Author: Mallika

  • ರಾಜ್ಯ ಸರಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ

    ಜುಲೈ 1 ರಿಂದ ಅನ್ವಯವಾಗುವಂತೆ ರಾಜ್ಯ ಸರಕಾರಿ ನೌಕರರಿಗೆ ಶೇ.10.25 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲು ಸರಕಾರ ಆದೇಶ ಹೊರಡಿಸಿದೆ.

    ಒಂದೂವರೆ ವರ್ಷದಿಂದ ಕೋವಿಡ್ ಕಾರಣದಿಂದಾಗಿ ಡಿಎ ಹೆಚ್ಚಳ ಮಾಡಿರಲಿಲ್ಲ.
    ಇಲ್ಲಿಯವರೆಗೆ ಮೂಲ ವೇತನದ ಶೇ.11.25 ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇ.21.50 ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಕುರಿತು ಆರ್ಥಿಕ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

  • KPSC ಗ್ರೂಪ್ ಎ ಮತ್ತು ಗ್ರೂಪ್ ಬಿ ಪ್ರವೇಶ ಪತ್ರ ರಿಲೀಸ್

    ಕರ್ನಾಟಕ ಲೋಕ ಸೇವಾ ಆಯೋಗದ ಅಧಿಸೂಚನೆ ಸಂಖ್ಯೆ ಪಿಎಸ್ ಸಿ 1 ಆರ್ ಟಿಬಿ- 2/2020 ದಿನಾಂಕ 24-06-2020 ರಲ್ಲಿ ಅಧಿಸೂಚಿಸಿರುವ ಗ್ರೂಪ್ ‘ಸಿ’ ತಾಂತ್ರಿಕ/ ಗ್ರೂಪ್ ‘ಬಿ’ ತಾಂತ್ರಿಕ / ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯೋಗವು ದಿನಾಂಕ 30-07-2021, 31-07-2021 ಮತ್ತು 01-08-2021 ರಂದು ನಡೆಸುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ / ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಆಯೋಗದ ವೆಬ್‌ಸೈಟ್‌ http://kpsc.kar.nic.in ನಲ್ಲಿ ದಿನಾಂಕ 24-07-2021 ರಿಂದ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

    ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ತಾಂತ್ರಿಕ ಸಮಸ್ಯೆ ಎದುರಾದಲ್ಲಿ ಹೆಲ್ಪ್ ಲೈನ್ ಸಂಖ್ಯೆ 18005728707 ಅನ್ನು ಸಂಪರ್ಕಿಸಬಹುದು.

  • RERA : ಪರಿವೀಕ್ಷಣಾ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

    ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ಪ್ರವರ್ತಕರು/ ಅಭಿವೃದ್ಧಿದಾರರು ಯೋಜನೆಗಳನ್ನು ನೋಂದಣಿ ಮಾಡಿಸದೇ ನಿವೇಶನ/ ಫ್ಲ್ಯಾಟ್ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಪ್ರಾಧಿಕಾರದಲ್ಲಿ ನೋಂದಾಯಿಸದಿರುವ ಯೋಜನೆಗಳ ಸ್ಥಳ ಪರಿಶೀಲನೆಗಾಗಿ ಪರಿವೀಕ್ಷಣಾ ತಂಡಗಳ ರಚಿಸುವ ಸಲುವಾಗಿ, ಈ ಕೆಳಕಂಡ ನಿವೃತ್ತ ಅಧಿಕಾರಿಗಳನ್ನೊಂಡ ಪರಿವೀಕ್ಷಣಾ ಸಮಾಲೋಚಕರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ.

    ಸಮಿತಿಯ ಸದಸ್ಯರು : 1. ಸಹಾಯಕ ಕಾರ್ಯಪಾಲಕ ಅಭಿಯಂತರರು/ ಸಹಾಯಕ ಅಭಿಯಂತರರು ( ನಿವೃತ್ತ ), 2. ತಹಶಿಲ್ದಾರ್ ( ನಿವೃತ್ತ) 3. ಸಿವಿಲ್ ಪೊಲೀಸ್ ನಿರೀಕ್ಷಕರು ( ನಿವೃತ್ತ)

    ಸಹಾಯಕ ಕಾರ್ಯಪಾಲಕ‌ ಅಭಿಯಂತರರು / ಸಹಾಯಕ ಅಭಿಯಂತರರು ( ನಿವೃತ್ತ) ವಿದ್ಯಾರ್ಹತೆ : ಬಿಇ( ಸಿವಿಲ್), ಅರ್ಹತೆ : ರಾಜ್ಯ ಸರಕಾರದ ಇಲಾಖೆಗಳಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು / ಸಹಾಯಕ ಇಂಜಿನಿಯರ್ ಆಗಿ ಕನಿಷ್ಠ 05 ವರ್ಷಗಳ ಅನುಭವ ಹೊಂದಿರಬೇಕು. ವಯಸ್ಸು 62 ವರ್ಷಕ್ಕಿಂತ ಮೀರಿರಬಾರದು.

