Author: Mallika

  • ಡಿ.ಸಿ.ಹೆಚ್.ಸಿ ಮತ್ತು ಸಿ.ಸಿ.ಸಿ. ಆಸ್ಪತ್ರೆಗಳಲ್ಲಿ ಹುದ್ದೆ

    ಡಿ.ಸಿ.ಹೆಚ್.ಸಿ ಮತ್ತು ಸಿ.ಸಿ.ಸಿ. ಆಸ್ಪತ್ರೆಗಳಲ್ಲಿ ಹುದ್ದೆ

    ರಾಜ್ಯಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಎರಡನೇ ಅಲೆಯಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ – 19 ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ಡಿ.ಸಿ.ಹೆಚ್.ಸಿ ಮತ್ತುಸಿ.ಸಿ.ಸಿ. ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಲು 11 ತಜ್ಞ ವೈದ್ಯರು ಮತ್ತು 33 ಸಾಮಾನ್ಯ ಕರ್ತವ್ಯ ವೈದ್ಯರನ್ನು ಗರಿಷ್ಠ ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಲು ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಇವರು ಮಂಜೂರಾತಿ ನೀಡಿದ ಪ್ರಯುಕ್ತ ಅರ್ಹ ತಜ್ಞ/ ಎಂಬಿಬಿಎಸ್ ವೈದ್ಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-05-2021 ರ ಬೆಳಿಗ್ಗೆ 11.00 ಗಂಟೆಗೆ ನೇರ ಸಂದರ್ಶನದಲ್ಲಿ ಭಾಗವಹಿಸಲು ಸೂಚಿಸಿದೆ.

    ಅಭ್ಯರ್ಥಿಗಳು 50 ವರ್ಷಗಳ ವಯೋಮಿತಿಯೊಳಗೆ ಇರತಕ್ಕದ್ದು.

  • ಗದಗ ಜಿಲ್ಲಾ ಪಂಚಾಯತಿ : ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಗದಗ ಜಿಲ್ಲಾ ಪಂಚಾಯತಿ : ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

    ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗದಗ ಜಿಲ್ಲಾ ಪಂಚಾಯತ್ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ವಿವಿಧ ಹುದ್ದೆಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ : ರೀಜಿನಲ್ ಪ್ಲಾನಿಂಗ್ ಸ್ಪೆಷಲಿಸ್ಟ್ ಈ ಹುದ್ದೆಗೆ ಮಾಸಿಕ 30,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ರೂರಲ್ ಡೆವಲ್ಪೆಂಟ್ ಮತ್ತು ಮ್ಯಾನೇಜ್‌ಮೆಂಟ್ ಸ್ಪೆಷಲಿಸ್ಟ್‌ ಈ ಹುದ್ದೆಗೆ ಮಾಸಿಕ 25,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ಇಂಜಿನಿಯರಿಂಗ್ ಸ್ಪೆಷಲಿಸ್ಟ್‌ ಈ ಹುದ್ದೆಗೆ ಮಾಸಿಕ 25,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ಸ್ಪೇಷಿಯಲ್ ಪ್ಲಾನಿಂಗ್ ಪ್ರೊಫೆಷನಲ್ ಈ ಹುದ್ದೆಗೆ ಮಾಸಿಕ 20,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    ರೂರಲ್ ಮ್ಯಾನೇಜ್‌ಮೆಂಟ್ ಪ್ರಾಫೆಷನಲ್ ಈ ಹುದ್ದೆಗೆ ಮಾಸಿಕ 20,000/- ರೂ. ಮಾಸಿಕ ವೇತನವಿರುತ್ತದೆ. ಈ ಹುದ್ದೆಗೆ 25 ವರ್ಷದಿಂದ 45 ವರ್ಷ ವಯೋಮಿತಿಯವರು ಅರ್ಜಿಯನ್ನು ಸಲ್ಲಿಸಬಹುದು.

    Resumeಗಳನ್ನು ಹಾಗೂ ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮರ್ಥ್ಯಗಳು ( ಏನಾದರೂ ಇದ್ದಲ್ಲಿ ) ಮಾಹಿತಿಯನ್ನು ತುಂಬಿ, ಅರ್ಜಿಯನ್ನು ಇ-ಮೇಲ್ ಮೂಲಕ [email protected] ಗೆ pdfನಲ್ಲಿ ಸಲ್ಲಿಸುವುದು. ಅಥವಾ ಹಾರ್ಡ್‌ ಪ್ರತಿಗಳನ್ನು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಗದಗ (ಡಿ.ಆರ್‌.ಡಿ.ಎ ಶಾಖೆ) ಜಿಲ್ಲಾಡಳಿತ ಭವನ ಹುಬ್ಬಳ್ಳಿ ರಸ್ತೆ ಗದಗ ರವರಿಗೆ ದಿನಾಂಕ 07-05-2021 ರ ಸಂಜೆ 5.00 ಗಂಟೆಯೊಳಗೆ ಅರ್ಜಿಯನ್ನು ಖುದ್ದಾಗಿ ಸಲ್ಲಿಸಬಹುದು. ತದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

