಂತೆ ಗರಿಷ್ಟ ವಯೋಮಿತಿಗೊಳಪಟ್ಟಿರತಕ್ಕದ್ದು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳು : 40 ವರ್ಷಗಳು
ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳು : 38 ವರ್ಷಗಳು
ಸಾಮಾನ್ಯ ಗುಂಪಿನ ಅಭ್ಯರ್ಥಿಗಳು : 35 ವರ್ಷಗಳು ಸರ್ಕಾರಿ ಆದೇಶದ ಅನುಸಾರ ಮಾಜಿ ಸೈನಿಕರಿಗೆ ಸೈನ್ಯದಲ್ಲಿ ಸಲ್ಲಿಸಿದ ಸೇವೆಯನ್ನು ಕಳೆದು ಆಯಾ ವರ್ಗಕ್ಕೆ ನಿಗದಿಪಡಿಸಿದ ವಯೋಮಿತಿಯೊಳಗಿರಬೇಕು. ವಿಧವೆಯರಿಗೆ ವಯೋಮಿತಿಯಲ್ಲಿ 10 ವರ್ಷಗಳ ಸಡಿಲಿಕೆ ಇರುತ್ತದೆ.
Shivamogga DCC Bank Recruitment 2022: ಅರ್ಜಿ ಶುಲ್ಕ ಎಷ್ಟು?
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ, ಸಾಮಾನ್ಯ ಮತ್ತು ಇತರೆ ಹಿಂದುಳಿದ ಜಾತಿ ಮತ್ತು ವರ್ಗಗಳು ಅಂದರೆ; ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಾಗಿದ್ದಲ್ಲಿ ಅರ್ಜಿ ಶುಲ್ಕವನ್ನಾಗಿ ರೂ.900/- (ರೂಪಾಯಿ ಒಂಬೈನೂರು ಮಾತ್ರ)ಗಳೊಂದಿಗೆ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಾಗಿದ್ದಲ್ಲಿ ರೂ.450/- (ರೂಪಾಯಿ ನಾಲ್ಕು ನೂರಾ ಐವತ್ತು ಮಾತ್ರ)ಗಳೊಂದಿಗೆ (ಅರ್ಜಿ ಶುಲ್ಕ ಹಿಂದಿರುಗಿಸುವುದಿಲ್ಲ) ಮುಖ್ಯ ಕಾರ್ಯನಿರ್ವಾಹಕರು, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಶಿವಮೊಗ್ಗ, ಇವರ ಹೆಸರಿಗೆ ಡಿಮ್ಯಾಂಡ್ ಡ್ರಾಫ್ಟ್ / ಪೇ ಆರ್ಡರ್ ಪಡೆದು ಇತರೇ ದಾಖಲಾತಿಗಳೊಂದಿಗೆ ಅಭ್ಯರ್ಥಿಯ ಇತ್ತೀಚಿನ ನಾಲ್ಕು ಭಾವಚಿತ್ರಗಳ ಪಾಸ್ಪೋರ್ಟ್ ಸೈಜ್ ಪ್ರತಿಯನ್ನು ಲಗತ್ತಿಸಿ, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸದಸ್ಯ ಕಾರ್ಯದರ್ಶಿ, ಸಿಬ್ಬಂದಿ ನೇಮಕಾತಿ ಸಮಿತಿ, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಬಾಲರಾಜ್ ಅರಸ್ ರಸ್ತೆ, ಪಿ.ಬಿ. ನಂ.62, ಶಿವಮೊಗ್ಗ – 577 201, ಈ ವಿಳಾಸಕ್ಕೆ ದಿನಾಂಕ 16-05-2022 ರಂದು ಸಂಜೆ 5-30 ಘಂಟೆ ಒಳಗೆ ತಲುಪುವಂತೆ ಅಂಚೆ/ಕೋರಿಯರ್ ಮೂಲಕ ಅಥವಾ ಖುದ್ದಾಗಿ ಕಳುಹಿಸತಕ್ಕದ್ದು.
ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು. ತಡವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. (5) ಭರ್ತಿ ಮಾಡಬೇಕಾಗಿರುವ ಮೇಲಿನ ಹುದ್ದೆಗಳನ್ನು ಕರ್ನಾಟಕ ಸಹಕಾರ ಕಾಯ್ದೆ 1959 ಹಾಗೂ ನಿಯಮಗಳು 1960 ಹಾಗೂ ಕರ್ನಾಟಕ ಸರ್ಕಾರದ ಮೀಸಲಾತಿ ನಿಯಮಗಳ ಆದೇಶದ ರೀತ್ಯಾ ಮೀಸಲಾತಿ ನೀಡಿ ನೇಮಕಾತಿ ಮಾಡಲಾಗುವುದು. (6) ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಹಾಗೂ ಇನ್ನಿತರೆ ಮೀಸಲಾತಿ ಸೌಲಭ್ಯ ಪಡೆಯಲು ಇಚ್ಛಿಸುವವರು ಸರ್ಕಾರ ನಿಗದಿಪಡಿಸಿರುವ ನಮೂನೆಯಲ್ಲಿ ಸಂಬಂಧಿಸಿದವರಿಂದ ದೃಢೀಕರಣ ಪಡೆದು ಅದರ ದೃಢೀಕೃತ ಪ್ರತಿಯನ್ನು ಅರ್ಜಿಯ ಜೊತೆ ಲಗತ್ತಿಸಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳು ಸಿಂಧುತ್ವ ಪ್ರಮಾಣ ಪತ್ರವನ್ನು ಪಡೆದು ಬ್ಯಾಂಕಿಗೆ ಸಲ್ಲಿಸಬೇಕಾಗಿರುತ್ತದೆ. (7) ಅಭ್ಯರ್ಥಿಗಳು ಅರ್ಜಿಯೊಂದಿಗೆ ಪದವಿ ವರ್ಷಗಳ ಎಲ್ಲಾ ಅಂಕಪಟ್ಟಿಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಸಲ್ಲಿಸತಕ್ಕದ್ದು.
ನಿಬಂಧನೆಗಳು:
ಅರ್ಜಿಯನ್ನು ಬ್ಯಾಂಕಿನ ವೆಬ್ಸೈಟ್ನಲ್ಲಿ ತಿಳಿಸಿರುವ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸತಕ್ಕದ್ದು.
ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ.85ಕ್ಕೆ ಇಳಿಸಿ, ಪಡೆಯಲಾದ ಅಂಕಗಳ ಶೇಕಡಾವಾರು ಆಧಾರದ ಮೇಲೆ 1 : 5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು ಹಾಗೂ ವಾಹನ ಚಾಲಕರ ಹುದ್ದೆಗೆ ವಾಹನ ಚಾಲನಾ ಪರೀಕ್ಷೆ ನಡೆಸಲಾಗುವುದು.
ಹುದ್ದೆಗಳನ್ನು ಭರ್ತಿ ಮಾಡುವುದು ಬ್ಯಾಂಕಿನಲ್ಲಿ ಅಂತಿಮವಾಗಿ ಲಭ್ಯವಾಗಬಹುದಾದ ಖಾಲಿ ಹುದ್ದೆಗಳನ್ನು ಅವಲಂಬಿಸುತ್ತದೆ. ಆದುದರಿಂದ ಮೇಲ್ಕಂಡ ಹುದ್ದೆಗಳ ಸಂಖ್ಯೆ ಬದಲಾವಣೆಗೆ ಒಳಪಟ್ಟಿರುತ್ತದೆ. ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಬ್ಯಾಂಕು ತೆಗೆದುಕೊಳ್ಳುವ ತೀರ್ಮಾನಗಳೇ ಅಂತಿಮವಾಗಿರುತ್ತದೆ ಮತ್ತು ಅವುಗಳಿಗೆ ಎಲ್ಲಾ ಅಭ್ಯರ್ಥಿಗಳು ಬದ್ಧರಾಗಿರತಕ್ಕದ್ದು. ಪ್ರಕಟಣೆಯಲ್ಲಿ ಪ್ರಕಟಿಸಿದ ಹುದ್ದೆಗಳಿಗೆ ಸಂಬಂಧಿಸಿದಂತೆ, ಮೀಸಲಾತಿ ಕೋರಿ ಬಯಸುವ ಅಭ್ಯರ್ಥಿಗಳು ಸರ್ಕಾರದ ವಿವಿಧ ಇಲಾಖೆಗಳು ನೇಮಕಾತಿಗಾಗಿ ನಿಗದಿಪಡಿಸಿರುವ ನಮೂನೆಗಳಲ್ಲಿ ಹಾಗೂ ಚಾಲ್ತಿಯಲ್ಲಿರುವ ಅಗತ್ಯ ಪ್ರಮಾಣ ಪತ್ರಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಲಗತ್ತಿಸತಕ್ಕದ್ದು.