    ತಹಶಿಲ್ದಾರ್ : ಈ ಹುದ್ದೆಯಲ್ಲಿ ರಾಜ್ಯ ಸರಕಾರದಲ್ಲಿ ಕನಿಷ್ಠ 05 ವರ್ಷಗಳ ಸೇವಾ ಅನುಭವ ಹೊಂದಿರಬೇಕು. ವಯಸ್ಸು 62 ವರ್ಷಕ್ಕಿಂತ ಮೀರಿರಬಾರದು.

    ಸಿವಿಲ್ ಪೊಲೀಸ್ ನಿರೀಕ್ಷಕರು : ರಾಜ್ಯ ಸರಕಾರಲ್ಲಿ ಕನಿಷ್ಠ 05 ವರ್ಷಗಳ ಸೇವಾ ಅನುಭವ ಹೊಂದಿರಬೇಕು. ವಯಸ್ಸು 62 ವರ್ಷಕ್ಕಿಂತ ಮೀರಿರಬಾರದು.

    ಸದರಿ ಗುತ್ತಿಗೆ ನೇಮಕಾತಿಯು ತಾತ್ಕಾಲಿಕವಾಗಿದ್ದು, ಗುತ್ತಿಗೆ ಅವಧಿಯನ್ನು ಮುಂದುವರಿಸುವ ಅಥವಾ ರದ್ದುಪಡಿಸುವ ಅಧಿಕಾರವನ್ನು ಪ್ರಾಧಿಕಾರವು ಹೊಂದಿರುತ್ತದೆ.

    ಗೌರವಧನ ಮತ್ತು ಇತರೆ ಸೌಲಭ್ಯಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗುವುದು. ಅರ್ಹ ನಿವೃತ್ತ ಅಧಿಕಾರಿಗಳು ಆನ್ಲೈನ್ ಮುಖಾಂತರ ಅಥವಾ ನೋಂದಾಯಿತ ಅಂಚೆ ಮೂಲಕ ದಿನಾಂಕ : 10.08.2021 ರ ಸಂಜೆ 5.00 ಗಂಟೆಯೊಳಗೆ ಮೇಲ್ಕಂಡ ಕಚೇರಿಗೆ ಅರ್ಜಿ ಸಲ್ಲಿಸತಕ್ಕದ್ದು.

    ಇ- ಮೇಲ್ : [email protected]

    ಅರ್ಜಿ ಸಲ್ಲಿಸುವ ನಿವೃತ್ತ ಅಧಿಕಾರಿಗಳು ಲಗತ್ತಿಸಲಾದ ಅರ್ಜಿ ನಮೂನೆಯಲ್ಲಿ ಸಲ್ಲಿಸತಕ್ಕದ್ದು. ದಾಖಲಾತಿಗಳನ್ನು ಸ್ವಯಂ ದೃಢೀಕರಿಸಬೇಕು ಹಾಗೂ ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಲಕೋಟೆಯ ಮೇಲೆ ” ಗುತ್ತಿಗೆ ಆಧಾರದ ಮೇಲೆ ಪರಿವೀಕ್ಷಣಾ ಸಮಾಲೋಚಕರ ಹುದ್ದೆಗೆ ಅರ್ಜಿ ” ಎಂದು ನಮೂದಿಸುವುದು.

  • ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಕಿತ್ತೂರು ಬೆಳಗಾವಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

    ಹುದ್ದೆ : ಪಿ.ಜಿ.ಟಿ ( ಇಂಗ್ಲೀಷ್ ): ಬಿ.ಎಡ್ ನೊಂದಿಗೆ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ, ಯಾವುದೇ ಸಿ.ಬಿ.ಎಸ್.ಇ ಶಾಲೆಯಲ್ಲಿ IX ರಿಂದ XII ನೇ ತರಗತಿಗಳನ್ನು ಕಲಿಸಿದ ಅನುಭವ, ಪರಿಣಾಮಕಾರಿ ಬೋಧನಾ ವಿಧಾನದೊಂದಿಗೆ ಸಂಪೂರ್ಣ ವಿಷಯ ಜ್ಞಾನ ಮತ್ತು ಬೋಧನಾ ಸಾಮರ್ಥ್ಯ ಹೊಂದಿರಬೇಕು.