    ಹೆಚ್ಚಿನ ಮಾಹಿತಿಗಾಗಿ 9164505757, 8970165300 ಸಂಪರ್ಕಿಸಬಹುದು

  • ಬೆಳ್ತಂಗಡಿ ಗ್ರಾಮ ಪಂಚಾಯತಿಯಲ್ಲಿ ಹುದ್ದೆ

    ಬೆಳ್ತಂಗಡಿ ಗ್ರಾಮ ಪಂಚಾಯತಿಯಲ್ಲಿ ಹುದ್ದೆ

    ಬೆಳ್ತಂಗಡಿ ತಾಲೂಕಿನ 25 ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ: ವಿಕಲಚೇತನ ಪುನರ್ವಸತಿ ಕಾರ್ಯಕರ್ತರು

    ಒಟ್ಟು ಹುದ್ದೆ: 25

    ಬೆಳ್ತಂಗಡಿ ತಾಲೂಕಿನ ಆಯಾ ಗ್ರಾಮಪಂಚಾಯತಿ ವ್ಯಾಪ್ತಿಯ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ‌ 18 ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.

    ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಉತ್ತೀರ್ಣ/ ಅನುತ್ತೀರ್ಣ ವಿಕಲಚೇತನರು ಅರ್ಜಿಯನ್ನು ಸಲ್ಲಿಸಬಹುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 03,2021

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಬಹುದು.

  • ಆದಿಚುಂಚನಗಿರಿ ವಿದ್ಯಾಲಯ: ಬೋಧಕ ಹುದ್ದೆಗೆ ಅರ್ಜಿ ಆಹ್ವಾನ

    ಆದಿಚುಂಚನಗಿರಿ ವಿದ್ಯಾಲಯ: ಬೋಧಕ ಹುದ್ದೆಗೆ ಅರ್ಜಿ ಆಹ್ವಾನ

    ಆದಿಚುಂಚನಗಿರಿ ವಿದ್ಯಾಲಯವು ಅಗತ್ಯ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯ ಆಹ್ವಾನಿಸಲಾಗಿದೆ. ಕೆಳಗಿನ ವಿವರಗಳನ್ನು ಓದಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

    ಅನಾಟಮಿ – ಸಹಾಯಕ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ
    ಫಿಸಿಯೋಲಜಿ – ಸಹಾಯಕ ಪ್ರಾಧ್ಯಾಪಕ
    ಕಂಮ್ಯೂನಿಟಿ‌ ಮೆಡಿಷಿನ್ – ಸಹಾಯಕ ಪ್ರಾಧ್ಯಾಪಕ
    ಜೆನರಲ್ ಮೆಡಿಷನ್ – ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಸೀನಿಯರ್ ರೆಸಿಡೆಂಟ್
    ಎಮರ್ಜೆನ್ಸಿ ಮೆಡಿಸಿನ್ – ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ, ಹಿರಿಯ ರೆಸಿಡೆಂಟ್
    ಪೀಡಿಯಾಟ್ರಿಕ್ಸ್ – ಸಹಾಯಕ ಮತ್ತು ಸಹ ಪ್ರಾಧ್ಯಾಪಕ
    ಮನಃಶಾಸ್ತ್ರಜ್ಞ – ಪ್ರಾಧ್ಯಾಪಕ ಮತ್ತು ಜ್ಯೂನಿಯರ್ ರೆಸಿಡೆಂಟ್
    ರೆಸ್ಪಿರೇಟರಿ ಮೆಡಿಷಿನ್ – ಪ್ರಾಧ್ಯಾಪಕ, ಸಹಾಯಕ ಸಹ ಪ್ರಾಧ್ಯಾಪಕ, ಹಿರಿಯ ರೆಸಿಡೆಂಟ್
    ಜೆನರಲ್ ಸರ್ಜರಿ-ಸಹಾಯಕ- ಸಹ ಪ್ರಾಧ್ಯಾಪಕ- ಸೀನಿಯರ್ ರೆಸಿಡೆಂಟ್
    ಆರ್ಥೋಪೆಡಿಕ್ಸ್ – ಸಹ ಪ್ರಾಧ್ಯಾಪಕ , ಸೀನಿಯರ್ ರೆಸಿಡೆಂಟ್
    ಆಪ್ಥಲ್ಮೋಲಜಿ – ಸಹ ಪ್ರಾಧ್ಯಾಪಕ, ಸೀನಿಯರ್ ರೆಸಿಡೆಂಟ್
    ಅನಸ್ಥೇಸಿಯಾಲಜಿ – ಸಹ ಪ್ರಾಧ್ಯಾಪಕ
    ರೇಡಿಯೋ ಡಯಾಗ್ನಸಿಸ್ -ಸಹಾಯಕ, ಸಹ ಪ್ರಾಧ್ಯಾಪಕ ಮತ್ತು ಸೀನಿಯರ್ ರೆಸಿಡೆಂಟ್
    ಒಬಸ್ಟೆರಿಕ್ಸ್, ಗೈನಕಾಲಜಿ-ಸಹಾಯಕ- ಸಹ ಪ್ರಾಧ್ಯಾಪಕ, ಹಿರಿಯ ರೆಸಿಡೆಂಟ್್