ಅಭ್ಯರ್ಥಿಗಳು ತಾವು ಕೋರಿಬಯಸುವ ಮೀಸಲಾತಿಯನ್ನು ಅರ್ಜಿ ಫಾರಂನ ಸಂಬಂಧಪಟ್ಟ ಕಾಲಂನಲ್ಲಿ ಕೋರಿರುವ ಮೀಸಲಾತಿ ಮತ್ತು ಒಳ ಮೀಸಲಾತಿ ವರ್ಗದಲ್ಲಿ ಅಭ್ಯರ್ಥಿಗಳು ಇಚ್ಛಿಸುವ ಆಯ್ಕೆಯನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು.
ಮೀಸಲಿರಿಸಿದ ವರ್ಗಗಳಲ್ಲಿ ಸಮತಳ ಮೀಸಲಾತಿಗಳ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಅಂತಹ ಹುದ್ದೆಗಳನ್ನು ಅದೇ ವರ್ಗಕ್ಕೆ ಸೇರಿದ ಇತರೆ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.
ಎ) ಅಂಗವಿಕಲ ಅಭ್ಯರ್ಥಿ: ಸರ್ಕಾರದ ಆದೇಶದಲ್ಲಿ ತಿಳಿಸಿರುವಂತೆ ಅಂಗವಿಕಲರಿಗೆ ಮೀಸಲಿರಿಸಿದ ಹುದ್ದೆಗಳನ್ನು ಕೋರುವ ಅಭ್ಯರ್ಥಿಗಳು ವೈದ್ಯಕೀಯ ಪ್ರಮಾಣ ಪತ್ರಗಳನ್ನು ಕರ್ನಾಟಕ ಸರ್ಕಾರವು ನಿಗದಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರದ ದೃಢೀಕೃತ ಪ್ರತಿಯನ್ನು ಲಗತ್ತಿಸತಕ್ಕದ್ದು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಬಿ) ಗ್ರಾಮೀಣ ಅಭ್ಯರ್ಥಿ: ಗ್ರಾಮೀಣ ಮೀಸಲಾತಿ ಕೋರುವ ಅಭ್ಯರ್ಥಿಗಳು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರ ಸಹಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರ ಮೇಲು ರುಜು ಪಡೆದು ದೃಢೀಕರಿಸಿ ಲಗತ್ತಿಸತಕ್ಕದ್ದು ಹಾಗೂ ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು ಗ್ರಾಮೀಣ ಮೀಸಲಾತಿ ಕೋರಲು ಇಚ್ಛಿಸಿದಲ್ಲಿ ಈ ಪ್ರಮಾಣ ಪತ್ರವಲ್ಲದೇ ಮೇಲುಸ್ತರಕ್ಕೆ ಸೇರಿಲ್ಲದಿರುವ ಬಗ್ಗೆ ಪ್ರಮಾಣ ಪತ್ರವನ್ನು ಪಡೆದು ದೃಢೀಕರಿಸಿ ಕಡ್ಡಾಯವಾಗಿ ಲಗತ್ತಿಸತಕ್ಕದ್ದು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಸಿ) ಕನ್ನಡ ಮಾಧ್ಯಮ ಅಭ್ಯರ್ಥಿ: ಕನ್ನಡ ಮಾಧ್ಯಮ ಮೀಸಲಾತಿ ಕೋರುವ ಅಭ್ಯರ್ಥಿಗಳು ಪ್ರಮಾಣ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರ ಸಹಿಯೊಂದಿಗೆ ಪಡೆದ ಪ್ರಮಾಣ ಪತ್ರವನ್ನು ದೃಢೀಕರಿಸಿ ಲಗತ್ತಿಸತಕ್ಕದ್ದು.