    ಮೆಸ್‌ಮ್ಯಾನೇಜರ್ : ಹೋಮ್ ಸೈನ್ಸ್ ನಲ್ಲಿ ಪದವಿ/ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಟರಿಂಗ್ ತಂತ್ರಜ್ಞಾನದಲ್ಲಿ ಡಿಪ್ಲೋಮಾ, ವಸತಿ ಶಾಲೆಯಲ್ಲಿ ಮೆಸ್ ನಿರ್ವಹಣೆಯ ಅನುಭವಕ್ಕೆ ಆದ್ಯತೆ ನೀಡಲಾಗುವುದು. ನಿವೃತ್ತ ರಕ್ಷಣಾ ಜೇ.ಸಿ.ಓ/ ಎನ್.ಸಿ.ಓ ( ಎ.ಎಸ್.ಸಿ/ ವಾಯುಸೇನೆಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

    ದ್ವಿತೀಯ ದರ್ಜೆ ಗುಮಾಸ್ತ : ಕನಿಷ್ಠ ಐದು ವರ್ಷಗಳ ಅನುಭವ ವಿದ್ಯಾರ್ಹತೆ. ಬಿ.ಕಾಂ, ಟ್ಯಾಲಿಯನ್ನು ನಿರ್ವಹಿಸುವ ಉತ್ತಮ ಜ್ಞಾನ ( ಆವೃತ್ತಿ9.0) ಇ ಆರ್ ಪಿ, ಇಂಗ್ಲೀಷ್ ಮತ್ತು ಡಿಪ್ಲೋಮಾದೊಂದಿಗೆ ಕನ್ನಡ ಟೈಪಿಂಗ್ ಅಗತ್ಯ.

    ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಸಂಬಳವನ್ನು ನಿಗದಿ ಪಡಿಸಲಾಗುತ್ತದೆ.

    ಆಹಾರ ಮತ್ತು ವಸತಿ ಸೌಕರ್ಯಗಳ ಲಭ್ಯತೆ ಉಂಟು.

    ಇತ್ತೀಚಿನ ಭಾವಚಿತ್ರದೊಂದಿಗೆ ಅಗತ್ಯ ದಾಖಲೆಗಳನ್ನು ಪ್ರಾಚಾರ್ಯರು ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆ, ಕಿತ್ತೂರು – 591115. ಜಿಲ್ಲೆ : ಬೆಳಗಾವಿ, ಇಲ್ಲಿಗೆ ಕಳುಹಿಸಿ : ಕೊನೆಯ ದಿನಾಂಕ : 05-08-2021

  • ಸೇನಾ ನೇಮಕಾತಿ ಪರೀಕ್ಷೆ ಮುಂದಕ್ಕೆ

    ಮೂಡುಬಿದಿರೆ ಆಳ್ವಾಸ್ ಕ್ಯಾಂಪಸ್ ನಲ್ಲಿ ಜು.25 ರಂದು ನಡೆಯಬೇಕಿದ್ದ ಆರ್ಮಿ ರಿಕ್ರೂಟ್ ಮೆಂಟ್ ಕಾಮನ್ ಎಂಟ್ರೆನ್ಸ್ ಎಕ್ಸಾಂ ( ಸಿಇಒ) ಅನ್ನು ಮುಂದೂಡಲಾಗಿದಡ. ಕೊರೊನಾ ಬಿಕ್ಕಟ್ಟು ಮತ್ತು ಭಾರೀ ಮಳೆಯ ಕಾರಣದಿಂದ ಮುಂದೂಡಲ್ಪಟ್ಟಿದ್ದೆ. ಹೊಸ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

  • ಬ್ಯಾಂಕ್ ಆಫ್ ಬರೋಡಾದಲ್ಲಿ ಚೀಫ್ ಎಕಾನಮಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

    ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಹುದ್ದೆ : ಚೀಫ್ ಎಕೊನಾಮಿಸ್ಟ್ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12-08-2021

    ಅವಧಿ : 3 ವರ್ಷಗಳ ಅವಧಿಯವರೆಗೆ.

    ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ವೆಬ್‌ಸೈಟ್‌ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12-08-2021