    ಪ್ರೀ ಮತ್ತು ಪ್ಯಾರಾ ಕ್ಲಿನಿಕಲ್ ವಿಷಯಗಳಿಗೆ ಟ್ಯೂಟರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಅಭ್ಯರ್ಥಿಗಳು ನ್ಯಾಷನಲ್ ಮೆಡಿಕಲ್ ಕಮಿಷನ್ ನಿಯಮಗಳ ಪ್ರಕಾರ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. AICTE ನಿಯಮಾನುಸಾರ ವೇತನ‌ ನೀಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-05-2021

    ಅಭ್ಯರ್ಥಿಗಳು ತಮ್ಮ ಎಲ್ಲಾ ವಿವರಗಳ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
    HR Head, Adichunchanagiri, Institute of medical sciences, B.G.Nagara

    ಅಥವಾ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಸಲ್ಲಿಸಬೇಕು : [email protected] ಗೆ ಕಳುಹಿಸಬೇಕು.

    ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

  • ಕರ್ನಾಟಕ ಗ್ರಾಮೀಣ ಬ್ಯಾಂಕ್ : ವಿವಿಧ ಹುದ್ದೆ

    ಕರ್ನಾಟಕ ಗ್ರಾಮೀಣ ಬ್ಯಾಂಕ್ : ವಿವಿಧ ಹುದ್ದೆ

    ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರವರ್ತಿತ “ಆರ್ಥಿಕ ಸಲಹಾ ಕೇಂದ್ರಗಳಿಗೆ” ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಆರ್ಥಿಕ ಸಲಹೆಗಾರ ನೇಮಕಕ್ಕೆ ಉದ್ಯೋಗ ಪ್ರಕಟಣೆ ಬಿಡುಗಡೆ ಮಾಡಿದೆ. ಒಟ್ಟು ಹುದ್ದೆಗಳ ಸಂಖ್ಯೆ 5. ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೆಳಗೆ ನೀಡಲಾಗಿರುವ ಸ್ಥಳಗಳಲ್ಲಿ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಲಿದೆ.
    ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ಚಾಮರಾಜನಗರ ಜಿಲ್ಲೆಯ ಎಳಂದೂರು, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಯಾದಗಿರಿ, ಕಲಬುರಗಿ ಜಿಲ್ಲೆಯ ಅಳಂದ.
    ಈ ಉದ್ಯೋಗವು 3 ವರ್ಷಗಳ ಗುತ್ತಿಗೆ ಆಧಾರದ ತಾತ್ಕಾಲಿಕ ಹುದ್ದೆಯಾಗಿರುತ್ತದೆ.

    ಸಾಮಾಜಿಕ ಭದ್ರತಾ ಯೋಜನೆಗಳ ತಿಳುವಳಿಕೆ, ಬ್ಯಾಂಕಿಂಗ್ ಜ್ಞಾನ, ಹಣಕಾಸಿನ ಸೇವೆಗಳ ತಿಳುವಳಿಕೆ ಇರಬೇಕು.

    ವಯೋಮಿತಿ : 62 ವರ್ಷದೊಳಗಿನ ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಪದವೀಧರರು ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ.

    ಹುದ್ದೆ ಸಂಖ್ಯೆ : 05

    ವೇತನ : 17,000+ 3000( ಪ್ರಯಾಣ ಭತ್ಯೆ) ನೀಡಲಾಗುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

  • ಲೆಕ್ಕಸಹಾಯಕರು ಹುದ್ದೆಗಳ ನೇಮಕಕ್ಕೆ ಆದೇಶ

    ಲೆಕ್ಕಸಹಾಯಕರು ಹುದ್ದೆಗಳ ನೇಮಕಕ್ಕೆ ಆದೇಶ

    ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗೆ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿತ್ತು.

    ಹುದ್ದೆ : 124 ಲೆಕ್ಕ ಸಹಾಯಕರು ಮತ್ತು 33 ಕಿರಿಯ ಲೆಕ್ಕ ಸಹಾಯಕರುಗಳ ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಿತ್ತು.ಇದರ ನೇಮಕಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಗ್ರೀನ್ ಸಿಗ್ನಲ್ ನೀಡಿದೆ.

    ಈ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಇದು ಸಿಹಿ ಸುದ್ದಿ ಆಗಲಿದ್ದು, ಶೀಘ್ರದಲ್ಲೇ ನೇಮಕ ಆದೇಶ ಸಿಗಲಿದೆ.