ಡಿ) ಯೋಜನಾ ನಿರಾಶ್ರಿತರು: ಸರ್ಕಾರದ ಆದೇಶ ಅನುಸಾರ ಯೋಜನಾ ನಿರಾಶ್ರಿತ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಸರ್ಕಾರದ ಸಂಬಂಧಪಟ್ಟ ಅಧಿಸೂಚನೆ ಪ್ರಕಾರ ದೃಢೀಕೃತ ಪ್ರಮಾಣ ಪತ್ರ ಲಗತ್ತಿಸತಕ್ಕದ್ದು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಇ) ಮಾಜಿ ಸೈನಿಕ ಅಭ್ಯರ್ಥಿ: ಮಾಜಿ ಸೈನಿಕ ಅಂದರೆ ಭೂದಳ, ನೌಕಾದಳ ಮತ್ತು ವಾಯುದಳದಲ್ಲಿ ಯಾವುದೇ ಶ್ರೇಣಿಯಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ. ಇವರು ಸರ್ಕಾರದ ಜಾರಿಯಲ್ಲಿರುವ ನಿಯಮಗಳನ್ವಯ ಮಾಜಿ ಸೈನಿಕ ಅಭ್ಯರ್ಥಿ ಪ್ರಮಾಣ ಪತ್ರವನ್ನು ಪಡೆದು ದೃಢೀಕರಿಸಿ ಲಗತ್ತಿಸತಕ್ಕದ್ದು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಜನ್ಮ ದಿನಾಂಕದ ದೃಢೀಕರಣಕ್ಕಾಗಿ ದೃಢೀಕರಿಸಿದ ಎಸ್.ಎಸ್.ಎಲ್.ಸಿ. ಅಂಕ ಪಟ್ಟಿ ಅಥವಾ ಶಾಲಾ ವರ್ಗಾವಣೆ ಪತ್ರ ಅಥವಾ ಕ್ಯುಮ್ಯೂಲೇಟೀವ್ ರೆಕಾರ್ಡ್ ದೃಢೀಕರಣ ಪತ್ರ ಲಗತ್ತಿಸತಕ್ಕದ್ದು. ಇಲ್ಲವಾದಲ್ಲಿ ಅರ್ಜಿ ತಿರಸ್ಕರಿಸಲಾಗುವುದು. ವಿದ್ಯಾರ್ಹತೆಗೆ ಸಂಬಂಧಿಸಿದ ದೃಢೀಕರಿಸಿದ ಅಂಕಪಟ್ಟಿಗಳು ಹಾಗೂ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು ಹಾಗೂ ಎಲ್ಲಾ ವರ್ಷಗಳ/ಸೆಮಿಸ್ಟರ್ಗಳ ಅಂಕಗಳನ್ನು ಒಟ್ಟು ಪಡೆದ ಅಂಕಗಳನ್ನು ಮತ್ತು ಶೇಕಡಾವಾರು ಅಂಕಗಳನ್ನು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸತಕ್ಕದ್ದು.
ಲಿಖಿತ ಪರೀಕ್ಷೆ / ಸಂದರ್ಶನ / ಕೌಶಲ್ಯ ಪರೀಕ್ಷೆಗೆ ಕರೆಯಲ್ಪಟ್ಟ ಅಭ್ಯರ್ಥಿಗಳು ತಮ್ಮ ಸ್ವಂತ ವೆಚ್ಚದಲ್ಲಿ ಹಾಜರಾಗಬೇಕು.
ಯಾವುದೇ ಪ್ರಯಾಣ ಭತ್ಯೆ / ದಿನ ಭತ್ಯೆಗಳನ್ನು ನೀಡಲಾಗುವುದಿಲ್ಲ.
ಲಿಖಿತ ಪರೀಕ್ಷೆಯ ದಿನಾಂಕ, ವೇಳೆ, ಸ್ಥಳ ಇವುಗಳ ವಿವರವನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು. ಕನ್ನಡ ಭಾಷೆ ಪರಿಜ್ಞಾನ ಅಂದರೆ ಕನ್ನಡ ಓದಲು ಬರೆಯಲು ಮತ್ತು ಮಾತನಾಡಲು ಕಡ್ಡಾಯವಾಗಿ ಬರಬೇಕು.
ಅರ್ಜಿ ಮೇಲ್ಭಾಗದಲ್ಲಿ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 1 ಭಾವಚಿತ್ರವನ್ನು ಅಂಟಿಸಿ ಅದರ ಮೇಲೆ ಅರ್ಜಿದಾರರು ಸಹಿ ಮಾಡತಕ್ಕದ್ದು. 3 ಭಾವಚಿತ್ರಗಳಿಗೆ ಹಿಂಭಾಗದಲ್ಲಿ ಸಹಿ ಮಾಡಿ ಅರ್ಜಿಯೊಂದಿಗೆ ಪ್ರತ್ಯೇಕ ಕವರ್ನಲ್ಲಿ ಹಾಕಿ ಲಗತ್ತಿಸತಕ್ಕದ್ದು.
ಅಭ್ಯರ್ಥಿಗಳು ಈಗಾಗಲೇ ಯಾವುದಾದರೂ ಸಂಸ್ಥೆಯಲ್ಲಿ ಅನುಮತಿಯೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು. ಕಾರ್ಯ ನಿರ್ವಹಿಸುತ್ತಿದ್ದಲ್ಲಿ ಅಂತಹ ಸಂಸ್ಥೆಯ ಮುಖ್ಯಸ್ಥರ 12. ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಸಂದರ್ಭದಲ್ಲಿ ಯಾವುದೇ ಕಾರಣವನ್ನು ನೀಡದೇ ರದ್ದುಗೊಳಿಸುವ ಅಥವಾ ಮುಂದೂಡುವ ಅಧಿಕಾರವನ್ನು ಬ್ಯಾಂಕು ಹೊಂದಿರುತ್ತದೆ.
ಆಯ್ಕೆಗೊಂಡ ಅಭ್ಯರ್ಥಿಗಳು ಎರಡು ವರ್ಷ ಅವಧಿಯವರೆಗೆ ಕಡ್ಡಾಯ ಪರೀಕ್ಷಾರ್ಥ ಸೇವೆ ಸಲ್ಲಿಸಬೇಕು. 14. ನೇಮಕಾತಿ ಪ್ರಕ್ರಿಯೆಯು ಕರ್ನಾಟಕ ಸರ್ಕಾರವು ಕಾಲಕಾಲಕ್ಕೆ ನೀಡುವ ನಿರ್ದೇಶನಗಳು ಹಾಗೂ ಆದೇಶಕ್ಕೆ ಒಳಪಟ್ಟಿರುತ್ತದೆ.
ಪೂರ್ಣವಾಗಿ ಭರ್ತಿ ಮಾಡದೇ ಇರುವಂತಹ, ದೃಢೀಕೃತ ದಾಖಲಾತಿಗಳೆಲ್ಲವನ್ನೂ ಲಗತ್ತಿಸದೇ ಇರುವಂತಹ, ಅರ್ಜಿ ಶುಲ್ಕದ ಡಿ.ಡಿ. ಅಥವಾ ಪೇ ಆರ್ಡರ್ ಅನ್ನು ಲಗತ್ತಿಸದೇ ಇರುವಂತಹ, ಸಹಿ ಮಾಡದೇ ಇರುವಂತಹ ಹಾಗೂ ನಿಗದಿಪಡಿಸಿದ ದಿನಾಂಕದೊಳಗಾಗಿ ಬ್ಯಾಂಕಿಗೆ ತಲುಪದೆ ಇರುವಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು
ಆಯ್ಕೆಯಾದ ಶೀಘ್ರಲಿಪಿಗಾರರು, ಕಿರಿಯ ಸಹಾಯಕರು/ಕ್ಷೇತ್ರಾಧಿಕಾರಿಗಳು/ನಗದು ಗುಮಾಸ್ತರು ಭದ್ರತಾ ಠೇವಣಿ ರೂ.30,000/- ಗಳನ್ನು ಹಾಗೂ ರೂ.1,00,000/-ಗಳ ಇಂಡೆಮ್ನಿಟಿ ಬಾಂಡನ್ನು ಸಲ್ಲಿಸಬೇಕು. ವಾಹನ ಚಾಲಕರು, ಅಟೆಂಡರ್ ಮತ್ತು ಜಲಗಾರರು ಭದ್ರತಾ ಠೇವಣಿ ರೂ.15,000/- ಗಳನ್ನು ಹಾಗೂ ರೂ.50,000/- ಗಳ ಇಂಡೆಮ್ನಿಟಿ ಬಾಂಡನ್ನು ಸಲ್ಲಿಸಬೇಕು.
ಕನಿಷ್ಟ 5 ವರ್ಷಗಳ ಅವಧಿಯವರೆಗೆ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ಪತ್ರವನ್ನು ಬ್ಯಾಂಕಿಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ಭದ್ರತಾ ಠೇವಣಿಯನ್ನು ಬ್ಯಾಂಕಿಗೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. 17. ನೇಮಕಾತಿಯಿಂದ ಭರ್ತಿ ಮಾಡುವ ಹುದ್ದೆಗಳನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಅಧಿಕಾರವು ಬ್ಯಾಂಕಿನ ಆಡಳಿತ ಮಂಡಳಿಗೆ ಇರುತ್ತದೆ. 18. ಅಭ್ಯರ್ಥಿಗಳು ಗುರುತಿಗಾಗಿ ಪಡಿತರ ಚೀಟಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಅಥವಾ ವಾಹನ ಪರವಾನಿಗೆ ಇವುಗಳಲ್ಲಿ ಯಾವುದಾದರೊಂದನ್ನು ಸ್ವಯಂ ದೃಢೀಕರಿಸಿ ಲಗತ್ತಿಸತಕ್ಕದ್ದು. 19. ಹೆಚ್ಚಿನ ವಿವರಗಳಿಗೆ ಕಛೇರಿ ವೇಳೆಯಲ್ಲಿ ಬ್ಯಾಂಕಿನ ಪ್ರಧಾನ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
Andaman & Nicobar State Cooperative Bank Recruitment 2019. Applications are invited from the eligible candidates to fill up the vacant posts of Clerk, Junior Auditor, Hardware Engineer (EDP), Computer Assistant and Multi-Tasking Staff (MTS) in Andaman & Nicobar State Cooperative Bank Ltd., Port Blair by holding written examination.
How to Apply: Post Last Date: 30-04-2019
Number of Post Clerk
Number of Posts 71 (Seventy One) Salary: Scale of Pay Pay Level 2 (Rs. 19900 – 63200) Age Limit: Male 18-33 Years. Female- 18-38 Years
Educational Qualification
Pass in All India Senior School Certificate (12th Standard) or from its equivalent recognised Board
One year Diploma Course in Computer Operation/Application from a Recognised Institution 06 Desirable 1. Graduation in any discipline from a recognised University or equivalent
Name of Post – Junior Auditor Number of Post 06 (Six) Scale of Pay Pay Level 4 (Rs. 25500 – 81100) Age Limit 18-33 for Male and 18-38 for Female Educational Qualification: 1. B.Com degree with not less than 03 years experience in the field of Finance and Accountancy in a Chartered/Cost Accountant from any Banking Institutions. One year Diploma Course in Computer Operation/Application from a Recognised Institution.
Name of Post -Hardware Engineer (EDP) Number of Post 04 (Four) Scale of Pay Pay Level 4 (Rs. 25500 – 81100 Age Limit 18-33 for Male and 18-38 for Female Educational Qualification: Diploma in Computer Science, Diploma/Certificate Programme in Hardware Engineer from a recognised Institute/university. Desirable: Microsoft Certified System Administration (MCSA)/ Microsoft Certified System Engineer (MCSE) . CCNA (Cisco Certified Network Associate)
Name of Post-Computer Assistant Number of Post 04 (Four) Scale of Pay Pay Level 4 (Rs. 25500 – 81100 Age Limit 18-33 for Male and 18-38 for Female Educational Qualification: 1. BCA/B.Sc Computer Science/Diploma in Hardware and Software Engineering from recognised Institute/University Desirable 1. CCNA (Cisco Certified Network Associate) /CCNP (Cisco Certified Network Professional)
Name of Post -Multi-Tasking Staff (MTS) Number of Post 15 (Fifteen) Scale of Pay Pay Level 1 (Rs. 18000 – 56900) Age Limit: 18-33 for Male and 18-38 for Female Educational Qualification: 10th Pass with Computer Knowledge
Method of selection – By Written Examination Nationality – Applicant must be an Indian National Fees Payable – No Fees
How to Apply: Post The application shall be typed out in double space neatly & duly filled in all respect should be sent along with the self attested copies of proof of age, Educational Qualifications, Category (Scheduled Tribe Certificates in respect of Scheduled Tribe Candidates & OBC Certificates in respect of OBC candidates), Proof of Identity (a copy of any other identity card issued by Government & all relevant supporting documents for claiming age relaxation, if any need to be sent to the Managing Director, Andaman & Nicobar State Cooperative Bank Ltd., Head Office,98, Maulana Azad Road, Port Blair, Pin – 744101 latest by 30-04-2019 upto 04:30 PM either in person or by post.
The Raichur District Co-operative Central Bank Ltd invites application for various Posts. Raichur DCC Bank Recruitment 2019- Karnataka. Application Procedure, Educational Qualifications, Post Names, Number of Posts, Age Limit, Application Fees and Other Details mentioned below. Also Kannada Notification and Application form Also Attached.
Where: District Co-operative Central Bank Ltd
Number of Posts: 101 How to apply: Online Starting Date to apply: 14-03-2019 Last Date to Apply: April 08, 2019 Helpdesk: 9632320817
Raichur Dcc Bank Address: RDCC BANK LTD Head Office, Gunj Main Rd, Rajendra Gunj, Raichur, Karnataka 584102
Post name and Other Details (HK Posts)
DGM- Deputy General Manager- 2 Posts Education: MSc (Agri)/ BE(Computer Science/Information Science)/ MBA (Finance/HR)/MA (Co operation/ Cooperative Management)/ MSW (HR/Micro Finance)/ MCom or MCA Degree. Kannada Knowledge must- Reading Writing and Talk. Computer Knowledge Must.
AGM- Assistant General Manager- 3 Posts Education: MSc (Agri)/ B.E(Computer Science/Information Science)/ MBA (Finance/HR)/MA (Co operation/ Cooperative Management)/ MSW (HR/Micro Finance)/ M.Com or MCA Degree. Kannada Knowledge must- Reading Writing and Talk. Computer Knowledge Must.
BM-2 Branch Manager Grade 2- total 2 Posts Education: MSc (Agri)/ BE(Computer Science/Information Science)/ MBA (Finance/HR)/MA (Co operation/ Cooperative Management)/ MSW (HR/Micro Finance)/ MCom or MCA Degree. Kannada Knowledge must- Reading Writing and Talk. Computer Knowledge Must.
BM-1 Branch Manager Grade 2- Total 4 Posts Education: MSc (Agri)/ BE(Computer Science/Information Science)/ MBA (Finance/HR)/MA (Co operation/ Cooperative Management)/ MSW (HR/Micro Finance)/ MCom or MCA Degree. Kannada Knowledge must- Reading Writing and Talk. Computer Knowledge Must.
Bank Assistant Grade 2 Post- total 41 Posts Education: Degree. Computer and Kannada Knowledge Must
Bank Assistant Grade 1 Post- total 13 Posts Education: Degree. Computer and Kannada Knowledge Must